<p><strong>ಮೇಲುಕೋಟೆ</strong>: ಎರಡು ವರ್ಷಗಳಿಂದ ಸರಿಯಾಗಿ ಮಳೆ ಬೆಳೆಯಿಲ್ಲದೆ ನಿರಂತರ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳು ಬಾಧೆ ನಿದ್ದೆಗೆಡಿಸಿದೆ. ಫಸಲು ಬೇಡ, ಮರ ಉಳಿದರೆ ಸಾಕು ಎನ್ನುವಂತೆ ಆಗಿದೆ ರೈತರ ಪರಿಸ್ಥಿತಿ.</p>.<p>ಹೋಬಳಿಯ ಮಾಣಿಕ್ಯನಹಳ್ಳಿ, ಬೆಳ್ಳಾಳೆ, ಹಳೇಬಿಡು, ಹೋಸಕೋಟೆ, ಮಹದೇಶ್ವರಪುರ, ಪಾಂಡವಪುರ ಭಾಗಗಳಲ್ಲಿ ಕಪ್ಪು ತಲೆ ಹುಳು ಬಾದೆ ಹಾವಳಿ ಹೆಚ್ಚಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮೋನೋಕ್ರೋಟೊಪಾಸ್ ಅಥವಾ ಅಜಾಡಿರೆಕ್ಟನ್ ಕೀಟನಾಶಕವನ್ನು ಸಿಂಪಡಣೆ ಮಾಡಲು ರೈತರಿಗೆ ತರಬೇತಿ ಆರಂಭಿಸಿದ್ದಾರೆ.</p>.<p>ದಶಕಗಳಿಂದ ಕಪ್ಪುತಲೆ ಹುಳು ಬಾಧೆಯಿಂದ ಮರಗಳ ಗರಿ, ಸುಳಿ ಒಣಗಿ ಇಳುವರಿ ಕುಂಠಿತವಾಗಿದೆ ಎಂಬುದು ರೈತರ ಅಳಲು. ಮರಗಳನ್ನು ರೋಗದಿಂದ ರಕ್ಷಿಸಲಾಗದೆ ಹಲವು ರೈತರು ಕಡಿಯಲು ಮುಂದಾಗುತ್ತಾರೆ. ನುಸಿಪೀಡೆ, ಬೆಂಕಿ ರೋಗ, ಗಿಡಗಳ ಸುಳಿ ರೋಗಗಳಿಂದಲೂ ರೈತರು ಕಂಗಾಲಾಗಿದ್ದಾರೆ.</p>.<p>‘ಹೋಬಳಿಯ 70ಕ್ಕೂಹೆಚ್ಚು ಎಕರೆಯಲ್ಲಿ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ತೋಟಗಾರಿಕೆ ಇಲಾಖೆ ಎಚ್ಚುತ್ತುಕೊಳ್ಳಬೇಕು’ ಎಂದು ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.</p>.<p>ಕಪ್ಪುತಲೆ ಹುಳು ವೈಜ್ಞಾನಿಕ ಹೆಸರು( ಒಪಿಸಿನ ಅರೆನೋಸೆಲ್ಲ) ಗಳು ತೆಂಗಿನ ಮರದ ಗರಿತಿನ್ನುವ ಹುಳುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಕೀಟ ತೆಂಗು ಬೆಳೆಯುವ ಕರಾವಳಿ ಹಾಗೂ ಮೈದಾನ ಪ್ರದೇಶದಲ್ಲಿ ತೆಂಗಿನ ಬೆಳೆಗೆ ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತದೆ.ಈ ಕೀಟ ಗಾಳಿಯಲ್ಲಿ ಹರಡುವ ಮೂಲಕ ಹೆಚ್ಚು ಪ್ರದೇಶದಲ್ಲಿ ತೆಂಗಿನ ಮರಗಳಿಗೆ ಹಾನಿಯನ್ನುಂಟು ಮಾಡುತ್ತದೆ.ಎಲೆಯ ಹಸಿರು ಭಾಗಗಳನ್ನು ಕೆರೆದು ತಿನ್ನುತ್ತದೆ. ಇದ್ದರಿಂದ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡು ಬರುತ್ತದೆ. ಈ ಹುಳಗಳನ್ನು ಹತೋಟಿ ಕೈಗೊಳ್ಳದಿದ್ದಾರೆ ಶೇ 60ರಷ್ಟು ಇಳುವರಿ ಕುಂಠಿತಗೊಂಡು ಕಾಲಕ್ರಮೇಣ ಮರ ಪ್ರಯೋಜನಗೆ ಬಾರದಂತಾಗುತ್ತದೆ.</p>.<p>ಕೀಟಗಳಿಂದ ಮರ ಉಳಿಸಿಕೊಳ್ಳುವ ವಿಧಾನ:</p>.