<p><strong>ಕೆ.ಆರ್.ಪೇಟೆ:</strong> ವಯನಾಡ್ ಭೂಕುಸಿತದಲ್ಲಿ ಸಂತ್ರಸ್ತರಾಗಿರುವ ತಾಲ್ಲೂಕಿನ ಕತ್ತರಘಟ್ಟದ ಝಾನ್ಸಿರಾಣಿ ಕುಟುಂಬದವರನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.</p>.<p>ಗ್ರಾಮದ ನಿವಾಸಿಗಳಾದ ಲೀಲಾವತಿ ಹಾಗೂ ಚಿಕ್ಕ ಮಗು ನಿಹಾಲ್ ಮರಣ ಹೊಂದಿದ ಸುದ್ದಿ ತಿಳಿದ ನಿಖಿಲ್ ಕುಮಾರಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದರು, ಜೊತೆಗೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಇದ್ದರು.</p>.<p> ‘ಕುಟುಂಬದ ಆಧಾರಸ್ಥಂಭವಾಗಿದ್ದ ಅಮ್ಮ ಲೀಲಾವತಿ ಮತ್ತು ಬಾಳಿ ಬದುಕುವ ಮುನ್ನವೇ ಸಾವನ್ನಪ್ಪಿದ ಪುಟ್ಟ ಕಂದ ನಿಹಾಲ್ ಪಾರ್ಥಿವ ಶರೀರವನ್ನು ನೋಡುವವರೆಗೆ ಮನಸ್ಸಿಗೆ ನೆಮ್ಮದಿ ಇಲ್ಲ. ಸಹಾಯ ಮಾಡುವುದಾದರೆ ಕೇರಳದಿಂದ ಕರ್ನಾಟಕಕ್ಕೆ ಸತ್ತವರ ದೇಹ ತರಲು ವ್ಯವಸ್ಥೆ ಮಾಡಿ ಅಂತಿಮದರ್ಶನ ಮಾಡುವ ಅವಕಾಶ ಕಲ್ಪಿಸಿ’ಎಂದು ಮಗಳು ಮಮತಾ ಕಣ್ಣೀರಿಟ್ಟ ದೃಷ್ಯ ಮನಕಲುಕುವಂತಿತ್ತು.</p>.<p>ನಿಖಿಲ್ ಕುಮಾರಸ್ವಾಮಿ ಮಾತನಾಡಿ,‘ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಅವರ ಸೂಚನೆಯಂತೆ ಇಲ್ಲಿಗೆ ಬಂದಿರುವೆ ತಂದೆ ಕೇರಳ ರಾಜ್ಯದ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಹಾಗಾಗಿ, ಮೃತಪಟ್ಟವರ ದೇಹ ತರುವ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ತಾವು ಆ ನೋವಿನ ಸಂಕಟದಿಂದ ಹೊರಬನ್ನಿ, ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜು ಅವರೊಂದಿಗೆ ಮಾತನಾಡಿ ಕುಟುಂಬಕ್ಕ ಎಲ್ಲಾ ರೀತಿಯ ಪರಿಹಾರ ದೊರಕಿಸಿಕೊಡಲಾಗುವುದು’ ಎಂದರು.</p>.<p>ಶಾಸಕ ಎಚ್.ಟಿ.ಮಂಜು ಮಾತನಾಡಿ,‘ಮರಣ ಹೊಂದಿದ ಮೃತ ದೇಹಗಳನ್ನು ಕತ್ತರಘಟ್ಟ ಗ್ರಾಮಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ನಿಮ್ಮ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಧೈರ್ಯವಾಗಿರಿ’ ಎಂದು ಸಾಂತ್ವನ ಹೇಳಿದರು.</p>.<p>ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅದ್ಯಕ್ಷ ಜಾನಕೀರಾಂ, ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಎಂ.ಬಿ.ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಶೀಳನೆರೆ ಮೋಹನ್, ಗ್ರಾಮಪಂಚಾಯಿತಿ ಸದಸ್ಯ ಪರಮೇಶ್ ಇದ್ದರು.</p>.<p>ಪಾದಯಾತ್ರೆ ಬಗ್ಗೆ ಚರ್ಚಿಸಿ ತೀರ್ಮಾನ: ರಾಜ್ಯ ಸರ್ಕಾರದ ವಿರುದ್ಧ ನಡೆಸಲು ಉದ್ದೇಶಿಸಿರುವ ಪಾದಾಯಾತ್ರೆ ಸಂಬಂಧ ಭಾಗವಹಿಸಬೇಕೇ ಬೇಡವೆ ಎಂಬುದರ ಬಗ್ಗೆ ವರಿಷ್ಟರು ತೀರ್ಮಾನಿಸುತ್ತಾರೆ. ಈ ಸಂಬಂಧ ಜೆ.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಲ್ಪಿ ಸಭೆ ನಡೆದಿದೆ. ರಾಜ್ಯದಲ್ಲಿ ಮಳೆಯಾಗುತಿದ್ದು ಬೆಳೆ ಹಾನಿಯಾಗುತ್ತಿದೆ. ನಮ್ಮದು ರೈತರ ಪಕ್ಷವಾಗಿರುವುದರಿಂದ ಚರ್ಚಿಸಿ ತೀರ್ಮಾನಿಸಲಾಗುವದೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ:</strong> ವಯನಾಡ್ ಭೂಕುಸಿತದಲ್ಲಿ ಸಂತ್ರಸ್ತರಾಗಿರುವ ತಾಲ್ಲೂಕಿನ ಕತ್ತರಘಟ್ಟದ ಝಾನ್ಸಿರಾಣಿ ಕುಟುಂಬದವರನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.