ಕ್ರಮಕ್ಕೆ ಆಗ್ರಹ:
ಚೆನ್ನೇಗೌಡ ಮನೆ ಉತ್ತರ ಭಾಗಕ್ಕೆ ರಸ್ತೆಯಿದೆ. ಆದರೆ ಅದರಲ್ಲಿ ಅವರು ತಿರುಗಾಡುವುದಿಲ್ಲ ಪೂರ್ವಕ್ಕೆ ಇರುವ ಶಾಲಾ ತಡೆಗೋಡೆಯನ್ನು ಉರುಳಿಸಿ ದಾರಿ ಮಾಡಿಕೊಳ್ಳುತ್ತೇನೆ ಎಂಬುದನ್ನು ಗ್ರಾಮದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದ, ಜೊತೆಗೆ ಈ ನಮ್ಮ ಶಾಲೆಯು ಕಾಂಪೌಂಡ್ ಹಾಕಿಸಿ 40 ವರ್ಷ ಆಗಿದೆ. ಈ ವ್ಯಕ್ತಿಯು ಮನೆ ಕಟ್ಟಿ ಆರೇಳು ವರ್ಷ ಕಳೆದಿದೆ, ಇಷ್ಟೆಲ್ಲಾ ಅವಾಂತರ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮದ ಮುಖಂಡರಾದ ಚಂದ್ರು, ಶ್ರೀಧರ್ ಒತ್ತಾಯಿಸಿದರು.