<p><strong>ಮೈಸೂರು</strong>: ವಯನಾಡ್ ದುರಂತದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾಗಿರುವ ಕನ್ನಡಿಗರ ಪತ್ತೆಯು ರಾಜ್ಯದ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.</p>.<p>‘ಅಲ್ಲಿನ ದಾಖಲೆಗಳಲ್ಲಿರುವ ಮಾಹಿತಿ ಮಲೆಯಾಳಿ ಭಾಷೆಯಲ್ಲಿರುವುದರಿಂದ ಕನ್ನಡಿಗರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ’ ಎಂದು ಚಾಮರಾಜನಗರದಿಂದ ಅಲ್ಲಿಗೆ ತೆರಳಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ವಯನಾಡ್ನ ಮೇಪ್ಪಾಡಿ, ಚೂರಮಲೆ ಮತ್ತು ಮುಂಡಕೈ ಪ್ರದೇಶಗಳಲ್ಲಿ ರಕ್ಷಿಸಿದವರನ್ನು 12 ಕಾಳಜಿ ಕೇಂದ್ರಗಳಲ್ಲಿರಿಸಲಾಗಿದ್ದು 50ಕ್ಕೂ ಹೆಚ್ಚು ಕನ್ನಡ ಭಾಷಿಕರಿದ್ದಾರೆ. ಕರ್ನಾಟಕಕ್ಕೆ ಬರಲು ಬಯಸುವವರನ್ನು ಕರೆ ತರಲು ಎರಡು ಕೆಎಸ್ಆರ್ಟಿಸಿ ಬಸ್ಗಳಿವೆ. ಆದರೆ, ಬಹಳಷ್ಟು ಮಂದಿ ಬರಲು ಒಪ್ಪುತ್ತಿಲ್ಲ’ ಎಂದು ಹೇಳಿದ್ದಾರೆ.</p>.<p><strong>ಮೃತದೇಹಗಳ ಗುರುತು ಪತ್ತೆ</strong></p>.<p>ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟದ ಝಾನ್ಸಿರಾಣಿ ಅವರ ಮಗ ಎರಡೂವರೆ ವರ್ಷದ ನಿಹಾಲ್ ಹಾಗೂ ಅತ್ತೆ ಲೀಲಾವತಿ (55) ಅವರ ಮೃತದೇಹಗಳನ್ನು ಕುಟುಂಬದ ಸದಸ್ಯರು ಗುರುತು ಹಿಡಿದಿದ್ದು, ‘ಅಂತಿಮ ದರ್ಶನಕ್ಕಾದರೂ ಮೃತದೇಹಗಳನ್ನು ತರಿಸಿಕೊಡಿ’ ಎಂದು ಕೋರಿದ್ದಾರೆ.</p>.<p>‘ಕುಸಿತದ ಸ್ಥಳದಲ್ಲಿ ಮಣ್ಣಿನಿಂದ ಹೊರಗೆ ಕಾಣುತ್ತಿದ್ದ ಕೈ ಲೀಲಾವತಿಯವರದ್ದು ಹಾಗೂ ಅವರು ವಾಸವಿದ್ದ ಮನೆಯ ಸಮೀಪದ ಗಿಡಗಂಟಿಗಳ ನಡುವೆ ನಿಹಾಲ್ ಮೃತದೇಹ ಪತ್ತೆಯಾಗಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.</p>.<p>ಝಾನ್ಸಿರಾಣಿ, ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p><strong>ತಿ.ನರಸೀಪುರ; ಏಳು ಮಂದಿ ನಾಪತ್ತೆ, ಒಬ್ಬರ ಸಾವು</strong></p>.<p>ಮೈಸೂರು ಜಿಲ್ಲೆಯ ತಿ.ನರಸೀಪುರ ಮೂಲದ 7 ಜನ ನಾಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆದರೆ ಜಿಲ್ಲಾಡಳಿತವು ಸಾವನ್ನು ದೃಢಪಡಿಸಿಲ್ಲ.</p>.