<p><strong>ಮೈಸೂರು: ‘</strong>ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಕಾರಣರಾದ, ಪ್ರಾಧಿಕಾರದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಬ್ಬರೂ 50:50 ನಿಯಮದಡಿ ಬಿಲ್ಡರ್ ಮಂಜುನಾಥ್, ನವೀನ್ ಬೋಸ್ ಹಾಗೂ ರಾಕೇಶ್ ಪಾಪಣ್ಣ ಸೇರಿದಂತೆ ಹಲವರಿಗೆ ನಿಯಮಬಾಹಿರವಾಗಿ ನಿವೇಶನಗಳನ್ನು ವಿತರಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ್ದೆಂದು ಹೇಳಲಾಗುವ ಕೆಸರೆ ಸರ್ವೆ ಸಂಖ್ಯೆ 464ರ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ದಾಖಲಾತಿಗಳಲ್ಲಿರುವ ಅಧಿಕಾರಿಗಳ ಸಹಿ ಅನುಮಾನಾಸ್ಪದವಾಗಿದೆ. ಅವುಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದು ಕ್ರಮ ವಹಿಸಬೇಕೆಂದು ಮತ್ತೊಂದು ಮನವಿಯನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.</p>.<p>‘ಮುಖ್ಯಮಂತ್ರಿ ಪತ್ನಿಗೆ ನೀಡಿದ್ದ ನಿವೇಶನಗಳನ್ನು ನಿದರ್ಶನವಾಗಿಟ್ಟುಕೊಂಡು, ಮುಡಾದ ಎಲ್ಲ ಪ್ರಕರಣಗಳ ಮೇಲೂ ಕ್ರಮ ವಹಿಸಬೇಕು. ನಕಲಿ ದಾಖಲೆ ಆಧರಿಸಿ ನಿವೇಶನ ಹಂಚಿಕೆ ಮಾಡಿದವರನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು. </p>.<p>ಬಿಲ್ಡರ್ ಮಂಜುನಾಥ್ ವಿರುದ್ಧ ದೂರು: ‘ಬಿಲ್ಡರ್ ಮಂಜುನಾಥ್ ಅವರ ವಿರುದ್ಧ ವಿಡಿಯೊ ಸಹಿತ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೇನೆ’ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.</p>.<p>‘ಶಿವಣ್ಣ ಎಂಬುವರಿಂದ ಮಂಜುನಾಥ್ ಅವರ ಸಹಾಯಕ ₹ 25 ಲಕ್ಷ ಪಡೆಯುತ್ತಿರುವ ವಿಡಿಯೊ ಅದು. ಅದನ್ನು ಆಧರಿಸಿ ಇ.ಡಿಗೆ ಮನವಿ ಪತ್ರವನ್ನು ಮೊದಲೇ ನೀಡಿದ್ದೆ. ಅದಲ್ಲದೆ, 30 ವರ್ಷದ ಹಿಂದೆ ಬಡಾವಣೆ ನಿರ್ಮಾಣ ವೇಳೆ ಸುಳ್ಳು ಕ್ರಯಪತ್ರಗಳನ್ನು ಕೊಟ್ಟು 50:50 ಅನುಪಾತದಲ್ಲಿ ನಿವೇಶನ ಕೊಡಬೇಕೆಂದು ಮುಡಾಕ್ಕೆ ಮನವಿ ಮಾಡಿ ಅಕ್ರಮವಾಗಿ ಹಲವರು ನಿವೇಶನ ಪಡೆದಿದ್ದಾರೆ. ಅದೆಲ್ಲದರ ದಾಖಲೆಗಳನ್ನು ಇ.ಡಿಗೆ ನೀಡಿದ್ದೇನೆ. ಅದನ್ನು ಆಧರಿಸಿಯೇ ಶೋಧ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಕಾರಣರಾದ, ಪ್ರಾಧಿಕಾರದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಬ್ಬರೂ 50:50 ನಿಯಮದಡಿ ಬಿಲ್ಡರ್ ಮಂಜುನಾಥ್, ನವೀನ್ ಬೋಸ್ ಹಾಗೂ ರಾಕೇಶ್ ಪಾಪಣ್ಣ ಸೇರಿದಂತೆ ಹಲವರಿಗೆ ನಿಯಮಬಾಹಿರವಾಗಿ ನಿವೇಶನಗಳನ್ನು ವಿತರಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ್ದೆಂದು ಹೇಳಲಾಗುವ ಕೆಸರೆ ಸರ್ವೆ ಸಂಖ್ಯೆ 464ರ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ದಾಖಲಾತಿಗಳಲ್ಲಿರುವ ಅಧಿಕಾರಿಗಳ ಸಹಿ ಅನುಮಾನಾಸ್ಪದವಾಗಿದೆ. ಅವುಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದು ಕ್ರಮ ವಹಿಸಬೇಕೆಂದು ಮತ್ತೊಂದು ಮನವಿಯನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.</p>.<p>‘ಮುಖ್ಯಮಂತ್ರಿ ಪತ್ನಿಗೆ ನೀಡಿದ್ದ ನಿವೇಶನಗಳನ್ನು ನಿದರ್ಶನವಾಗಿಟ್ಟುಕೊಂಡು, ಮುಡಾದ ಎಲ್ಲ ಪ್ರಕರಣಗಳ ಮೇಲೂ ಕ್ರಮ ವಹಿಸಬೇಕು. ನಕಲಿ ದಾಖಲೆ ಆಧರಿಸಿ ನಿವೇಶನ ಹಂಚಿಕೆ ಮಾಡಿದವರನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು. </p>.<p>ಬಿಲ್ಡರ್ ಮಂಜುನಾಥ್ ವಿರುದ್ಧ ದೂರು: ‘ಬಿಲ್ಡರ್ ಮಂಜುನಾಥ್ ಅವರ ವಿರುದ್ಧ ವಿಡಿಯೊ ಸಹಿತ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೇನೆ’ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.</p>.<p>‘ಶಿವಣ್ಣ ಎಂಬುವರಿಂದ ಮಂಜುನಾಥ್ ಅವರ ಸಹಾಯಕ ₹ 25 ಲಕ್ಷ ಪಡೆಯುತ್ತಿರುವ ವಿಡಿಯೊ ಅದು. ಅದನ್ನು ಆಧರಿಸಿ ಇ.ಡಿಗೆ ಮನವಿ ಪತ್ರವನ್ನು ಮೊದಲೇ ನೀಡಿದ್ದೆ. ಅದಲ್ಲದೆ, 30 ವರ್ಷದ ಹಿಂದೆ ಬಡಾವಣೆ ನಿರ್ಮಾಣ ವೇಳೆ ಸುಳ್ಳು ಕ್ರಯಪತ್ರಗಳನ್ನು ಕೊಟ್ಟು 50:50 ಅನುಪಾತದಲ್ಲಿ ನಿವೇಶನ ಕೊಡಬೇಕೆಂದು ಮುಡಾಕ್ಕೆ ಮನವಿ ಮಾಡಿ ಅಕ್ರಮವಾಗಿ ಹಲವರು ನಿವೇಶನ ಪಡೆದಿದ್ದಾರೆ. ಅದೆಲ್ಲದರ ದಾಖಲೆಗಳನ್ನು ಇ.ಡಿಗೆ ನೀಡಿದ್ದೇನೆ. ಅದನ್ನು ಆಧರಿಸಿಯೇ ಶೋಧ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>