<p>ತೆಂಗಿನ ಮರಗಳಲ್ಲಿ ಹಾನಿಯು ಪ್ರಾಥಮಿಕ ಹಂತದಲ್ಲಿದ್ದರೆ ಕೆಲವೇ ಗರಿಗಳಲ್ಲಿ ಕಂಡು ಬಂದಾಗ ತೋಟಗಳಲ್ಲಿ ಬಿದ್ದ ಗರಿಗಳು ಇತರೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿಡಬೇಕು. ಹುಳು ಇರುವ ಭಾಗಗಳು ಅಥವಾ ಗರಿಗಳನ್ನು ಕತ್ತರಿಸಿ ಸುಡುವುದು. ಕಪ್ಪುತಲೆ ಹುಳು ಮರಿಹುಳುವಿನ ಹಂತದಲ್ಲಿದಾಗ ಗೋನಿಯೋಜಸ್ ನೆಫಾಂಟಿಡಿಸ್ ಪರೋಪಜೀವಿಗಳನ್ನು ಪತ್ರಿ ಕೀಟಬಾಧಿತ ಮರಕ್ಕೆ ಸುಮಾರು 15ರಿಂದ 20ರಂತೆ ಬಿಡುಗಡೆ ಮಾಡಬೇಕು.</p>.<p>ರಾಸಾಯನಿಕ ಸಿಂಪಡಣೆ:</p>.<p>ಕೀಟ ಬಾಧೆಯ ತೀವ್ರತೆಯ ಹಂತ ತಲುಪಿ ಯಾಂತ್ರಿಕ ಹಾಗೂ ಜೈವಿಕ ವಿಧಾನಗಳಿಂದ ಹತೋಟಿಗೆ ಬಾರದಿದ್ದಲ್ಲಿ ರಾಸಾಯನಿಕ ವಿಧಾನ ಅವಶ್ಯಕವಾಗಿದ್ದು ಸಣ್ಣ ಮರಗಳಿಗೆ 15 ಮಿ.ಲೀ ಮೋನೋಕ್ರೋಟೋಫಾಸ್, ಕೀಟನಾಶಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳ ಕೆಳಭಾಗ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಬೇಕು.</p>.<p>ಮರಿಹುಳುಗಳಿಗೆ ತೆಂಗಿನ ಬೇರಿನ ಮೂಲಕ ಕೀಟನಾಶಗಳನ್ನು ಸಿಂಪಡಿಸಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ರೈತರಿಗೆ ತರಬೇತಿ ಆರಂಭಿಸಿದ್ದಾರೆ.</p>.<p>ಮಾಣಿಕ್ಯನಹಳ್ಳಿ, ಬೆಳ್ಳಾಳೆ, ಹಳೇಬೀಡು ಸೇರಿ ಹಲವು ಭಾಗಗಳಲ್ಲಿ ಸಮಸ್ಯೆ 70ಕ್ಕೂ ಹೆಚ್ಚು ಎಕರೆಯಲ್ಲಿ ಕಾಣಿಸಿಕೊಂಡ ರೋಗ ರೋಗ ನಿಯಂತ್ರಿಸದಿದ್ದರೆ ಇಳುವರಿ ಕುಂಠಿತ </p>.<p><strong>ಮೇಲುಕೋಟೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಅದು ಹೆದ್ದಾರಿ ಅಕ್ಕಪಕ್ಕದ ತೆಂಗಿನ ತೋಟಗಳಲ್ಲಿ ಕಪ್ಪು ತಲೆ ಹುಳು ಬಾಧೆ ಎದುರಾಗಿದೆ. ನಿಯಂತ್ರಣ ಈಗಾಗಲೇ ಇಲಾಖೆ ಎಲ್ಲಾ ರೀತಿ ಕ್ರಮಕೈಗೊಂಡಿದ್ದು ರೋಗ ಮತ್ತಷ್ಟು ಹೆಚ್ಚಾಗದಂತೆ ರೈತರಿಗೆ ಜಾಗೃತಿ ಮೂಡಿಸಲಾಗುವುದು </strong></p><p><strong>-ಸೌಮ್ಯ ಎಸ್.ಪಿ. ಹಿರಿಯ ತೋಟಗಾರಿಕೆ ನಿರ್ದೇಶಕಕಿ ಪಾಂಡವಪುರ</strong></p>.<p><strong>ಹೋಬಳಿ ಹೆದ್ದಾರಿಯ ಅಕ್ಕಪಕ್ಕದ ತೆಂಗಿನ ತೋಟಗಳ ಬಳಿಯಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ರೈತರು ಎಚ್ಚರ ವಹಿಸಬೇಕಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲೂ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು </strong></p><p><strong>- ಅಮೃತಿ ಲೋಕೇಶ್ ರೈತ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಎರಡು ವರ್ಷಗಳಿಂದ ಸರಿಯಾಗಿ ಮಳೆ ಬೆಳೆಯಿಲ್ಲದೆ ನಿರಂತರ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳು ಬಾಧೆ ನಿದ್ದೆಗೆಡಿಸಿದೆ. ಫಸಲು ಬೇಡ, ಮರ ಉಳಿದರೆ ಸಾಕು ಎನ್ನುವಂತೆ ಆಗಿದೆ ರೈತರ ಪರಿಸ್ಥಿತಿ.