<p><strong>ಮೈಸೂರು:</strong> ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು.</p>.<p>ಗಾಳಿಯೊಂದಿಗೆ ಬಿದ್ದ ಮಳೆಯು ಇಳೆಯನ್ನು ತಂಪಾಗಿಸಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆರೆಯಿತು.</p>.<p>ಮಳೆಯು ತಾಲ್ಲೂಕಿನ ಕೆಲವೆಡೆ ಬಿದ್ದಿದೆ. ಎಲ್ಲೆಲ್ಲಿ ಕೊಳವೆಬಾವಿ ಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೋ ಅಂತಹ<br />ಕಡೆ ನಿವಾಸಿಗಳಿಗೆ ಮಳೆಯು<br />ಹರ್ಷವನ್ನು ತಂದಿದೆ. ಕೊಳವೆಬಾವಿಯಲ್ಲಿ ನೀರು ಹೆಚ್ಚಬಹುದು, ಕುಡಿಯುವ ನೀರಿನ ಬವಣೆ ನೀಗಬಹುದು ಎಂಬ ನಿರೀಕ್ಷೆ ಅವರಲ್ಲಿ ಗರಿಗೆದರಿದೆ.</p>.<p>ಸದ್ಯ, ಬಿದ್ದಿರುವ ಮಳೆಯು ಬಿತ್ತನೆಯಾಗಿರುವ ಬೆಳೆಗಳಿಗೆ ಜೀವಕಲೆಯನ್ನು ತಂದಿದೆ. ತೋಟಗಾರಿಕಾ ಬೆಳೆಗಳೂ ನಳನಳಿಸುವಂತಾಗಿದೆ. ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.</p>.<p>ಮಳೆಯಿಂದ ಹೆಚ್ಚಿನ ಅನಾಹುತ ಆಗಿಲ್ಲ. ಕುವೆಂಪುನಗರದ ಕುವೆಂಪು ಶಾಲೆಯ ಬಳಿ ಜೋರಾಗಿ ಬೀಸಿದ ಗಾಳಿಗೆ ಮರದ ರೆಂಬೆಯೊಂದು ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.</p>.<p>ಅಶೋಕಪುರಂ, ತ್ರಿವೇಣಿ ವೃತ್ತ ಹಾಗೂ ಸೂಯೆಜ್ಫಾರಂನಲ್ಲಿ ಒಳಚರಂಡಿ ನೀರು ರಸ್ತೆಯಲ್ಲೆಲ್ಲ<br />ಹರಿದು ನಾಗರಿಕರಿಗೆ ತೊಂದರೆ<br />ಉಂಟು ಮಾಡಿತು. ಪಾಲಿಕೆಯ ಅಭಯ್ ರಕ್ಷಣಾ ತಂಡ ಇಲ್ಲಿ ಕಾರ್ಯಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು.</p>.<p>ಗಾಳಿಯೊಂದಿಗೆ ಬಿದ್ದ ಮಳೆಯು ಇಳೆಯನ್ನು ತಂಪಾಗಿಸಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆರೆಯಿತು.</p>.<p>ಮಳೆಯು ತಾಲ್ಲೂಕಿನ ಕೆಲವೆಡೆ ಬಿದ್ದಿದೆ. ಎಲ್ಲೆಲ್ಲಿ ಕೊಳವೆಬಾವಿ ಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೋ ಅಂತಹ<br />ಕಡೆ ನಿವಾಸಿಗಳಿಗೆ ಮಳೆಯು<br />ಹರ್ಷವನ್ನು ತಂದಿದೆ. ಕೊಳವೆಬಾವಿಯಲ್ಲಿ ನೀರು ಹೆಚ್ಚಬಹುದು, ಕುಡಿಯುವ ನೀರಿನ ಬವಣೆ ನೀಗಬಹುದು ಎಂಬ ನಿರೀಕ್ಷೆ ಅವರಲ್ಲಿ ಗರಿಗೆದರಿದೆ.</p>.<p>ಸದ್ಯ, ಬಿದ್ದಿರುವ ಮಳೆಯು ಬಿತ್ತನೆಯಾಗಿರುವ ಬೆಳೆಗಳಿಗೆ ಜೀವಕಲೆಯನ್ನು ತಂದಿದೆ. ತೋಟಗಾರಿಕಾ ಬೆಳೆಗಳೂ ನಳನಳಿಸುವಂತಾಗಿದೆ. ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.</p>.<p>ಮಳೆಯಿಂದ ಹೆಚ್ಚಿನ ಅನಾಹುತ ಆಗಿಲ್ಲ. ಕುವೆಂಪುನಗರದ ಕುವೆಂಪು ಶಾಲೆಯ ಬಳಿ ಜೋರಾಗಿ ಬೀಸಿದ ಗಾಳಿಗೆ ಮರದ ರೆಂಬೆಯೊಂದು ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.</p>.<p>ಅಶೋಕಪುರಂ, ತ್ರಿವೇಣಿ ವೃತ್ತ ಹಾಗೂ ಸೂಯೆಜ್ಫಾರಂನಲ್ಲಿ ಒಳಚರಂಡಿ ನೀರು ರಸ್ತೆಯಲ್ಲೆಲ್ಲ<br />ಹರಿದು ನಾಗರಿಕರಿಗೆ ತೊಂದರೆ<br />ಉಂಟು ಮಾಡಿತು. ಪಾಲಿಕೆಯ ಅಭಯ್ ರಕ್ಷಣಾ ತಂಡ ಇಲ್ಲಿ ಕಾರ್ಯಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>