<p><strong>ಕೊಪ್ಪಳ: </strong>ಕಳೆದ ಎರಡು ದಿನಗಳಿಂದ ಜಿಲ್ಲೆ ಸೇರಿದಂತೆ ತುಂಗಭದ್ರಾ ನದಿಪಾತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡು ಜನಜಾನುವಾರುಗಳು ಸಿಲುಕಿವೆ.</p>.<p>ಮಳೆಯಿಂದ ಮುನಿರಾಬಾದಿನ ಜಲಾಶಯ ಭರ್ತಿಯಾಗಿದ್ದು, 10 ಕ್ರೆಸ್ಟ್ ತೆಗೆದು ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ.</p>.<p>ನಡುಗಡ್ಡೆಗಳಲ್ಲಿ ತಾತ್ಕಾಲಿಕ ವಸತಿ ಮಾಡಿಕೊಂಡಿರುವ 10ಕ್ಕೂ ಹೆಚ್ಚು ದನಗಾಹಿಗಳು, 400 ಜಾನುವಾರುಗಳು ಸಿಲುಕಿಕೊಂಡಿವೆ.</p>.<p>ಇದರ ಪರಿಣಾಮ ಶಿವಪುರ, ಮಾರ್ಕೆಂಡೇಯ ನಡುಗಡ್ಡೆಗಳು ಸಂಪರ್ಕ ಕಡಿತಗೊಂಡಿವೆ.</p>.<p>ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಶಿವಪುರ, ಅಗಳಕೇರಾಕ್ಕೆ ಬರುತ್ತಿದ್ದ ದನಗಾಹಿಗಳು ಜಲಾವೃತವಾಗಿರುವುದರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಮಳೆ ನಿಂತರೆ ಮತ್ತು ನದಿಯ ನೀರಿನ ಹರಿವು ಕಡಿಮೆಯಾಗಲು ಎರಡು ದಿನಗಳು ಬೇಕಾಗುತ್ತಿವೆ.</p>.<p>ದನಗಾಹಿಗಳ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ಈ ಕುರಿತು ಮುನಿರಾಬಾದ್ ಪಿಎಸ್ಐ ಸುಪ್ರೀತ್ ಪಾಟೀಲ್ ದೂರವಾಣಿ ಮೂಲಕ ದನಗಾಹಿಗಳ ಸಂಪರ್ಕದಲ್ಲಿದ್ದು, ನೀರಿನ ಹರಿವು ಶೀಘ್ರ ಕಡಿಮೆಯಾಗಲಿದ್ದು, ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಕಳೆದ ಎರಡು ದಿನಗಳಿಂದ ಜಿಲ್ಲೆ ಸೇರಿದಂತೆ ತುಂಗಭದ್ರಾ ನದಿಪಾತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡು ಜನಜಾನುವಾರುಗಳು ಸಿಲುಕಿವೆ.</p>.<p>ಮಳೆಯಿಂದ ಮುನಿರಾಬಾದಿನ ಜಲಾಶಯ ಭರ್ತಿಯಾಗಿದ್ದು, 10 ಕ್ರೆಸ್ಟ್ ತೆಗೆದು ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ.</p>.<p>ನಡುಗಡ್ಡೆಗಳಲ್ಲಿ ತಾತ್ಕಾಲಿಕ ವಸತಿ ಮಾಡಿಕೊಂಡಿರುವ 10ಕ್ಕೂ ಹೆಚ್ಚು ದನಗಾಹಿಗಳು, 400 ಜಾನುವಾರುಗಳು ಸಿಲುಕಿಕೊಂಡಿವೆ.</p>.<p>ಇದರ ಪರಿಣಾಮ ಶಿವಪುರ, ಮಾರ್ಕೆಂಡೇಯ ನಡುಗಡ್ಡೆಗಳು ಸಂಪರ್ಕ ಕಡಿತಗೊಂಡಿವೆ.</p>.<p>ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಶಿವಪುರ, ಅಗಳಕೇರಾಕ್ಕೆ ಬರುತ್ತಿದ್ದ ದನಗಾಹಿಗಳು ಜಲಾವೃತವಾಗಿರುವುದರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಮಳೆ ನಿಂತರೆ ಮತ್ತು ನದಿಯ ನೀರಿನ ಹರಿವು ಕಡಿಮೆಯಾಗಲು ಎರಡು ದಿನಗಳು ಬೇಕಾಗುತ್ತಿವೆ.</p>.<p>ದನಗಾಹಿಗಳ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ಈ ಕುರಿತು ಮುನಿರಾಬಾದ್ ಪಿಎಸ್ಐ ಸುಪ್ರೀತ್ ಪಾಟೀಲ್ ದೂರವಾಣಿ ಮೂಲಕ ದನಗಾಹಿಗಳ ಸಂಪರ್ಕದಲ್ಲಿದ್ದು, ನೀರಿನ ಹರಿವು ಶೀಘ್ರ ಕಡಿಮೆಯಾಗಲಿದ್ದು, ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>