<p><strong>ಮೈಸೂರು:</strong> ದೂರದ ಊರುಗಳಿಗೆ ಪ್ರಯಾಣಿಸಲು ಖಾಸಗಿ ಬಸ್ಗಳು ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿಸುತ್ತವೆ. ಇದೀಗ ಸರ್ಕಾರಿ ಬಸ್ಗಳಲ್ಲೂ ಯಾವುದೇ ಸೂಚನೆ ನೀಡದೆ ನಿತ್ಯ ಟಿಕೆಟ್ ದರ ಹೆಚ್ಚಿಸುತ್ತಿದ್ದು, ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.</p>.<p>ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಆರ್ಟಿಸಿ) ಅಧಿಕೃತ ಆನ್ಲೈನ್ ಬುಕ್ಕಿಂಗ್ ಆ್ಯಪ್ನಲ್ಲಿ ದಿನಕ್ಕೊಂದು ಟಿಕೆಟ್ ದರ ತೋರಿಸುತ್ತಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚುವರಿ ಹಣ ಪಾವತಿಸಿ ಪ್ರಯಾಣಿಸುತ್ತಿದ್ದಾರೆ.</p>.<p>ಪ್ರಯಾಣಿಕರೊಬ್ಬರು ಜು.10ರಂದು ಮೈಸೂರಿನಿಂದ ಪುತ್ತೂರಿಗೆ ತೆರಳಲು ಜು.3ರಂದು ಆನ್ಲೈನ್ನಲ್ಲಿ ರಾಜಹಂಸ ಎಕ್ಸಿಕ್ಯೂಟಿವ್ ಬಸ್ನ ಟಿಕೆಟ್ ಕಾಯ್ದಿರಿಸಲು ಮುಂದಾದಾಗ ಟಿಕೆಟ್ ದರ ₹366 ತೋರಿಸುತ್ತಿತ್ತು. ಮರುದಿನ ₹495ಕ್ಕೆ ಏರಿಕೆಯಾಗಿತ್ತು.</p>.<p>ಜು.13ರಂದು ಪುತ್ತೂರು ಬಸ್ಸು ನಿಲ್ದಾಣದಲ್ಲಿರುವ ಮುಂಗಡ ಟಿಕಟ್ ಬುಕ್ಕಿಂಗ್ ಕೇಂದ್ರದಲ್ಲಿ ವಿಚಾರಿಸಿದಾಗ ಅದೇ ಬಸ್ನ ಟಿಕೆಟ್ ಮೊತ್ತ ₹540ಕ್ಕೆ ಏರಿಕೆಯಾಗಿತ್ತು. ಕಳೆದ 15 ದಿನಗಳಲ್ಲಿ ನಿತ್ಯ ಇದೇ ರೀತಿಯಾಗಿ ದರ ವ್ಯತ್ಯಾಸವಾಗಿದೆ. ಕೆಎಸ್ಆರ್ಟಿಸಿ ಸಂಚರಿಸುವ ಇತರೆ ದಾರಿಗಳಲ್ಲೂ ದರ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.</p>.<p>ಸರ್ಕಾರಿ ಬಸ್ಗಳಲ್ಲಿ ಜನ ಹೆಚ್ಚಾದಾಗ ಅಥವಾ ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಾಗುವುದಿಲ್ಲ. ಹಾಗಿದ್ದರೂ ಕೆಎಸ್ಆರ್ಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ದರ ಏರಿಕೆಯಾಗುತ್ತಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ₹200ರ ರವರೆಗೂ ಹೆಚ್ಚುವರಿ ಹಣ ಪಾವತಿಸಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.</p>.