<p>ಹೆಪ್ಪಾಡಿ ಗ್ರಾಮ ಪಂಚಾಯಿತಿಯ ಕಾಳಜಿ ಕೇಂದ್ರದಲ್ಲಿ ಉಕ್ಕಳಗೆರೆ ಮೂಲದ 25 ಮಂದಿ ಆಸರೆ ಪಡೆದಿದ್ದಾರೆ. ಅವರೆಲ್ಲ ದಶಕಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಜೊತೆಗಿದ್ದ ಸಾವಿತ್ರಿ (52), ಗುರುಮಲ್ಲ (57), ಸವಿತಾ (44), ಶಿವಣ್ಣ (45), ಸಿದ್ದರಾಜು (45), ದಿವ್ಯಾ (35), ಅಶ್ವಿನಿ ನಾಪತ್ತೆಯಾಗಿದ್ದಾರೆ.</p>.<p>ಶ್ರೇಯಾ ಎಂಬಾಕೆಯ ಶವ ದೊರೆತಿದ್ದಾಗಿ ಕುಟುಂಬದವರು ಅಲ್ಲಿನ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಸಂತಸ್ತರ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಡಳಿತವು ಔಷಧಗಳೊಂದಿಗೆ ತಜ್ಞ ವೈದ್ಯರನ್ನು ಬುಧವಾರ ಕಳುಹಿಸಿಕೊಟ್ಟಿತು. ಗಡಿಭಾಗವಾದ ಎಚ್.ಡಿ. ಕೋಟೆಯಲ್ಲಿ ಐದು ಆಂಬುಲೆನ್ಸ್ಗಳನ್ನು ಸನ್ನದ್ಧವಾಗಿವೆ. ಕೇರಳದಿಂದ ಬರುವ ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯಕೀಯ ತಂಡವೂ ಸಿದ್ಧವಿದೆ.</p>.<p><strong>ಕೊಡಗಿನ ಬಾಲಕ ಸಾವು </strong></p><p><strong>ಮಡಿಕೇರಿ/ಸಿದ್ದಾಪುರ:</strong> ಕೇರಳದ ವಯನಾಡ್ನಲ್ಲಿ ಸಂಭವಿಸಿದ ದುರಂತದಲ್ಲಿ ಕೊಡಗು ಜಿಲ್ಲೆಯ ಸಿದ್ದಾಪುರದ ಗುಹ್ಯ ಗ್ರಾಮದ ರೋಹಿತ್ (10) ಮೃತಪಟ್ಟಿದ್ದಾನೆ. ಹದಿನೈದು ದಿನಗಳ ಹಿಂದೆ ತಾಯಿ ಕವಿತಾ ಅವರೊಂದಿಗೆ ಆತ ಅಲ್ಲಿಗೆ ತೆರಳಿದ್ದ. ಅವರು ಮಗನನ್ನು ತಮ್ಮ ಅಕ್ಕ–ಭಾವನ ಮನೆಯಲ್ಲಿರಿಸಿ ಕೆಲಸಕ್ಕೆ ತೆರಳಿದ್ದರು. ಆಗ ಗುಡ್ಡ ಕುಸಿದು ಮೂವರೂ ಮೃತಪಟ್ಟರು. ಬಾಲಕನ ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲಾಗಿದೆ’ ಎಂದು ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ರವಿ– ಕವಿತಾ ದಂಪತಿ ಗ್ರಾಮದ ಲೈನ್ಮನೆಯಲ್ಲಿ ಒಂದು ವರ್ಷದಿಂದ ವಾಸವಿದ್ದಾರೆ. ‘ವಯನಾಡ್ನ ಮೇಪಾಡಿಯಲ್ಲಿ 12 ವರ್ಷದಿಂದ ಪತಿಯೊಂದಿಗೆ ವಾಸವಿದ್ದ ಮಗಳು ವಿದ್ಯಾ (35) ದುರಂತದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಅವರ ತಾಯಿ ನೆಲ್ಯಹುದಿಕೇರಿಯ ನಲ್ವತ್ತೇಕರೆ ಗ್ರಾಮದ ಪೊನ್ನಮ್ಮ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ವಯನಾಡ್ ದುರಂತದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾಗಿರುವ ಕನ್ನಡಿಗರ ಪತ್ತೆಯು ರಾಜ್ಯದ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.