<p><strong>ಶ್ರೀರಂಗಪಟ್ಟಣ</strong>: ಲೋಕಪಾವನಿ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ ಖಾಲಿ ಎತ್ತಿನ ಗಾಡಿಯನ್ನು ಪೊಲೀಸರು ಹಾಗೂ ಸ್ಥಳೀಯರು ಬುಧವಾರ ರಕ್ಷಿಸಿದರು.</p><p>ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ರಾಜು ಅವರಿಗೆ ಸೇರಿದ ಖಾಲಿ ಎತ್ತಿನ ಗಾಡಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಗಾಡಿಯನ್ನು ತೊಳೆಯಲು ರಾಜು ಬಾಬುರಾಯನಕೊಪ್ಪಲು ಬಳಿ ಹರಿಯುವ ಲೋಕಪಾವನಿ ನದಿಗೆ ಎತ್ತುಗಳ ಸಹಿತ ಗಾಡಿಯನ್ನು ಇಳಿಸಿದಾಗ ಈ ಘಟನೆ ನಡೆಯಿತು. </p><p>ನೀರಿನ ಸೆಳೆತ ಹೆಚ್ಚಾದುದನ್ನು ಗಮನಿಸಿದ ರಾಜು ತಕ್ಷಣ ಎತ್ತುಗಳ ಹಗ್ಗಗಳನ್ನು ಬಿಚ್ಚಿದರು. ಎತ್ತುಗಳು ಈಜಿ ದಡ ಸೇರಿದವು. ರಾಜು ಕೂಡ ಈಜಿಕೊಂಡು ದಡಕ್ಕೆ ಬಂದರು. ಆದರೆ ಗಾಡಿ ಸುಮಾರು 100 ಮೀಟರ್ ದೂರ ಕೊಚ್ಚಿಕೊಂಡು ಹೋಗಿ ಸೇತುವೆ ಸಿಕ್ಕಿಕೊಂಡಿತ್ತು.</p><p>ಅಕ್ಕಪಕ್ಕದ ಗ್ರಾಮಗಳ ಜನರು ಗಾಡಿಯನ್ನು ದಡಕ್ಕೆ ತರಲು ಯತ್ನಿಸಿ ವಿಫಲರಾದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ತರಿಸಿ ಗಾಡಿಯನ್ನು ಸುರಕ್ಷಿತವಾಗಿ ನದಿಯಿಂದ ಮೇಲೆ ಎತ್ತಿದರು.</p><p>ನಾಗಮಂಗಲ ತಾಲ್ಲೂಕಿನಲ್ಲಿ ಹುಟ್ಟುವ ಲೋಕಪಾವನಿ ನದಿ ಕಳೆದ ಒಂದು ವಾರದಿಂದ ಮೈದುಂಬಿ ಹರಿಯುತ್ತಿದೆ. ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಬೀಳುವ ಮಳೆ ನೀರು ಈ ನದಿಗೆ ಸೇರುತ್ತಿದೆ. ದಿನದಿಂದ ದಿನಕ್ಕೆ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ</strong>: ಲೋಕಪಾವನಿ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ ಖಾಲಿ ಎತ್ತಿನ ಗಾಡಿಯನ್ನು ಪೊಲೀಸರು ಹಾಗೂ ಸ್ಥಳೀಯರು ಬುಧವಾರ ರಕ್ಷಿಸಿದರು.</p><p>ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ರಾಜು ಅವರಿಗೆ ಸೇರಿದ ಖಾಲಿ ಎತ್ತಿನ ಗಾಡಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಗಾಡಿಯನ್ನು ತೊಳೆಯಲು ರಾಜು ಬಾಬುರಾಯನಕೊಪ್ಪಲು ಬಳಿ ಹರಿಯುವ ಲೋಕಪಾವನಿ ನದಿಗೆ ಎತ್ತುಗಳ ಸಹಿತ ಗಾಡಿಯನ್ನು ಇಳಿಸಿದಾಗ ಈ ಘಟನೆ ನಡೆಯಿತು. </p><p>ನೀರಿನ ಸೆಳೆತ ಹೆಚ್ಚಾದುದನ್ನು ಗಮನಿಸಿದ ರಾಜು ತಕ್ಷಣ ಎತ್ತುಗಳ ಹಗ್ಗಗಳನ್ನು ಬಿಚ್ಚಿದರು. ಎತ್ತುಗಳು ಈಜಿ ದಡ ಸೇರಿದವು. ರಾಜು ಕೂಡ ಈಜಿಕೊಂಡು ದಡಕ್ಕೆ ಬಂದರು. ಆದರೆ ಗಾಡಿ ಸುಮಾರು 100 ಮೀಟರ್ ದೂರ ಕೊಚ್ಚಿಕೊಂಡು ಹೋಗಿ ಸೇತುವೆ ಸಿಕ್ಕಿಕೊಂಡಿತ್ತು.</p><p>ಅಕ್ಕಪಕ್ಕದ ಗ್ರಾಮಗಳ ಜನರು ಗಾಡಿಯನ್ನು ದಡಕ್ಕೆ ತರಲು ಯತ್ನಿಸಿ ವಿಫಲರಾದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ತರಿಸಿ ಗಾಡಿಯನ್ನು ಸುರಕ್ಷಿತವಾಗಿ ನದಿಯಿಂದ ಮೇಲೆ ಎತ್ತಿದರು.</p><p>ನಾಗಮಂಗಲ ತಾಲ್ಲೂಕಿನಲ್ಲಿ ಹುಟ್ಟುವ ಲೋಕಪಾವನಿ ನದಿ ಕಳೆದ ಒಂದು ವಾರದಿಂದ ಮೈದುಂಬಿ ಹರಿಯುತ್ತಿದೆ. ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಬೀಳುವ ಮಳೆ ನೀರು ಈ ನದಿಗೆ ಸೇರುತ್ತಿದೆ. ದಿನದಿಂದ ದಿನಕ್ಕೆ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>