<p><strong>ಮೈಸೂರು</strong>: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಬಿನಿ ಜಲಾಶಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಮಹೇಶ್ ಹಾಗೂ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯ ನಿವೃತ್ತ ಇಇ ಎಸ್.ಶಿವರಾಜು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.</p>.<p>ಇಬ್ಬರೂ ಇಲ್ಲಿನ ಚಾಮುಂಡಿ ಬೆಟ್ಟದ ರಸ್ತೆಯ ಕೆಂಪಚಲುವಮ್ಮಣ್ಣಿ ನಗರದ ನಿವಾಸಿಗಳಾಗಿದ್ದು, ಮನೆಯ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಿ, ₹10.3 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. </p>.<p>ಕೆ.ಮಹೇಶ್ ಅವರ ಬಳಿ ₹2.75 ಕೋಟಿ ಮೌಲ್ಯದ 3 ಮನೆ, 3 ನಿವೇಶನ ಹಾಗೂ 11 ಎಕರೆ 20 ಗುಂಟೆ ಕೃಷಿ ಭೂಮಿಯಿದೆ. ₹50 ಲಕ್ಷ ಚರಾಸ್ತಿಯಿದ್ದು, 338 ಗ್ರಾಂ ಚಿನ್ನ, 2.9 ಕೆ.ಜಿ ಬೆಳ್ಳಿ, ₹4 ಲಕ್ಷ ಮೌಲ್ಯದ ಕಾರು, 2 ಬೈಕ್ಗಳಿವೆ.</p>.<p>ಎಸ್.ಶಿವರಾಜು ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ₹87.89 ಲಕ್ಷ ಮೌಲ್ಯದ 3 ನಿವೇಶನಗಳು, ₹1.10 ಕೋಟಿ ಮೌಲ್ಯದ 3 ಮನೆಗಳು ಹಾಗೂ ₹93 ಲಕ್ಷ ಮೌಲ್ಯದ 10 ಎಕರೆ ಕೃಷಿ ಭೂಮಿ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.</p>.<p>₹3.05 ಕೋಟಿ ಮೌಲ್ಯದ ಚರಾಸ್ತಿಯಿದ್ದು, ₹8 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿ ಇದೆ. ₹6 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ₹90 ಲಕ್ಷ ಮೌಲ್ಯದ 2 ಟ್ರಾಕ್ಟರ್, 3 ಕಾರು, ಒಂದು ಜೆಸಿಬಿ ಹಾಗೂ ಹಿಟಾಚಿ ಹಾಗೂ 2 ಬೈಕ್ಗಳಿವೆ. ಇದಲ್ಲದೆ ₹2.06 ಕೋಟಿ ಮೌಲ್ಯದ ಕ್ರಶರ್, ಕ್ವಾರಿಗಳಿರುವ ದಾಖಲೆಗಳು ಸಿಕ್ಕಿವೆ’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೃಷ್ಣಯ್ಯ, ಇನ್ಸ್ಪೆಕ್ಟರ್ಗಳಾದ ಜಯರತ್ನ, ಲೋಕೇಶ್, ರವಿಕುಮಾರ್, ಸಿಬ್ಬಂದಿ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್ ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಬಿನಿ ಜಲಾಶಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಮಹೇಶ್ ಹಾಗೂ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯ ನಿವೃತ್ತ ಇಇ ಎಸ್.ಶಿವರಾಜು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.</p>.<p>ಇಬ್ಬರೂ ಇಲ್ಲಿನ ಚಾಮುಂಡಿ ಬೆಟ್ಟದ ರಸ್ತೆಯ ಕೆಂಪಚಲುವಮ್ಮಣ್ಣಿ ನಗರದ ನಿವಾಸಿಗಳಾಗಿದ್ದು, ಮನೆಯ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಿ, ₹10.3 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. </p>.<p>ಕೆ.ಮಹೇಶ್ ಅವರ ಬಳಿ ₹2.75 ಕೋಟಿ ಮೌಲ್ಯದ 3 ಮನೆ, 3 ನಿವೇಶನ ಹಾಗೂ 11 ಎಕರೆ 20 ಗುಂಟೆ ಕೃಷಿ ಭೂಮಿಯಿದೆ. ₹50 ಲಕ್ಷ ಚರಾಸ್ತಿಯಿದ್ದು, 338 ಗ್ರಾಂ ಚಿನ್ನ, 2.9 ಕೆ.ಜಿ ಬೆಳ್ಳಿ, ₹4 ಲಕ್ಷ ಮೌಲ್ಯದ ಕಾರು, 2 ಬೈಕ್ಗಳಿವೆ.</p>.<p>ಎಸ್.ಶಿವರಾಜು ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ₹87.89 ಲಕ್ಷ ಮೌಲ್ಯದ 3 ನಿವೇಶನಗಳು, ₹1.10 ಕೋಟಿ ಮೌಲ್ಯದ 3 ಮನೆಗಳು ಹಾಗೂ ₹93 ಲಕ್ಷ ಮೌಲ್ಯದ 10 ಎಕರೆ ಕೃಷಿ ಭೂಮಿ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.</p>.<p>₹3.05 ಕೋಟಿ ಮೌಲ್ಯದ ಚರಾಸ್ತಿಯಿದ್ದು, ₹8 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿ ಇದೆ. ₹6 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ₹90 ಲಕ್ಷ ಮೌಲ್ಯದ 2 ಟ್ರಾಕ್ಟರ್, 3 ಕಾರು, ಒಂದು ಜೆಸಿಬಿ ಹಾಗೂ ಹಿಟಾಚಿ ಹಾಗೂ 2 ಬೈಕ್ಗಳಿವೆ. ಇದಲ್ಲದೆ ₹2.06 ಕೋಟಿ ಮೌಲ್ಯದ ಕ್ರಶರ್, ಕ್ವಾರಿಗಳಿರುವ ದಾಖಲೆಗಳು ಸಿಕ್ಕಿವೆ’ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೃಷ್ಣಯ್ಯ, ಇನ್ಸ್ಪೆಕ್ಟರ್ಗಳಾದ ಜಯರತ್ನ, ಲೋಕೇಶ್, ರವಿಕುಮಾರ್, ಸಿಬ್ಬಂದಿ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್ ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>