</p>.<p>‘ಅಲ್ಲಿನ ದಾಖಲೆಗಳಲ್ಲಿರುವ ಮಾಹಿತಿ ಮಲೆಯಾಳಿ ಭಾಷೆಯಲ್ಲಿರುವುದರಿಂದ ಕನ್ನಡಿಗರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ’ ಎಂದು ಚಾಮರಾಜನಗರದಿಂದ ಅಲ್ಲಿಗೆ ತೆರಳಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ವಯನಾಡ್ನ ಮೇಪ್ಪಾಡಿ, ಚೂರಮಲೆ ಮತ್ತು ಮುಂಡಕೈ ಪ್ರದೇಶಗಳಲ್ಲಿ ರಕ್ಷಿಸಿದವರನ್ನು 12 ಕಾಳಜಿ ಕೇಂದ್ರಗಳಲ್ಲಿರಿಸಲಾಗಿದ್ದು 50ಕ್ಕೂ ಹೆಚ್ಚು ಕನ್ನಡ ಭಾಷಿಕರಿದ್ದಾರೆ. ಕರ್ನಾಟಕಕ್ಕೆ ಬರಲು ಬಯಸುವವರನ್ನು ಕರೆ ತರಲು ಎರಡು ಕೆಎಸ್ಆರ್ಟಿಸಿ ಬಸ್ಗಳಿವೆ. ಆದರೆ, ಬಹಳಷ್ಟು ಮಂದಿ ಬರಲು ಒಪ್ಪುತ್ತಿಲ್ಲ’ ಎಂದು ಹೇಳಿದ್ದಾರೆ.</p>.<p><strong>ಮೃತದೇಹಗಳ ಗುರುತು ಪತ್ತೆ</strong></p>.<p>ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟದ ಝಾನ್ಸಿರಾಣಿ ಅವರ ಮಗ ಎರಡೂವರೆ ವರ್ಷದ ನಿಹಾಲ್ ಹಾಗೂ ಅತ್ತೆ ಲೀಲಾವತಿ (55) ಅವರ ಮೃತದೇಹಗಳನ್ನು ಕುಟುಂಬದ ಸದಸ್ಯರು ಗುರುತು ಹಿಡಿದಿದ್ದು, ‘ಅಂತಿಮ ದರ್ಶನಕ್ಕಾದರೂ ಮೃತದೇಹಗಳನ್ನು ತರಿಸಿಕೊಡಿ’ ಎಂದು ಕೋರಿದ್ದಾರೆ.</p>.<p>‘ಕುಸಿತದ ಸ್ಥಳದಲ್ಲಿ ಮಣ್ಣಿನಿಂದ ಹೊರಗೆ ಕಾಣುತ್ತಿದ್ದ ಕೈ ಲೀಲಾವತಿಯವರದ್ದು ಹಾಗೂ ಅವರು ವಾಸವಿದ್ದ ಮನೆಯ ಸಮೀಪದ ಗಿಡಗಂಟಿಗಳ ನಡುವೆ ನಿಹಾಲ್ ಮೃತದೇಹ ಪತ್ತೆಯಾಗಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.</p>.<p>ಝಾನ್ಸಿರಾಣಿ, ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p><strong>ತಿ.ನರಸೀಪುರ; ಏಳು ಮಂದಿ ನಾಪತ್ತೆ, ಒಬ್ಬರ ಸಾವು</strong></p>.<p>ಮೈಸೂರು ಜಿಲ್ಲೆಯ ತಿ.ನರಸೀಪುರ ಮೂಲದ 7 ಜನ ನಾಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆದರೆ ಜಿಲ್ಲಾಡಳಿತವು ಸಾವನ್ನು ದೃಢಪಡಿಸಿಲ್ಲ.</p>.