<p><strong>ಮದ್ದೂರು</strong>: ಮಾಜಿ ಸಚಿವ ಹಾಗೂ ಸಂಸದರಾದ ದಿ. ಅಂಬರೀಷ್ ರ ಪುತ್ರ ಅಭಿಷೇಕ್ ಹಾಗೂ ಅವೀವಾ ರ ಬೀಗರ ಔತಣ ಕೂಟವು ಸಾವಿರಾರು ಅಭಿಮಾನಿಗಳ ನಡುವೆ ಶುಕ್ರವಾರ ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಿತು.</p>.<p>ಕಾರ್ಯಕ್ರಮದ ಹಿನ್ನೆಲೆಯಲ್ಲಿ 4 ತಿಂಗಳ ಹಿಂದೆ ಪ್ರಧಾನಿ ಮೋದಿ ರವರ ಕಾರ್ಯಕ್ರಮ ನಡೆದಿದ್ದ ಜಾಗದಲ್ಲಿಯೇ ಸುಮಾರು 12 ರಿಂದ 15 ಎಕರೆ ಜಾಗದಲ್ಲಿ ವಿಶಾಲವಾದ ಜರ್ಮನ್ ಶಾಮಿಯಾನವನ್ನು ಹಾಗೂ ವೇದಿಕೆಯನ್ನು ಹಾಕಲಾಗಿತ್ತು.</p>.<p>ವೇದಿಕೆಯ ಮುಂದೆ ಅಂಬರೀಷ್ ರ ಭಾವಚಿತ್ರವನ್ನು ಹಾಕಲಾಗಿತ್ತು ಅಲ್ಲಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು, ಮಂಡ್ಯದ ಬಾಣಸಿಗರಾದ ಪ್ರಕಾಶ್ ಅಡುಗೆ ಜವಾಬ್ದಾರಿ ಹೊತ್ತಿದ್ದರು, ಸುಮಾರು 200 ಮಂದಿ ಅಡುಗೆ ಸಹಾಯಕರು, ನೂರಾರು ಮಂದಿ ಅಡುಗೆ ಮಾಡುವವರು ಹಾಗೂ 400 ಮಂದಿಊಟ ಬಡಿಸುವವರನ್ನು ನಿಯೋಜಿಲಾಸಲಾಗಿತ್ತು.</p>.<p>ಆರತಕ್ಷತೆ ವೇದಿಕೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದನಂತೆಯೇ ಸ್ವಲ್ಪ ಹೊತ್ತಲ್ಲೇ ಅಭಿಷೇಕ್ - ಅವೀವಾ ದಂಪತಿ ವೇದಿಕೆಯಿಂದ ಬೇರೆಡೆಗೆ ಹೊರಟರು, ಈ ವೇಳೆ ಅಭಿಷೇಕ್ ಅಂಬರೀಷ್ ಪತ್ನಿ ಅವೀವಾ ಪ್ರತಿಕ್ರಿಯಿಸಿ ಮಾತನಾಡಿ, ಇಷ್ಟೊಂದು, ಈ ರೀತಿಯ ಜನಸಂದಣಿಯನ್ನು ನಾನು ನೋಡಿರಲಿಲ್ಲ, ಮಂಡ್ಯ ಜನತೆಯು ಅಂಬರೀಷ್ ಮೇಲಿಟ್ಟಿದ್ದ ಅಭಿಮಾನ ಇಷ್ಟರಮಟ್ಟಕ್ಕೆ ಈಗಲೂ ಇದೆ ಎಂದು ಇದರಿಂದ ಅರ್ಥವಾಗುತ್ತದೆ ಎಂದರು.</p>.<p>ಅಭಿಷೇಕ್ ಅಂಬರೀಷ್ ಮಾತನಾಡಿ ನಮ್ಮ ತಂದೆ ಅಂಬರೀಷ್ ರವರಿಗೆ ನನ್ನ ಮದುವೆಯನ್ನು ಮಂಡ್ಯದ ಜನರ ಸಮ್ಮುಖದಲ್ಲಿ ಮಾಡಬೇಕೆಂಬ ಬಯಕೆಯಿತ್ತು ಅದರಂತೆ ಇಂದು ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಗೆಜ್ಜಲಗೆರೆ ಬಳಿ ಹಮ್ಮಿಕೊಂಡಿದ್ದೇವೆ ಎಂದರು.</p>.<p>ಸುಮಾರು 70 - 80 ಸಾವಿರ ಮಂದಿ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು, ಬಾಡೂಟ ಕ್ಕಾಗಿ ಜನರು ಪೊಲೀಸರನ್ನು ಲೆಕ್ಕಿಸದೇ ಮುಗಿ ಬಿದ್ದರು, ಈ ವೇಳೆ ತಳ್ಳಾಟ - ನೂಕಾಟ ಉಂಟಾಗಿ 4- 5 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಕೊಂಡರು.</p>.<p>ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು, ಸಂಸದೆ ಸುಮಲತಾ ಅಂಬರೀಷ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರ ನಟರಾದ ದೊಡ್ಡಣ್ಣ, ಮುಖಂಡರಾದ ಮದನ್, ಬೇಲೂರು ಸೋಮಶೇಖರ್, ಹನಕೆರೆ ಶಶಿ ಸೇರಿದಂತೆ ಇತರ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು</strong>: ಮಾಜಿ ಸಚಿವ ಹಾಗೂ ಸಂಸದರಾದ ದಿ. ಅಂಬರೀಷ್ ರ ಪುತ್ರ ಅಭಿಷೇಕ್ ಹಾಗೂ ಅವೀವಾ ರ ಬೀಗರ ಔತಣ ಕೂಟವು ಸಾವಿರಾರು ಅಭಿಮಾನಿಗಳ ನಡುವೆ ಶುಕ್ರವಾರ ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಿತು.</p>.<p>ಕಾರ್ಯಕ್ರಮದ ಹಿನ್ನೆಲೆಯಲ್ಲಿ 4 ತಿಂಗಳ ಹಿಂದೆ ಪ್ರಧಾನಿ ಮೋದಿ ರವರ ಕಾರ್ಯಕ್ರಮ ನಡೆದಿದ್ದ ಜಾಗದಲ್ಲಿಯೇ ಸುಮಾರು 12 ರಿಂದ 15 ಎಕರೆ ಜಾಗದಲ್ಲಿ ವಿಶಾಲವಾದ ಜರ್ಮನ್ ಶಾಮಿಯಾನವನ್ನು ಹಾಗೂ ವೇದಿಕೆಯನ್ನು ಹಾಕಲಾಗಿತ್ತು.</p>.<p>ವೇದಿಕೆಯ ಮುಂದೆ ಅಂಬರೀಷ್ ರ ಭಾವಚಿತ್ರವನ್ನು ಹಾಕಲಾಗಿತ್ತು ಅಲ್ಲಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು, ಮಂಡ್ಯದ ಬಾಣಸಿಗರಾದ ಪ್ರಕಾಶ್ ಅಡುಗೆ ಜವಾಬ್ದಾರಿ ಹೊತ್ತಿದ್ದರು, ಸುಮಾರು 200 ಮಂದಿ ಅಡುಗೆ ಸಹಾಯಕರು, ನೂರಾರು ಮಂದಿ ಅಡುಗೆ ಮಾಡುವವರು ಹಾಗೂ 400 ಮಂದಿಊಟ ಬಡಿಸುವವರನ್ನು ನಿಯೋಜಿಲಾಸಲಾಗಿತ್ತು.</p>.<p>ಆರತಕ್ಷತೆ ವೇದಿಕೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದನಂತೆಯೇ ಸ್ವಲ್ಪ ಹೊತ್ತಲ್ಲೇ ಅಭಿಷೇಕ್ - ಅವೀವಾ ದಂಪತಿ ವೇದಿಕೆಯಿಂದ ಬೇರೆಡೆಗೆ ಹೊರಟರು, ಈ ವೇಳೆ ಅಭಿಷೇಕ್ ಅಂಬರೀಷ್ ಪತ್ನಿ ಅವೀವಾ ಪ್ರತಿಕ್ರಿಯಿಸಿ ಮಾತನಾಡಿ, ಇಷ್ಟೊಂದು, ಈ ರೀತಿಯ ಜನಸಂದಣಿಯನ್ನು ನಾನು ನೋಡಿರಲಿಲ್ಲ, ಮಂಡ್ಯ ಜನತೆಯು ಅಂಬರೀಷ್ ಮೇಲಿಟ್ಟಿದ್ದ ಅಭಿಮಾನ ಇಷ್ಟರಮಟ್ಟಕ್ಕೆ ಈಗಲೂ ಇದೆ ಎಂದು ಇದರಿಂದ ಅರ್ಥವಾಗುತ್ತದೆ ಎಂದರು.</p>.<p>ಅಭಿಷೇಕ್ ಅಂಬರೀಷ್ ಮಾತನಾಡಿ ನಮ್ಮ ತಂದೆ ಅಂಬರೀಷ್ ರವರಿಗೆ ನನ್ನ ಮದುವೆಯನ್ನು ಮಂಡ್ಯದ ಜನರ ಸಮ್ಮುಖದಲ್ಲಿ ಮಾಡಬೇಕೆಂಬ ಬಯಕೆಯಿತ್ತು ಅದರಂತೆ ಇಂದು ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಗೆಜ್ಜಲಗೆರೆ ಬಳಿ ಹಮ್ಮಿಕೊಂಡಿದ್ದೇವೆ ಎಂದರು.</p>.<p>ಸುಮಾರು 70 - 80 ಸಾವಿರ ಮಂದಿ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು, ಬಾಡೂಟ ಕ್ಕಾಗಿ ಜನರು ಪೊಲೀಸರನ್ನು ಲೆಕ್ಕಿಸದೇ ಮುಗಿ ಬಿದ್ದರು, ಈ ವೇಳೆ ತಳ್ಳಾಟ - ನೂಕಾಟ ಉಂಟಾಗಿ 4- 5 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಕೊಂಡರು.</p>.<p>ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು, ಸಂಸದೆ ಸುಮಲತಾ ಅಂಬರೀಷ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರ ನಟರಾದ ದೊಡ್ಡಣ್ಣ, ಮುಖಂಡರಾದ ಮದನ್, ಬೇಲೂರು ಸೋಮಶೇಖರ್, ಹನಕೆರೆ ಶಶಿ ಸೇರಿದಂತೆ ಇತರ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>