</p>.<p>ಗ್ರಾಮದ ನಿವಾಸಿಗಳಾದ ಲೀಲಾವತಿ ಹಾಗೂ ಚಿಕ್ಕ ಮಗು ನಿಹಾಲ್ ಮರಣ ಹೊಂದಿದ ಸುದ್ದಿ ತಿಳಿದ ನಿಖಿಲ್ ಕುಮಾರಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದರು, ಜೊತೆಗೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಇದ್ದರು.</p>.<p> ‘ಕುಟುಂಬದ ಆಧಾರಸ್ಥಂಭವಾಗಿದ್ದ ಅಮ್ಮ ಲೀಲಾವತಿ ಮತ್ತು ಬಾಳಿ ಬದುಕುವ ಮುನ್ನವೇ ಸಾವನ್ನಪ್ಪಿದ ಪುಟ್ಟ ಕಂದ ನಿಹಾಲ್ ಪಾರ್ಥಿವ ಶರೀರವನ್ನು ನೋಡುವವರೆಗೆ ಮನಸ್ಸಿಗೆ ನೆಮ್ಮದಿ ಇಲ್ಲ. ಸಹಾಯ ಮಾಡುವುದಾದರೆ ಕೇರಳದಿಂದ ಕರ್ನಾಟಕಕ್ಕೆ ಸತ್ತವರ ದೇಹ ತರಲು ವ್ಯವಸ್ಥೆ ಮಾಡಿ ಅಂತಿಮದರ್ಶನ ಮಾಡುವ ಅವಕಾಶ ಕಲ್ಪಿಸಿ’ಎಂದು ಮಗಳು ಮಮತಾ ಕಣ್ಣೀರಿಟ್ಟ ದೃಷ್ಯ ಮನಕಲುಕುವಂತಿತ್ತು.</p>.<p>ನಿಖಿಲ್ ಕುಮಾರಸ್ವಾಮಿ ಮಾತನಾಡಿ,‘ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಅವರ ಸೂಚನೆಯಂತೆ ಇಲ್ಲಿಗೆ ಬಂದಿರುವೆ ತಂದೆ ಕೇರಳ ರಾಜ್ಯದ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಹಾಗಾಗಿ, ಮೃತಪಟ್ಟವರ ದೇಹ ತರುವ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ತಾವು ಆ ನೋವಿನ ಸಂಕಟದಿಂದ ಹೊರಬನ್ನಿ, ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜು ಅವರೊಂದಿಗೆ ಮಾತನಾಡಿ ಕುಟುಂಬಕ್ಕ ಎಲ್ಲಾ ರೀತಿಯ ಪರಿಹಾರ ದೊರಕಿಸಿಕೊಡಲಾಗುವುದು’ ಎಂದರು.</p>.<p>ಶಾಸಕ ಎಚ್.ಟಿ.ಮಂಜು ಮಾತನಾಡಿ,‘ಮರಣ ಹೊಂದಿದ ಮೃತ ದೇಹಗಳನ್ನು ಕತ್ತರಘಟ್ಟ ಗ್ರಾಮಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ನಿಮ್ಮ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಧೈರ್ಯವಾಗಿರಿ’ ಎಂದು ಸಾಂತ್ವನ ಹೇಳಿದರು.</p>.<p>ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅದ್ಯಕ್ಷ ಜಾನಕೀರಾಂ, ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಎಂ.ಬಿ.ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಶೀಳನೆರೆ ಮೋಹನ್, ಗ್ರಾಮಪಂಚಾಯಿತಿ ಸದಸ್ಯ ಪರಮೇಶ್ ಇದ್ದರು.</p>.<p>ಪಾದಯಾತ್ರೆ ಬಗ್ಗೆ ಚರ್ಚಿಸಿ ತೀರ್ಮಾನ: ರಾಜ್ಯ ಸರ್ಕಾರದ ವಿರುದ್ಧ ನಡೆಸಲು ಉದ್ದೇಶಿಸಿರುವ ಪಾದಾಯಾತ್ರೆ ಸಂಬಂಧ ಭಾಗವಹಿಸಬೇಕೇ ಬೇಡವೆ ಎಂಬುದರ ಬಗ್ಗೆ ವರಿಷ್ಟರು ತೀರ್ಮಾನಿಸುತ್ತಾರೆ. ಈ ಸಂಬಂಧ ಜೆ.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಲ್ಪಿ ಸಭೆ ನಡೆದಿದೆ. ರಾಜ್ಯದಲ್ಲಿ ಮಳೆಯಾಗುತಿದ್ದು ಬೆಳೆ ಹಾನಿಯಾಗುತ್ತಿದೆ. ನಮ್ಮದು ರೈತರ ಪಕ್ಷವಾಗಿರುವುದರಿಂದ ಚರ್ಚಿಸಿ ತೀರ್ಮಾನಿಸಲಾಗುವದೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>