<p><strong>ಮೈಸೂರು:</strong> ‘ಸೌಹಾರ್ದ ಸಹಕಾರಿ ಕ್ಷೇತ್ರದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಹೇಳಿದರು.</p><p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಸಿಇಒಗಳಿಗೆ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಬುದವಾರ ಹಮ್ಮಿಕೊಂಡಿದ್ದ ‘ಸಂಪರ್ಕ ಸಭೆ ಮತ್ತು ವಿಷಯಾಧಾರಿತ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಎಲ್ಲ ಸಹಕಾರಿಗಳೂ ಬಂಗಾರವೆಂದು ಹೇಳುವುದಿಲ್ಲ. ಕಾಯ್ದೆಯಲ್ಲಿ ಲೋಪದೋಷಗಳಿದ್ದಲ್ಲಿ ಸರಿಪಡಿಸಲು ಮತ್ತು ಠೇವಣಿದಾರರಿಗೆ ವಂಚಿಸಿದವರ ವಿರುದ್ಧ ಕ್ರಮ ವಹಿಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ, ಇಡೀ ಚಳವಳಿಯ ಮೇಲೆ ಸವಾರಿಗೆ ಬರಬಾರದು’ ಎಂದರು.</p><p>‘ನಮ್ಮೆಲ್ಲ ಹೂಡಿಕೆಯನ್ನೂ ಡಿಸಿಸಿ ಬ್ಯಾಂಕ್ನಲ್ಲೆ ಮಾಡಬೇಕು ಎನ್ನುವುದು ಸರಿಯಲ್ಲ. ಈ ಚಳವಳಿಗಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಅಧಿಕಾರಶಾಹಿ ಪ್ರಯತ್ನಿಸುತ್ತಲೇ ಇದೆ. ಯಾವುದೇ ಕಾರಣಕ್ಕೂ, ಕಾಯ್ದೆಯ ಹಾಗೂ ನಮ್ಮ ಚಳವಳಿಯ ಉದ್ದೇಶವನ್ನು ವಿಫಲಗೊಳಿಸಲು ಪ್ರಯತ್ನಿಸಬಾರದು. ವಂಚನೆ ಮಾಡುವವರನ್ನು ನಿಗ್ರಹ ಮಾಡಬೇಕೇ ಹೊರತು, ಇಡೀ ವ್ಯವಸ್ಥೆಗೆ ತೊಂದರೆ ಕೊಡಲು ಬರಬಾರದು. ನ್ಯಾಯಯುತ ಬಡ್ಡಿ ತೆಗೆದುಕೊಳ್ಳಲು ಹಾಗೂ ವಿಧಿಸಲು ನಮಗೆ ಅವಕಾಶ ಇರಬೇಕು’ ಎಂದು ಹೇಳಿದರು.</p><h2>ಮೀಸಲಾತಿ: </h2><p>‘1959ರ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು, ಸದ್ಯಕ್ಕೆ ಸರ್ಕಾರದಿಂದಲೇ ಮೀಸಲಾತಿಯನ್ನು ನಾಮನಿರ್ದೇಶನದ ಮೂಲಕ ಕೊಡಲಾಗುತ್ತಿದೆ. ಅವರು ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಲು ಹಕ್ಕಿಲ್ಲ. ಆದರೆ, ಮತದಾರರಾಗಲು ಅವಕಾಶವಿದೆ. ಸೌಹಾರ್ದ ಸಹಕಾರಿಗಳಿಗೆ ಸರ್ಕಾರಿದಂದ ಯಾವುದೇ ಅನುದಾನ ಬರುವುದಿಲ್ಲ. ಆದರೆ, ನಮ್ಮಲ್ಲಿ ಈಗಾಗಲೇ ಮೀಸಲಾತಿ ಇದೆ’ ಎಂದು ತಿಳಿಸಿದರು.</p><p>‘ಈ ಬಾರಿಯ ವಾರ್ಷಿಕ ಮಹಾಸಭೆಯನ್ನು ಬೆಂಗಳೂರಿನ ಅರಮನೆ ಆವರಣದಲ್ಲಿ ಆ.23ರಂದು ಆಯೋಜಿಸಲಾಗಿದ್ದು, ಅರ್ಹ ಪ್ರತಿನಿಧಿಗಳು ಪಾಲ್ಗೊಳ್ಳಬೇಕು’ ಎಂದು ಕೋರಿದರು.