<p>ಬಸ್ ನಿರ್ವಾಹಕರು ನೀಡುವ ಟಿಕೆಟ್ನ ಮೊತ್ತ ಹಾಗೂ ವೆಬ್ಸೈಟ್ನಲ್ಲಿ ಉಲ್ಲೇಖಿಸಿದ ಮೊತ್ತಕ್ಕೂ ಅಪಾರ ವ್ಯತ್ಯಾಸ ಉಂಟಾಗಿದೆ. ಪುತ್ತೂರು– ಮೈಸೂರಿನ ರಾಜಹಂಸ ಬಸ್ನಲ್ಲಿ ನಿರ್ವಾಹಕರು ನೀಡುವ ಟಿಕೆಟ್ ದರ ₹350 ಇದ್ದರೆ, ಆನ್ಲೈನ್ನಲ್ಲಿ ₹495 ಪಾವತಿಸಬೇಕು. ಈ ಮುಂಚೆ, ಮುಂಗಡ ಪಾವತಿಗಾಗಿ ₹20 ಹೆಚ್ಚುವರಿ ಪಡೆಯಲಾಗುತ್ತಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ₹129 ಹೆಚ್ಚಳವಾದಂತಾಗಿದೆ.</p>.<p>ಈ ಬಗ್ಗೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರದವರನ್ನು ಸಂಪರ್ಕಿಸಿದಾಗ, ಸಿಬ್ಬಂದಿಯಲ್ಲೂ ಸಮರ್ಪಕ ಮಾಹಿತಿ ಇರಲಿಲ್ಲ.</p>.<p>‘ವಿಭಾಗೀಯ ಕೇಂದ್ರಗಳು ನೀಡಿದ ಮಾಹಿತಿಯಂತೆ ದರ ನಿಗದಿ ಮಾಡಲಾಗುತ್ತಿದೆ. ಮುಂದಿನ 2–3 ದಿನಗಳಲ್ಲಿ ಗೊಂದಲ’ ಸರಿಪಡಿಸಲಾಗುವುದು’ ಎಂದು ಬುಕಿಂಗ್ ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಕ್ಕೆ ಬೀಗ</strong></p><p> ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಮುಂಗಡ ಟಿಕೆಟ್ ಬುಕ್ಕಿಂಗ್ ಕೇಂದ್ರದ ಕೊಠಡಿಗೆ ಬೀಗ ಜಡಿಯಲಾಗಿದೆ. ಪ್ರಯಾಣದ ಮಾಹಿತಿ ಪಡೆಯುವ ಸಿಬ್ಬಂದಿ ಪಕ್ಕದಲ್ಲೇ ಇರುವ ಖಾಸಗಿ ಬುಕ್ಕಿಂಗ್ ಕೇಂದ್ರಕ್ಕೆ ತೆರಳಲು ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದೂರದ ಊರುಗಳಿಗೆ ಪ್ರಯಾಣಿಸಲು ಖಾಸಗಿ ಬಸ್ಗಳು ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿಸುತ್ತವೆ. ಇದೀಗ ಸರ್ಕಾರಿ ಬಸ್ಗಳಲ್ಲೂ ಯಾವುದೇ ಸೂಚನೆ ನೀಡದೆ ನಿತ್ಯ ಟಿಕೆಟ್ ದರ ಹೆಚ್ಚಿಸುತ್ತಿದ್ದು, ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.</p>.<p>ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಆರ್ಟಿಸಿ) ಅಧಿಕೃತ ಆನ್ಲೈನ್ ಬುಕ್ಕಿಂಗ್ ಆ್ಯಪ್ನಲ್ಲಿ ದಿನಕ್ಕೊಂದು ಟಿಕೆಟ್ ದರ ತೋರಿಸುತ್ತಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚುವರಿ ಹಣ ಪಾವತಿಸಿ ಪ್ರಯಾಣಿಸುತ್ತಿದ್ದಾರೆ.</p>.<p>ಪ್ರಯಾಣಿಕರೊಬ್ಬರು ಜು.10ರಂದು ಮೈಸೂರಿನಿಂದ ಪುತ್ತೂರಿಗೆ ತೆರಳಲು ಜು.3ರಂದು ಆನ್ಲೈನ್ನಲ್ಲಿ ರಾಜಹಂಸ ಎಕ್ಸಿಕ್ಯೂಟಿವ್ ಬಸ್ನ ಟಿಕೆಟ್ ಕಾಯ್ದಿರಿಸಲು ಮುಂದಾದಾಗ ಟಿಕೆಟ್ ದರ ₹366 ತೋರಿಸುತ್ತಿತ್ತು. ಮರುದಿನ ₹495ಕ್ಕೆ ಏರಿಕೆಯಾಗಿತ್ತು.</p>.