<p>ತಾವರಗೇರಾ: ಸ್ಥಳೀಯ ಆರಾಧ್ಯ ದೈವ ಹಾಗೂ ಹಿಂದೂ ಮುಸ್ಲಿಂ ಸಮಾಜದ ಭಾವೈಕ್ಯದ ಶ್ಯಾಮೀದಲಿ ದರ್ಗಾ ಮತ್ತು ಹಜರತ್ ಸೈಯದ್ ಷಾ ಹಮಿದೋದ್ದಿನ್ ಖಾದ್ರಿ ರಹಮತುಲ್ಲಾ ಅಲೇಹ ಉರುಸ್ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿಂದ ಎಲ್ಲಾ ಸಮಾಜದ ನೇತೃತ್ವದಲ್ಲಿ ನಡೆಯಿತು.</p>.<p>ಶುಕ್ರವಾರ ಗಂಧ ಕಾರ್ಯಕ್ರಮ ನಡೆಸಲಾಯಿತು. ಶನಿವಾರ ದರ್ಗಾದಲ್ಲಿ ಮುತುವಲ್ಲಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.</p>.<p>ದರ್ಗಾಕ್ಕೆ ಬಂದ ಭಕ್ತರು ಸಕ್ಕರೆ ನೈವೇಧ್ಯ ಸಲ್ಲಿಸಿದರು. ಇನ್ನೂ ಹರಕೆ ಹೊತ್ತ ಕೆಲವರು ದೀಡ್ ನಮಸ್ಕಾರ ಹಾಕಿದರು. ನೈವೈದ್ಯ ಸಲ್ಲಿಸುವ ಸಲುವಾಗಿ ಭಕ್ತರು ಸಾಲಾಗಿ ಬರಲು ವ್ಯವಸ್ಥೆ ಮಾಡಲಾಗಿತ್ತು.</p>.<p>ಸ್ಥಳೀಯ ವಿವಿಧ ಸಮಾಜದ ಬಂಧುಗಳು ಉರುಸ್ ಕಾರ್ಯಕ್ರಮಗಳ ಜವಾಬ್ದಾರಿ ತೆಗೆದುಕೊಂಡು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ, ಕುಡಿಯುವ ನೀರು, ದೀಪಾಲಂಕಾರ, ನೆರಳಿನ ವ್ಯವಸ್ಥೆ ಮಾಡಿದ್ದರು.</p>.<p>ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ತಹಶೀಲ್ದಾರ್ ರವಿ ಎಸ್.ಅಂಗಡಿ ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳು ಹಾಗೂ ಹೊರ ರಾಜ್ಯದ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. </p>.<p>ಬಿಗಿ ಬಂದೋಬಸ್ತ್ ಕೊರತೆ: ಪಟ್ಟಣದಲ್ಲಿ ಲಕ್ಷಗಟ್ಟಲೆ ಭಕ್ತರು ಪಾಲ್ಗೊಳ್ಳುವ ಶ್ಯಾಮೀದಲಿ ದರ್ಗಾ ಉರುಸ್ನಲ್ಲಿ ಶನಿವಾರ ಜನರ ನಿಯಂತ್ರಣದ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡು ಬಂದಿತು.</p>.<p>ವಾಹನಗಳು ಅಲ್ಲಲ್ಲಿ ನಿಂತಿದ್ದು, ಗದ್ದಲದ ನಡುವೆಯೂ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸದೇ ಪೋನಿನಲ್ಲಿ ಮಾತನಾಡುತ್ತಾ ಕಾಲ ಕಳೆಯುವುದನ್ನು ಕಂಡ ಭಕ್ತರು ಕೆಂಡಾ ಮಂಡಲವಾದರು. ದರ್ಗಾ ಆವರಣದಲ್ಲಿ ಕೇವಲ ಇಬ್ಬರು ಹಾಗೂ ಮೂವರು ಪೊಲೀಸರನ್ನು ನಿಯೋಜಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾವರಗೇರಾ: ಸ್ಥಳೀಯ ಆರಾಧ್ಯ ದೈವ ಹಾಗೂ ಹಿಂದೂ ಮುಸ್ಲಿಂ ಸಮಾಜದ ಭಾವೈಕ್ಯದ ಶ್ಯಾಮೀದಲಿ ದರ್ಗಾ ಮತ್ತು ಹಜರತ್ ಸೈಯದ್ ಷಾ ಹಮಿದೋದ್ದಿನ್ ಖಾದ್ರಿ ರಹಮತುಲ್ಲಾ ಅಲೇಹ ಉರುಸ್ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿಂದ ಎಲ್ಲಾ ಸಮಾಜದ ನೇತೃತ್ವದಲ್ಲಿ ನಡೆಯಿತು.</p>.<p>ಶುಕ್ರವಾರ ಗಂಧ ಕಾರ್ಯಕ್ರಮ ನಡೆಸಲಾಯಿತು. ಶನಿವಾರ ದರ್ಗಾದಲ್ಲಿ ಮುತುವಲ್ಲಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.</p>.<p>ದರ್ಗಾಕ್ಕೆ ಬಂದ ಭಕ್ತರು ಸಕ್ಕರೆ ನೈವೇಧ್ಯ ಸಲ್ಲಿಸಿದರು. ಇನ್ನೂ ಹರಕೆ ಹೊತ್ತ ಕೆಲವರು ದೀಡ್ ನಮಸ್ಕಾರ ಹಾಕಿದರು. ನೈವೈದ್ಯ ಸಲ್ಲಿಸುವ ಸಲುವಾಗಿ ಭಕ್ತರು ಸಾಲಾಗಿ ಬರಲು ವ್ಯವಸ್ಥೆ ಮಾಡಲಾಗಿತ್ತು.</p>.<p>ಸ್ಥಳೀಯ ವಿವಿಧ ಸಮಾಜದ ಬಂಧುಗಳು ಉರುಸ್ ಕಾರ್ಯಕ್ರಮಗಳ ಜವಾಬ್ದಾರಿ ತೆಗೆದುಕೊಂಡು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ, ಕುಡಿಯುವ ನೀರು, ದೀಪಾಲಂಕಾರ, ನೆರಳಿನ ವ್ಯವಸ್ಥೆ ಮಾಡಿದ್ದರು.</p>.<p>ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ತಹಶೀಲ್ದಾರ್ ರವಿ ಎಸ್.ಅಂಗಡಿ ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳು ಹಾಗೂ ಹೊರ ರಾಜ್ಯದ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. </p>.<p>ಬಿಗಿ ಬಂದೋಬಸ್ತ್ ಕೊರತೆ: ಪಟ್ಟಣದಲ್ಲಿ ಲಕ್ಷಗಟ್ಟಲೆ ಭಕ್ತರು ಪಾಲ್ಗೊಳ್ಳುವ ಶ್ಯಾಮೀದಲಿ ದರ್ಗಾ ಉರುಸ್ನಲ್ಲಿ ಶನಿವಾರ ಜನರ ನಿಯಂತ್ರಣದ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡು ಬಂದಿತು.</p>.<p>ವಾಹನಗಳು ಅಲ್ಲಲ್ಲಿ ನಿಂತಿದ್ದು, ಗದ್ದಲದ ನಡುವೆಯೂ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸದೇ ಪೋನಿನಲ್ಲಿ ಮಾತನಾಡುತ್ತಾ ಕಾಲ ಕಳೆಯುವುದನ್ನು ಕಂಡ ಭಕ್ತರು ಕೆಂಡಾ ಮಂಡಲವಾದರು. ದರ್ಗಾ ಆವರಣದಲ್ಲಿ ಕೇವಲ ಇಬ್ಬರು ಹಾಗೂ ಮೂವರು ಪೊಲೀಸರನ್ನು ನಿಯೋಜಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>