</p><h2>ಎಲ್ಲರೂ ನಿಗಾ ವಹಿಸಬೇಕು:</h2><p>‘ಸಹಕಾರಿಗಳ ವ್ಯವಹಾರವನ್ನು ಸಿಇಒಗಳ ಮೇಲಷ್ಟೇ ಬಿಡದೇ ನಿಗಾ ವಹಿಸಬೇಕು. ನಿರ್ವಹಣೆಯನ್ನು ಸಾಮೂಹಿಕವಾಗಿ ನೋಡಿಕೊಳ್ಳಬೇಕು. ನಗದು ವ್ಯವಹಾರವನ್ನು ಮಾಡಲೇಬಾರದು. ಬ್ಯಾಂಕ್ ಖಾತೆಗಳ ಮೂಲಕವೇ ಪಡೆಯಬೇಕು ಹಾಗೂ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ನಿರ್ದೇಶಕರೇ ಹೆಚ್ಚೆಚ್ಚು ಸಾಲ ತೆಗೆದುಕೊಳ್ಳುವುದನ್ನು ಬಿಡಬೇಕು. ಸಾರ್ವಜನಿಕರಿಗೆ ನೀಡಲು ಆದ್ಯತೆ ಕೊಡಬೇಕು. ಸಿಬ್ಬಂದಿಯು ತಂತ್ರಜ್ಞಾನ ಬಳಕೆಯಲ್ಲಿ ಅಪ್ಡೇಟ್ ಆಗಿತ್ತಿರಬೇಕು’ ಎಂದು ಸಲಹೆ ನೀಡಿದರು.</p><p>ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ‘ಸಹಕಾರಿಗಳ ಸಿಬ್ಬಂದಿಯು ಬದಲಾದ ಕಾಯ್ದೆಗಳನ್ನು ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು. ತರಬೇತಿ ಮೂಲಕ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರಬೇಕು. ಸಮರ್ಪಕ ನಿರ್ವಹಣೆ ಇದ್ದರೆ ಲೋಪ–ದೋಷಗಳಾಗದಂತೆ ನೋಡಿಕೊಳ್ಳಬಹುದು’ ಎಂದು ತಿಳಿಸಿದರು.</p><p>ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿದರು. ನಿರ್ದೇಶಕರಾದ ಎಸ್.ಕೆ. ಮಂಜುನಾಥ್ ಹಾಗೂ ಭಾರತಿ ಜಿ. ಭಟ್, ಪ್ರಾಂತೀಯ ಅಧ್ಯಕ್ಷ ಎಸ್.ಆರ್. ನಾರಾಯಣ್, ಉದ್ದೇಶಿತ ಚಾಮರಾಜನಗರ ಸೌಹಾರ್ದ ಸಂಯುಕ್ತ ಸಹಕಾರಿಯ ಮುಖ್ಯಪ್ರವರ್ತಕ ಎಸ್.ಬಾಲಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು.</p><h2>‘ನಂಬಿಕೆ ದ್ರೋಹವಾಗದಂತೆ ನೋಡಿಕೊಳ್ಳಿ’</h2><p>‘ಸೌಹಾರ್ದ ಸಹಕಾರಿಗಳು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಹೋಗಬೇಕು. ಹೊರಗಿನ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜಾಗ್ರತೆ ವಹಿಸಬೇಕು’ ಎಂದು ನಂಜನಗೌಡ ತಿಳಿಸಿದರು.</p><p>‘ಯಾವುದೇ ಸಹಕಾರಿಗಳು ವ್ಯವಸ್ಥಿತವಾಗಿ ಬೆಳೆಯದಿದ್ದರೆ ಲಗಾಮು ಹಾಕಲು ಕ್ರಮ ವಹಿಸಲಾಗುವುದು. ಠೇವಣಿದಾರರಿಗೆ ವಂಚಿಸುವುದನ್ನು ಸಹಿಸಲಾಗದು. ಚಳವಳಿಯ ಮೇಲಿರುವ ನಂಬಿಕೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅವ್ಯವಹಾರದಿಂದ ಲಾಭ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಸೌಹಾರ್ದ ಸಹಕಾರಿ ಕ್ಷೇತ್ರದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಹೇಳಿದರು.</p><p>ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಸಿಇಒಗಳಿಗೆ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಬುದವಾರ ಹಮ್ಮಿಕೊಂಡಿದ್ದ ‘ಸಂಪರ್ಕ ಸಭೆ ಮತ್ತು ವಿಷಯಾಧಾರಿತ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಎಲ್ಲ ಸಹಕಾರಿಗಳೂ ಬಂಗಾರವೆಂದು ಹೇಳುವುದಿಲ್ಲ. ಕಾಯ್ದೆಯಲ್ಲಿ ಲೋಪದೋಷಗಳಿದ್ದಲ್ಲಿ ಸರಿಪಡಿಸಲು ಮತ್ತು ಠೇವಣಿದಾರರಿಗೆ ವಂಚಿಸಿದವರ ವಿರುದ್ಧ ಕ್ರಮ ವಹಿಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ, ಇಡೀ ಚಳವಳಿಯ ಮೇಲೆ ಸವಾರಿಗೆ ಬರಬಾರದು’ ಎಂದರು.</p><p>‘ನಮ್ಮೆಲ್ಲ ಹೂಡಿಕೆಯನ್ನೂ ಡಿಸಿಸಿ ಬ್ಯಾಂಕ್ನಲ್ಲೆ ಮಾಡಬೇಕು ಎನ್ನುವುದು ಸರಿಯಲ್ಲ. ಈ ಚಳವಳಿಗಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಅಧಿಕಾರಶಾಹಿ ಪ್ರಯತ್ನಿಸುತ್ತಲೇ ಇದೆ. ಯಾವುದೇ ಕಾರಣಕ್ಕೂ, ಕಾಯ್ದೆಯ ಹಾಗೂ ನಮ್ಮ ಚಳವಳಿಯ ಉದ್ದೇಶವನ್ನು ವಿಫಲಗೊಳಿಸಲು ಪ್ರಯತ್ನಿಸಬಾರದು. ವಂಚನೆ ಮಾಡುವವರನ್ನು ನಿಗ್ರಹ ಮಾಡಬೇಕೇ ಹೊರತು, ಇಡೀ ವ್ಯವಸ್ಥೆಗೆ ತೊಂದರೆ ಕೊಡಲು ಬರಬಾರದು. ನ್ಯಾಯಯುತ ಬಡ್ಡಿ ತೆಗೆದುಕೊಳ್ಳಲು ಹಾಗೂ ವಿಧಿಸಲು ನಮಗೆ ಅವಕಾಶ ಇರಬೇಕು’ ಎಂದು ಹೇಳಿದರು.</p><h2>ಮೀಸಲಾತಿ: </h2><p>‘1959ರ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು, ಸದ್ಯಕ್ಕೆ ಸರ್ಕಾರದಿಂದಲೇ ಮೀಸಲಾತಿಯನ್ನು ನಾಮನಿರ್ದೇಶನದ ಮೂಲಕ ಕೊಡಲಾಗುತ್ತಿದೆ. ಅವರು ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಲು ಹಕ್ಕಿಲ್ಲ. ಆದರೆ, ಮತದಾರರಾಗಲು ಅವಕಾಶವಿದೆ. ಸೌಹಾರ್ದ ಸಹಕಾರಿಗಳಿಗೆ ಸರ್ಕಾರಿದಂದ ಯಾವುದೇ ಅನುದಾನ ಬರುವುದಿಲ್ಲ. ಆದರೆ, ನಮ್ಮಲ್ಲಿ ಈಗಾಗಲೇ ಮೀಸಲಾತಿ ಇದೆ’ ಎಂದು ತಿಳಿಸಿದರು.</p><p>‘ಈ ಬಾರಿಯ ವಾರ್ಷಿಕ ಮಹಾಸಭೆಯನ್ನು ಬೆಂಗಳೂರಿನ ಅರಮನೆ ಆವರಣದಲ್ಲಿ ಆ.23ರಂದು ಆಯೋಜಿಸಲಾಗಿದ್ದು, ಅರ್ಹ ಪ್ರತಿನಿಧಿಗಳು ಪಾಲ್ಗೊಳ್ಳಬೇಕು’ ಎಂದು ಕೋರಿದರು.