<p>ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೋಮುವಾದವನ್ನು ಸೋಲಿಸಿ, ದೇಶ ಉಳಿಸಿ ಸೌಹಾರ್ದ ಘೋಷಣೆ ಆಧಾರಿತ ಸಂಕಲ್ಪ ಯಾತ್ರೆ ಬುಧವಾರ ನಗರಕ್ಕೆ ಬಂದಾಗ ಇಲ್ಲಿನ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಸ್ವಾಗತಿಸಲಾಯಿತು.</p>.<p>ಈಶ್ವರ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದ ಶ್ರೀಪಾದ ಭಟ್ಟ, ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ ಎಚ್.ಪೂಜಾರ, ಎಐಟಿಯುಸಿಐ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜನ ಮತದಾನದ ಮೂಲಕ ತೀರ್ಪು ನೀಡುವ ಮೊದಲು ತಾವೇ ತೀರ್ಪು ನೀಡುವುದು ಸರ್ವಾಧಿಕಾರದ ಧೋರಣೆ’ ಎಂದರು.</p>.<p>‘ಸುಳ್ಳು ಮತ್ತು ದ್ವೇಷದ ಫ್ಯಾಕ್ಟರಿಯಿಂದ ಅನೇಕ ಸಶಸ್ತ್ರಗಳನ್ನು ಉತ್ಪಾದಿಸಿಕೊಂಡ ಬಿಜೆಪಿ 2019ರಲ್ಲಿ ಪುಲ್ವಾಮ ಘಟನೆಯನ್ನು ಮುಂಚೂಣಿಗೆ ತಂದಿತು. ಈ ಬಾರಿ ಶ್ರೀರಾಮನ ಮೂರ್ತಿ ಪ್ರತಿಸ್ಥಾಪನೆ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿ ಮತದಾರರನ್ನು ಮೋಡಿ ಮಾಡುತ್ತಿದೆ. ಮೋದಿ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಪಾಲಿನ ಹಣ ಕೊಡದೆ ಆರ್ಥಿಕ ಸರ್ವಾಧಿಕಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.</p>.<p>ಪ್ರಮುಖರಾದ ಬಸವರಾಜ ನರೇಗಲ್, ಸಂಜಯ ದಾಸ್, ಕಾಶಪ್ಪ ಚಲುವಾದಿ, ಲಿಂಗರಾಜ ಬೆಣಕಲ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೋಮುವಾದವನ್ನು ಸೋಲಿಸಿ, ದೇಶ ಉಳಿಸಿ ಸೌಹಾರ್ದ ಘೋಷಣೆ ಆಧಾರಿತ ಸಂಕಲ್ಪ ಯಾತ್ರೆ ಬುಧವಾರ ನಗರಕ್ಕೆ ಬಂದಾಗ ಇಲ್ಲಿನ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಸ್ವಾಗತಿಸಲಾಯಿತು.</p>.<p>ಈಶ್ವರ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದ ಶ್ರೀಪಾದ ಭಟ್ಟ, ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ ಎಚ್.ಪೂಜಾರ, ಎಐಟಿಯುಸಿಐ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜನ ಮತದಾನದ ಮೂಲಕ ತೀರ್ಪು ನೀಡುವ ಮೊದಲು ತಾವೇ ತೀರ್ಪು ನೀಡುವುದು ಸರ್ವಾಧಿಕಾರದ ಧೋರಣೆ’ ಎಂದರು.</p>.<p>‘ಸುಳ್ಳು ಮತ್ತು ದ್ವೇಷದ ಫ್ಯಾಕ್ಟರಿಯಿಂದ ಅನೇಕ ಸಶಸ್ತ್ರಗಳನ್ನು ಉತ್ಪಾದಿಸಿಕೊಂಡ ಬಿಜೆಪಿ 2019ರಲ್ಲಿ ಪುಲ್ವಾಮ ಘಟನೆಯನ್ನು ಮುಂಚೂಣಿಗೆ ತಂದಿತು. ಈ ಬಾರಿ ಶ್ರೀರಾಮನ ಮೂರ್ತಿ ಪ್ರತಿಸ್ಥಾಪನೆ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿ ಮತದಾರರನ್ನು ಮೋಡಿ ಮಾಡುತ್ತಿದೆ. ಮೋದಿ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಪಾಲಿನ ಹಣ ಕೊಡದೆ ಆರ್ಥಿಕ ಸರ್ವಾಧಿಕಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.</p>.<p>ಪ್ರಮುಖರಾದ ಬಸವರಾಜ ನರೇಗಲ್, ಸಂಜಯ ದಾಸ್, ಕಾಶಪ್ಪ ಚಲುವಾದಿ, ಲಿಂಗರಾಜ ಬೆಣಕಲ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>