<p><strong>ಹಂಪಾಪುರ</strong>: ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಡುತ್ತಿದ್ದು ಹಂಪಾಪುರ ಸಮೀಪದ ಮಾದಾಪುರ–ಬೆಳತ್ತೂರು ಸಂಪರ್ಕ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ.</p>.<p>ಈ ಭಾಗದ ಜಲಾನಯನ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಸೇತುವೆ ಮೇಲೆ ಓಡಾಡದಂತೆ ತಹಶೀಲ್ದಾರ್ ಶ್ರೀನಿವಾಸ್ ಸೂಚಿಸಿದ್ದಾರೆ. ಅದೇ ರೀತಿ ಹೊಮ್ಮರಗಳ್ಳಿಯಿಂದ ಹುಲ್ಲಹಳ್ಳಿ ಸಂಪರ್ಕ ಸೇತುವೆಯು ಸಹ ಮುಳುಗಡೆಯಾಗುವ ಸಾಧ್ಯತೆ ಇದ್ದು, ಈ ಸೇತುವೆ ಮೇಲೆ ಸಂಚರಿಸದಂತೆ ತಿಳಿಸಲಾಗಿದೆ.</p>.<p>ಸೇತುವೆಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಸಂಪರ್ಕವನ್ನ ಕಡಿತಗೊಳಿಸಿ, ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.</p>.<p>ಅಲ್ಲದೇ, ನದಿ ಪಾತ್ರದ ಜಿನ್ನಹಳ್ಳಿ, ಕಂಚಮಳ್ಳಿ, ಹಿರೇನಂದಿ, ಹೈರಿಗೆ, ಎಚ್.ಮಟಕೆರೆ, ಬೆಳತ್ತೂರು, ಚಕ್ಕೂರು, ಇಬ್ಜಾಲ್ ಸೇರಿದಂತೆ ಹಲವು ಗ್ರಾಮಗಳಿಗೆ ನದಿಯ ಕಡೆ ತೆರಳದಂತೆ ಹಾಗೂ ಕೊಳ್ಳದ ಆಸುಪಾಸಿನಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ</strong>: ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಡುತ್ತಿದ್ದು ಹಂಪಾಪುರ ಸಮೀಪದ ಮಾದಾಪುರ–ಬೆಳತ್ತೂರು ಸಂಪರ್ಕ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ.</p>.<p>ಈ ಭಾಗದ ಜಲಾನಯನ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಸೇತುವೆ ಮೇಲೆ ಓಡಾಡದಂತೆ ತಹಶೀಲ್ದಾರ್ ಶ್ರೀನಿವಾಸ್ ಸೂಚಿಸಿದ್ದಾರೆ. ಅದೇ ರೀತಿ ಹೊಮ್ಮರಗಳ್ಳಿಯಿಂದ ಹುಲ್ಲಹಳ್ಳಿ ಸಂಪರ್ಕ ಸೇತುವೆಯು ಸಹ ಮುಳುಗಡೆಯಾಗುವ ಸಾಧ್ಯತೆ ಇದ್ದು, ಈ ಸೇತುವೆ ಮೇಲೆ ಸಂಚರಿಸದಂತೆ ತಿಳಿಸಲಾಗಿದೆ.</p>.<p>ಸೇತುವೆಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಸಂಪರ್ಕವನ್ನ ಕಡಿತಗೊಳಿಸಿ, ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.</p>.<p>ಅಲ್ಲದೇ, ನದಿ ಪಾತ್ರದ ಜಿನ್ನಹಳ್ಳಿ, ಕಂಚಮಳ್ಳಿ, ಹಿರೇನಂದಿ, ಹೈರಿಗೆ, ಎಚ್.ಮಟಕೆರೆ, ಬೆಳತ್ತೂರು, ಚಕ್ಕೂರು, ಇಬ್ಜಾಲ್ ಸೇರಿದಂತೆ ಹಲವು ಗ್ರಾಮಗಳಿಗೆ ನದಿಯ ಕಡೆ ತೆರಳದಂತೆ ಹಾಗೂ ಕೊಳ್ಳದ ಆಸುಪಾಸಿನಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>