</p><h2>ಎಲ್ಲರೂ ನಿಗಾ ವಹಿಸಬೇಕು:</h2><p>‘ಸಹಕಾರಿಗಳ ವ್ಯವಹಾರವನ್ನು ಸಿಇಒಗಳ ಮೇಲಷ್ಟೇ ಬಿಡದೇ ನಿಗಾ ವಹಿಸಬೇಕು. ನಿರ್ವಹಣೆಯನ್ನು ಸಾಮೂಹಿಕವಾಗಿ ನೋಡಿಕೊಳ್ಳಬೇಕು. ನಗದು ವ್ಯವಹಾರವನ್ನು ಮಾಡಲೇಬಾರದು. ಬ್ಯಾಂಕ್ ಖಾತೆಗಳ ಮೂಲಕವೇ ಪಡೆಯಬೇಕು ಹಾಗೂ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ನಿರ್ದೇಶಕರೇ ಹೆಚ್ಚೆಚ್ಚು ಸಾಲ ತೆಗೆದುಕೊಳ್ಳುವುದನ್ನು ಬಿಡಬೇಕು. ಸಾರ್ವಜನಿಕರಿಗೆ ನೀಡಲು ಆದ್ಯತೆ ಕೊಡಬೇಕು. ಸಿಬ್ಬಂದಿಯು ತಂತ್ರಜ್ಞಾನ ಬಳಕೆಯಲ್ಲಿ ಅಪ್ಡೇಟ್ ಆಗಿತ್ತಿರಬೇಕು’ ಎಂದು ಸಲಹೆ ನೀಡಿದರು.</p><p>ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ‘ಸಹಕಾರಿಗಳ ಸಿಬ್ಬಂದಿಯು ಬದಲಾದ ಕಾಯ್ದೆಗಳನ್ನು ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು. ತರಬೇತಿ ಮೂಲಕ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರಬೇಕು. ಸಮರ್ಪಕ ನಿರ್ವಹಣೆ ಇದ್ದರೆ ಲೋಪ–ದೋಷಗಳಾಗದಂತೆ ನೋಡಿಕೊಳ್ಳಬಹುದು’ ಎಂದು ತಿಳಿಸಿದರು.</p><p>ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿದರು. ನಿರ್ದೇಶಕರಾದ ಎಸ್.ಕೆ. ಮಂಜುನಾಥ್ ಹಾಗೂ ಭಾರತಿ ಜಿ. ಭಟ್, ಪ್ರಾಂತೀಯ ಅಧ್ಯಕ್ಷ ಎಸ್.ಆರ್. ನಾರಾಯಣ್, ಉದ್ದೇಶಿತ ಚಾಮರಾಜನಗರ ಸೌಹಾರ್ದ ಸಂಯುಕ್ತ ಸಹಕಾರಿಯ ಮುಖ್ಯಪ್ರವರ್ತಕ ಎಸ್.ಬಾಲಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು.</p><h2>‘ನಂಬಿಕೆ ದ್ರೋಹವಾಗದಂತೆ ನೋಡಿಕೊಳ್ಳಿ’</h2><p>‘ಸೌಹಾರ್ದ ಸಹಕಾರಿಗಳು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಹೋಗಬೇಕು. ಹೊರಗಿನ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜಾಗ್ರತೆ ವಹಿಸಬೇಕು’ ಎಂದು ನಂಜನಗೌಡ ತಿಳಿಸಿದರು.</p><p>‘ಯಾವುದೇ ಸಹಕಾರಿಗಳು ವ್ಯವಸ್ಥಿತವಾಗಿ ಬೆಳೆಯದಿದ್ದರೆ ಲಗಾಮು ಹಾಕಲು ಕ್ರಮ ವಹಿಸಲಾಗುವುದು. ಠೇವಣಿದಾರರಿಗೆ ವಂಚಿಸುವುದನ್ನು ಸಹಿಸಲಾಗದು. ಚಳವಳಿಯ ಮೇಲಿರುವ ನಂಬಿಕೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅವ್ಯವಹಾರದಿಂದ ಲಾಭ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>