</p>.<p>ಹೋಬಳಿಯ ಮಾಣಿಕ್ಯನಹಳ್ಳಿ, ಬೆಳ್ಳಾಳೆ, ಹಳೇಬಿಡು, ಹೋಸಕೋಟೆ, ಮಹದೇಶ್ವರಪುರ, ಪಾಂಡವಪುರ ಭಾಗಗಳಲ್ಲಿ ಕಪ್ಪು ತಲೆ ಹುಳು ಬಾದೆ ಹಾವಳಿ ಹೆಚ್ಚಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮೋನೋಕ್ರೋಟೊಪಾಸ್ ಅಥವಾ ಅಜಾಡಿರೆಕ್ಟನ್ ಕೀಟನಾಶಕವನ್ನು ಸಿಂಪಡಣೆ ಮಾಡಲು ರೈತರಿಗೆ ತರಬೇತಿ ಆರಂಭಿಸಿದ್ದಾರೆ.</p>.<p>ದಶಕಗಳಿಂದ ಕಪ್ಪುತಲೆ ಹುಳು ಬಾಧೆಯಿಂದ ಮರಗಳ ಗರಿ, ಸುಳಿ ಒಣಗಿ ಇಳುವರಿ ಕುಂಠಿತವಾಗಿದೆ ಎಂಬುದು ರೈತರ ಅಳಲು. ಮರಗಳನ್ನು ರೋಗದಿಂದ ರಕ್ಷಿಸಲಾಗದೆ ಹಲವು ರೈತರು ಕಡಿಯಲು ಮುಂದಾಗುತ್ತಾರೆ. ನುಸಿಪೀಡೆ, ಬೆಂಕಿ ರೋಗ, ಗಿಡಗಳ ಸುಳಿ ರೋಗಗಳಿಂದಲೂ ರೈತರು ಕಂಗಾಲಾಗಿದ್ದಾರೆ.</p>.<p>‘ಹೋಬಳಿಯ 70ಕ್ಕೂಹೆಚ್ಚು ಎಕರೆಯಲ್ಲಿ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ತೋಟಗಾರಿಕೆ ಇಲಾಖೆ ಎಚ್ಚುತ್ತುಕೊಳ್ಳಬೇಕು’ ಎಂದು ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.</p>.<p>ಕಪ್ಪುತಲೆ ಹುಳು ವೈಜ್ಞಾನಿಕ ಹೆಸರು( ಒಪಿಸಿನ ಅರೆನೋಸೆಲ್ಲ) ಗಳು ತೆಂಗಿನ ಮರದ ಗರಿತಿನ್ನುವ ಹುಳುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಕೀಟ ತೆಂಗು ಬೆಳೆಯುವ ಕರಾವಳಿ ಹಾಗೂ ಮೈದಾನ ಪ್ರದೇಶದಲ್ಲಿ ತೆಂಗಿನ ಬೆಳೆಗೆ ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತದೆ.ಈ ಕೀಟ ಗಾಳಿಯಲ್ಲಿ ಹರಡುವ ಮೂಲಕ ಹೆಚ್ಚು ಪ್ರದೇಶದಲ್ಲಿ ತೆಂಗಿನ ಮರಗಳಿಗೆ ಹಾನಿಯನ್ನುಂಟು ಮಾಡುತ್ತದೆ.ಎಲೆಯ ಹಸಿರು ಭಾಗಗಳನ್ನು ಕೆರೆದು ತಿನ್ನುತ್ತದೆ. ಇದ್ದರಿಂದ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡು ಬರುತ್ತದೆ. ಈ ಹುಳಗಳನ್ನು ಹತೋಟಿ ಕೈಗೊಳ್ಳದಿದ್ದಾರೆ ಶೇ 60ರಷ್ಟು ಇಳುವರಿ ಕುಂಠಿತಗೊಂಡು ಕಾಲಕ್ರಮೇಣ ಮರ ಪ್ರಯೋಜನಗೆ ಬಾರದಂತಾಗುತ್ತದೆ.</p>.<p>ಕೀಟಗಳಿಂದ ಮರ ಉಳಿಸಿಕೊಳ್ಳುವ ವಿಧಾನ:</p>.