<p>ಹೆಪ್ಪಾಡಿ ಗ್ರಾಮ ಪಂಚಾಯಿತಿಯ ಕಾಳಜಿ ಕೇಂದ್ರದಲ್ಲಿ ಉಕ್ಕಳಗೆರೆ ಮೂಲದ 25 ಮಂದಿ ಆಸರೆ ಪಡೆದಿದ್ದಾರೆ. ಅವರೆಲ್ಲ ದಶಕಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಜೊತೆಗಿದ್ದ ಸಾವಿತ್ರಿ (52), ಗುರುಮಲ್ಲ (57), ಸವಿತಾ (44), ಶಿವಣ್ಣ (45), ಸಿದ್ದರಾಜು (45), ದಿವ್ಯಾ (35), ಅಶ್ವಿನಿ ನಾಪತ್ತೆಯಾಗಿದ್ದಾರೆ.</p>.<p>ಶ್ರೇಯಾ ಎಂಬಾಕೆಯ ಶವ ದೊರೆತಿದ್ದಾಗಿ ಕುಟುಂಬದವರು ಅಲ್ಲಿನ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಸಂತಸ್ತರ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಡಳಿತವು ಔಷಧಗಳೊಂದಿಗೆ ತಜ್ಞ ವೈದ್ಯರನ್ನು ಬುಧವಾರ ಕಳುಹಿಸಿಕೊಟ್ಟಿತು. ಗಡಿಭಾಗವಾದ ಎಚ್.ಡಿ. ಕೋಟೆಯಲ್ಲಿ ಐದು ಆಂಬುಲೆನ್ಸ್ಗಳನ್ನು ಸನ್ನದ್ಧವಾಗಿವೆ. ಕೇರಳದಿಂದ ಬರುವ ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯಕೀಯ ತಂಡವೂ ಸಿದ್ಧವಿದೆ.</p>.<p><strong>ಕೊಡಗಿನ ಬಾಲಕ ಸಾವು </strong></p><p><strong>ಮಡಿಕೇರಿ/ಸಿದ್ದಾಪುರ:</strong> ಕೇರಳದ ವಯನಾಡ್ನಲ್ಲಿ ಸಂಭವಿಸಿದ ದುರಂತದಲ್ಲಿ ಕೊಡಗು ಜಿಲ್ಲೆಯ ಸಿದ್ದಾಪುರದ ಗುಹ್ಯ ಗ್ರಾಮದ ರೋಹಿತ್ (10) ಮೃತಪಟ್ಟಿದ್ದಾನೆ. ಹದಿನೈದು ದಿನಗಳ ಹಿಂದೆ ತಾಯಿ ಕವಿತಾ ಅವರೊಂದಿಗೆ ಆತ ಅಲ್ಲಿಗೆ ತೆರಳಿದ್ದ. ಅವರು ಮಗನನ್ನು ತಮ್ಮ ಅಕ್ಕ–ಭಾವನ ಮನೆಯಲ್ಲಿರಿಸಿ ಕೆಲಸಕ್ಕೆ ತೆರಳಿದ್ದರು. ಆಗ ಗುಡ್ಡ ಕುಸಿದು ಮೂವರೂ ಮೃತಪಟ್ಟರು. ಬಾಲಕನ ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲಾಗಿದೆ’ ಎಂದು ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ರವಿ– ಕವಿತಾ ದಂಪತಿ ಗ್ರಾಮದ ಲೈನ್ಮನೆಯಲ್ಲಿ ಒಂದು ವರ್ಷದಿಂದ ವಾಸವಿದ್ದಾರೆ. ‘ವಯನಾಡ್ನ ಮೇಪಾಡಿಯಲ್ಲಿ 12 ವರ್ಷದಿಂದ ಪತಿಯೊಂದಿಗೆ ವಾಸವಿದ್ದ ಮಗಳು ವಿದ್ಯಾ (35) ದುರಂತದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಅವರ ತಾಯಿ ನೆಲ್ಯಹುದಿಕೇರಿಯ ನಲ್ವತ್ತೇಕರೆ ಗ್ರಾಮದ ಪೊನ್ನಮ್ಮ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>