<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕು ಆಡಳಿತ ಕೇಂದ್ರವಾದ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಅರಳಿ ಮರ ಬೆಳೆಯುತ್ತಿದೆ.</p>.<p>ಮಿನಿ ವಿಧಾನಸೌಧದ ಮೆಟ್ಟಲುಗಳ ನೇರಕ್ಕೆ, ಮೇಲಿನ ಅಂತಸ್ತಿನ ಎಡ ಭಾಗದಲ್ಲಿ ಮರ ಬೆಳೆಯಲಾರಂಭಿಸಿದೆ. ಈಗಾಗಲೇ 4 ಅಡಿ ಎತ್ತರದಷ್ಟು ಅರಳಿ ಮರ ಬೆಳೆದಿದ್ದು, ಅದರ ಬೇರುಗಳು ಕಟ್ಟಡದ ಒಳಕ್ಕೂ ಹಬ್ಬುತ್ತಿವೆ. ಹೀಗೇ ಬಿಟ್ಟರೆ ಕಟ್ಟಡದಲ್ಲಿ ಬಿರುಕು ಮೂಡುವ ಅಪಾಯವಿದೆ.</p>.<p>ಮಿನಿ ವಿಧಾನಸೌಧದ ಕಟ್ಟಡದ ಮೇಲೆ ಒಂದು ವರ್ಷದಿಂದಲೂ ಅರಳಿ ಮರ ಬೆಳೆಯುತ್ತಿದೆ. ತಹಶೀಲ್ದಾರ್ ಕಚೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿರುವ ಈ ಕಟ್ಟದಲ್ಲಿ ಜೇನುಗಳು ಕೂಡ ಗೂಡು ಕಟ್ಟಿವೆ. ಪ್ರತಿ ದಿನ ನೂರಾರು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಜೇನುಗಳು ದಾಳಿ ನಡೆಸುವ ಸಂಭವವೂ ಇದ್ದು, ಮರವನ್ನು ತೆಗೆಸುವ ಜತೆಗೆ ಜೇನು ಗೂಡನ್ನೂ ಖಾಲಿ ಮಾಡಿಸಬೇಕು. ಕಟ್ಟಡದ ಸುತ್ತ ಬೆಳೆದಿರುವ ಕಳೆ ಗಿಡಗಳನ್ನು ತೆಗೆಸಬೇಕು. ಅಧಿಕಾರಿಗಳು ಸ್ವಚ್ಛತೆ ಕಾಪಾಡಬೇಕು ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕು ಆಡಳಿತ ಕೇಂದ್ರವಾದ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಅರಳಿ ಮರ ಬೆಳೆಯುತ್ತಿದೆ.</p>.<p>ಮಿನಿ ವಿಧಾನಸೌಧದ ಮೆಟ್ಟಲುಗಳ ನೇರಕ್ಕೆ, ಮೇಲಿನ ಅಂತಸ್ತಿನ ಎಡ ಭಾಗದಲ್ಲಿ ಮರ ಬೆಳೆಯಲಾರಂಭಿಸಿದೆ. ಈಗಾಗಲೇ 4 ಅಡಿ ಎತ್ತರದಷ್ಟು ಅರಳಿ ಮರ ಬೆಳೆದಿದ್ದು, ಅದರ ಬೇರುಗಳು ಕಟ್ಟಡದ ಒಳಕ್ಕೂ ಹಬ್ಬುತ್ತಿವೆ. ಹೀಗೇ ಬಿಟ್ಟರೆ ಕಟ್ಟಡದಲ್ಲಿ ಬಿರುಕು ಮೂಡುವ ಅಪಾಯವಿದೆ.</p>.<p>ಮಿನಿ ವಿಧಾನಸೌಧದ ಕಟ್ಟಡದ ಮೇಲೆ ಒಂದು ವರ್ಷದಿಂದಲೂ ಅರಳಿ ಮರ ಬೆಳೆಯುತ್ತಿದೆ. ತಹಶೀಲ್ದಾರ್ ಕಚೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿರುವ ಈ ಕಟ್ಟದಲ್ಲಿ ಜೇನುಗಳು ಕೂಡ ಗೂಡು ಕಟ್ಟಿವೆ. ಪ್ರತಿ ದಿನ ನೂರಾರು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಜೇನುಗಳು ದಾಳಿ ನಡೆಸುವ ಸಂಭವವೂ ಇದ್ದು, ಮರವನ್ನು ತೆಗೆಸುವ ಜತೆಗೆ ಜೇನು ಗೂಡನ್ನೂ ಖಾಲಿ ಮಾಡಿಸಬೇಕು. ಕಟ್ಟಡದ ಸುತ್ತ ಬೆಳೆದಿರುವ ಕಳೆ ಗಿಡಗಳನ್ನು ತೆಗೆಸಬೇಕು. ಅಧಿಕಾರಿಗಳು ಸ್ವಚ್ಛತೆ ಕಾಪಾಡಬೇಕು ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>