<p>ತೆಂಗಿನ ಮರಗಳಲ್ಲಿ ಹಾನಿಯು ಪ್ರಾಥಮಿಕ ಹಂತದಲ್ಲಿದ್ದರೆ ಕೆಲವೇ ಗರಿಗಳಲ್ಲಿ ಕಂಡು ಬಂದಾಗ ತೋಟಗಳಲ್ಲಿ ಬಿದ್ದ ಗರಿಗಳು ಇತರೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿಡಬೇಕು. ಹುಳು ಇರುವ ಭಾಗಗಳು ಅಥವಾ ಗರಿಗಳನ್ನು ಕತ್ತರಿಸಿ ಸುಡುವುದು. ಕಪ್ಪುತಲೆ ಹುಳು ಮರಿಹುಳುವಿನ ಹಂತದಲ್ಲಿದಾಗ ಗೋನಿಯೋಜಸ್ ನೆಫಾಂಟಿಡಿಸ್ ಪರೋಪಜೀವಿಗಳನ್ನು ಪತ್ರಿ ಕೀಟಬಾಧಿತ ಮರಕ್ಕೆ ಸುಮಾರು 15ರಿಂದ 20ರಂತೆ ಬಿಡುಗಡೆ ಮಾಡಬೇಕು.</p>.<p>ರಾಸಾಯನಿಕ ಸಿಂಪಡಣೆ:</p>.<p>ಕೀಟ ಬಾಧೆಯ ತೀವ್ರತೆಯ ಹಂತ ತಲುಪಿ ಯಾಂತ್ರಿಕ ಹಾಗೂ ಜೈವಿಕ ವಿಧಾನಗಳಿಂದ ಹತೋಟಿಗೆ ಬಾರದಿದ್ದಲ್ಲಿ ರಾಸಾಯನಿಕ ವಿಧಾನ ಅವಶ್ಯಕವಾಗಿದ್ದು ಸಣ್ಣ ಮರಗಳಿಗೆ 15 ಮಿ.ಲೀ ಮೋನೋಕ್ರೋಟೋಫಾಸ್, ಕೀಟನಾಶಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳ ಕೆಳಭಾಗ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಬೇಕು.</p>.<p>ಮರಿಹುಳುಗಳಿಗೆ ತೆಂಗಿನ ಬೇರಿನ ಮೂಲಕ ಕೀಟನಾಶಗಳನ್ನು ಸಿಂಪಡಿಸಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ರೈತರಿಗೆ ತರಬೇತಿ ಆರಂಭಿಸಿದ್ದಾರೆ.</p>.<p>ಮಾಣಿಕ್ಯನಹಳ್ಳಿ, ಬೆಳ್ಳಾಳೆ, ಹಳೇಬೀಡು ಸೇರಿ ಹಲವು ಭಾಗಗಳಲ್ಲಿ ಸಮಸ್ಯೆ 70ಕ್ಕೂ ಹೆಚ್ಚು ಎಕರೆಯಲ್ಲಿ ಕಾಣಿಸಿಕೊಂಡ ರೋಗ ರೋಗ ನಿಯಂತ್ರಿಸದಿದ್ದರೆ ಇಳುವರಿ ಕುಂಠಿತ </p>.<p><strong>ಮೇಲುಕೋಟೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಅದು ಹೆದ್ದಾರಿ ಅಕ್ಕಪಕ್ಕದ ತೆಂಗಿನ ತೋಟಗಳಲ್ಲಿ ಕಪ್ಪು ತಲೆ ಹುಳು ಬಾಧೆ ಎದುರಾಗಿದೆ. ನಿಯಂತ್ರಣ ಈಗಾಗಲೇ ಇಲಾಖೆ ಎಲ್ಲಾ ರೀತಿ ಕ್ರಮಕೈಗೊಂಡಿದ್ದು ರೋಗ ಮತ್ತಷ್ಟು ಹೆಚ್ಚಾಗದಂತೆ ರೈತರಿಗೆ ಜಾಗೃತಿ ಮೂಡಿಸಲಾಗುವುದು </strong></p><p><strong>-ಸೌಮ್ಯ ಎಸ್.ಪಿ. ಹಿರಿಯ ತೋಟಗಾರಿಕೆ ನಿರ್ದೇಶಕಕಿ ಪಾಂಡವಪುರ</strong></p>.<p><strong>ಹೋಬಳಿ ಹೆದ್ದಾರಿಯ ಅಕ್ಕಪಕ್ಕದ ತೆಂಗಿನ ತೋಟಗಳ ಬಳಿಯಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ರೈತರು ಎಚ್ಚರ ವಹಿಸಬೇಕಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲೂ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು </strong></p><p><strong>- ಅಮೃತಿ ಲೋಕೇಶ್ ರೈತ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>