<p>ಜು.13ರಂದು ಪುತ್ತೂರು ಬಸ್ಸು ನಿಲ್ದಾಣದಲ್ಲಿರುವ ಮುಂಗಡ ಟಿಕಟ್ ಬುಕ್ಕಿಂಗ್ ಕೇಂದ್ರದಲ್ಲಿ ವಿಚಾರಿಸಿದಾಗ ಅದೇ ಬಸ್ನ ಟಿಕೆಟ್ ಮೊತ್ತ ₹540ಕ್ಕೆ ಏರಿಕೆಯಾಗಿತ್ತು. ಕಳೆದ 15 ದಿನಗಳಲ್ಲಿ ನಿತ್ಯ ಇದೇ ರೀತಿಯಾಗಿ ದರ ವ್ಯತ್ಯಾಸವಾಗಿದೆ. ಕೆಎಸ್ಆರ್ಟಿಸಿ ಸಂಚರಿಸುವ ಇತರೆ ದಾರಿಗಳಲ್ಲೂ ದರ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.</p>.<p>ಸರ್ಕಾರಿ ಬಸ್ಗಳಲ್ಲಿ ಜನ ಹೆಚ್ಚಾದಾಗ ಅಥವಾ ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಾಗುವುದಿಲ್ಲ. ಹಾಗಿದ್ದರೂ ಕೆಎಸ್ಆರ್ಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ದರ ಏರಿಕೆಯಾಗುತ್ತಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ₹200ರ ರವರೆಗೂ ಹೆಚ್ಚುವರಿ ಹಣ ಪಾವತಿಸಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.</p>.<p>ಬಸ್ ನಿರ್ವಾಹಕರು ನೀಡುವ ಟಿಕೆಟ್ನ ಮೊತ್ತ ಹಾಗೂ ವೆಬ್ಸೈಟ್ನಲ್ಲಿ ಉಲ್ಲೇಖಿಸಿದ ಮೊತ್ತಕ್ಕೂ ಅಪಾರ ವ್ಯತ್ಯಾಸ ಉಂಟಾಗಿದೆ. ಪುತ್ತೂರು– ಮೈಸೂರಿನ ರಾಜಹಂಸ ಬಸ್ನಲ್ಲಿ ನಿರ್ವಾಹಕರು ನೀಡುವ ಟಿಕೆಟ್ ದರ ₹350 ಇದ್ದರೆ, ಆನ್ಲೈನ್ನಲ್ಲಿ ₹495 ಪಾವತಿಸಬೇಕು. ಈ ಮುಂಚೆ, ಮುಂಗಡ ಪಾವತಿಗಾಗಿ ₹20 ಹೆಚ್ಚುವರಿ ಪಡೆಯಲಾಗುತ್ತಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ₹129 ಹೆಚ್ಚಳವಾದಂತಾಗಿದೆ.</p>.<p>ಈ ಬಗ್ಗೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರದವರನ್ನು ಸಂಪರ್ಕಿಸಿದಾಗ, ಸಿಬ್ಬಂದಿಯಲ್ಲೂ ಸಮರ್ಪಕ ಮಾಹಿತಿ ಇರಲಿಲ್ಲ.</p>.<p>‘ವಿಭಾಗೀಯ ಕೇಂದ್ರಗಳು ನೀಡಿದ ಮಾಹಿತಿಯಂತೆ ದರ ನಿಗದಿ ಮಾಡಲಾಗುತ್ತಿದೆ. ಮುಂದಿನ 2–3 ದಿನಗಳಲ್ಲಿ ಗೊಂದಲ’ ಸರಿಪಡಿಸಲಾಗುವುದು’ ಎಂದು ಬುಕಿಂಗ್ ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಕ್ಕೆ ಬೀಗ</strong></p><p> ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಮುಂಗಡ ಟಿಕೆಟ್ ಬುಕ್ಕಿಂಗ್ ಕೇಂದ್ರದ ಕೊಠಡಿಗೆ ಬೀಗ ಜಡಿಯಲಾಗಿದೆ. ಪ್ರಯಾಣದ ಮಾಹಿತಿ ಪಡೆಯುವ ಸಿಬ್ಬಂದಿ ಪಕ್ಕದಲ್ಲೇ ಇರುವ ಖಾಸಗಿ ಬುಕ್ಕಿಂಗ್ ಕೇಂದ್ರಕ್ಕೆ ತೆರಳಲು ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>