<p><strong>ಹುಣಸೂರು</strong>: ತಾಲ್ಲೂಕಿನ ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸುವ 3 ಪ್ರಮುಖ ಏತ ನೀರಾವರಿ ಯೋಜನೆಗಳು ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದು, ಮಳೆಗಾಲದ ಪ್ರಯೋಜನ ಕೆರೆಗೆ ದೊರೆಕುತ್ತಿಲ್ಲ.</p>.<p>ಮುಂಗಾರಿನಲ್ಲಿ ಮೈದುಂಬಿ ಹರಿಯುವ ನದಿ ನೀರನ್ನು ಬಳಕೆ ಮಾಡುವ ಉದ್ದೇಶ ಹೊಂದಿದ್ದ ನಿಲುವಾಗಿಲು, ಕೊಳಗಟ್ಟ ಮತ್ತು ಮರದೂರು ಏತ ನೀರಾವರಿ ಯೋಜನೆಗಳು ಹೆಸರಿಗಷ್ಟೇ ಇದ್ದು, ಇದನ್ನು ಅವಲಂಬಿಸಿರುವ 24 ಕೆರೆಗಳು ನೀರಿಲ್ಲದೆ ಬರಿದಾಗುತ್ತಿವೆ.</p>.<p>ಈ ಮೂರೂ ಯೋಜನೆಗಳಲ್ಲಿ ಬಳಸಿರುವ ಪೈಪ್ಲೈನ್ಗಳು ಗುಣಮಟ್ಟವಿಲ್ಲದೆ ಅಲ್ಲಲ್ಲಿ ಒಡೆದಿವೆ. ಮರದೂರು ಘಟಕದ ಯಂತ್ರ ಕೆಟ್ಟುನಿಂತಿದೆ. ಈ ಎಲ್ಲವನ್ನು ಪರಿಶೀಲಿಸಿ ಮಳೆಗಾಲದ ಕಾರ್ಯಾಚರಣೆಗೆ ಸನ್ನದ್ಧವಾಗಿರಬೇಕಿದ್ದ ಆಡಳಿತ ಯಂತ್ರವೂ ವಿಫಲವಾಗಿದ್ದು, ಸಾರ್ವಜನಿಕರೂ ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>2018ರಲ್ಲಿ ₹ 3.4 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡ ಕೊಳಗಟ್ಟ ಏತನೀರಾವರಿ ಯೋಜನೆಯ ಲಾಭ ಶ್ರವಣನಹಳ್ಳಿ ಕೆರೆ, ರಾಯನಹಳ್ಳಿ, ಗುರುಗಳ ಕಟ್ಟೆ, ಕೊಳಗಟ್ಟ ಕೆರೆ, ಕುಪ್ಪೆ ಕೆರೆ, ಕೊಳಗಟ್ಟ ಹೊಸಕೆರೆ ಮತ್ತು ರಂಗಯ್ಯನ ಕೊಪ್ಪಲು ಕೆರೆಗಳಿಗೆ ಸಿಗಬೇಕಿದ್ದು, ಪೈಪ್ ಅಲ್ಲಲ್ಲಿ ಒಡೆದು ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>₹ 23 ಕೋಟಿ ಅನುದಾನದಲ್ಲಿ ಜಾರಿಗೊಂಡ, 14 ಕೆರೆಗಳಿಗೆ ನೀರು ತುಂಬಿಸಬೇಕಿದ್ದ ನಿಲುವಾಗಿಲು ಯೋಜನೆ ಪೂರ್ಣವಾಗದಿರುವುದು ಒಟ್ಟಾರೆ ಯೋಜನೆಯ ಉದ್ದೇಶಕ್ಕೆ ದೊಡ್ಡ ಹಿನ್ನಡೆಯಾಗಿದೆ.</p>.<p>ತಾಲ್ಲೂಕಿನ ಅತಿ ಹಳೆಯ ಏತ ನೀರಾವರಿ ಎಂಬ ಹೆಗ್ಗಳಿಕೆ ಹೊಂದಿರುವ ಮರದೂರು ಏತ ನೀರಾವರಿ ಯೋಜನೆಗೆ 2013–14 ರಲ್ಲಿ ₹ 2 ಕೋಟಿ ಅನುದಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಿದ್ದರೂ, ಗುಣಮಟ್ಟದ ಪೈಪ್ ಅಳವಡಿಸದೆ ಕೂಗಳತೆ ದೂರದ ಹೊಸಕೆರೆಗೂ ನೀರು ಸೇರದ ಪರಿಸ್ಥಿತಿಯಲ್ಲಿದೆ.</p>.<p>ಸಣ್ಣ ನೀರಾವರಿ ಇಲಾಖೆ ಎಇಇ ಈಶ್ವರ್ ಮಾತನಾಡಿ, ‘ತಾಲ್ಲೂಕಿನಲ್ಲಿ 11 ಏತ ನೀರಾವರಿ ಯೋಜನೆ ಜಾರಿಯಲ್ಲಿದ್ದು, ಕೆಲವು ಘಟಕ ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಮರದೂರು ಏತ ನೀರಾವರಿ ಘಟಕದಲ್ಲಿ ಅಳವಡಿಸಿದ್ದ ಪೈಪ್ ಲೈನ್ ಸಮಸ್ಯೆಯಿಂದ ಈಗ ಮತ್ತೊಮ್ಮೆ ದುರಸ್ಥಿಗೆ ₹ 1 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.</p>.<p>‘ನಿಲುವಾಗಿಲು ಏತ ನೀರಾವರಿ ಯೋಜನೆಯಲ್ಲಿ ಹಬ್ಬನಕುಪ್ಪೆ ಗ್ರಾಮದ ಎರಡು ಕೆರೆಗಳಿಗೆ ಈ ಹಿಂದೆ ಗ್ರಾವಿಟೇಶನ್ ತಂತ್ರಜ್ಞಾನದಲ್ಲಿ ನೀರು ಹರಿಸಲು ಕ್ರಮವಹಿಸಿತ್ತು, ಬದಲಾದ ವ್ಯವಸ್ಥೆಯಿಂದಾಗಿ ಈಗ ₹ 2 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>Highlights - ಪೂರ್ಣವಾಗದ ನಿಲುವಾಗಿಲು ಯೋಜನೆ ಒಡೆದ ಪೈಪ್; ತಲುಪದ ನೀರು ಕಾರ್ಯಾಚರಣೆ ಸಮಯದಲ್ಲಿ ಕಾಮಗಾರಿ; ಆಕ್ರೋಶ</p>.<p>Quote - ಮರದೂರು ಏತ ನೀರಾವರಿ ಆರಂಭದಿಂದಲೂ ಸಮಸ್ಯೆ ಎದುರಿಸುತ್ತಿದ್ದು ಕಳೆದ ಸಾಲಿನಲ್ಲಿ ಮಳೆ ಕಡಿಮೆಯಾಗಿ ನೀರಿಲ್ಲ ಈ ವರ್ಷ ಪೈಪ್ ಮಾರ್ಗ ದುರಸ್ತಿಗೊಳ್ಳದೆ ನೀರಿಲ್ಲ ಸ್ವಾಮಿ ಪ್ರಗತಿಪರ ರೈತ ಮರದೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ತಾಲ್ಲೂಕಿನ ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸುವ 3 ಪ್ರಮುಖ ಏತ ನೀರಾವರಿ ಯೋಜನೆಗಳು ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದು, ಮಳೆಗಾಲದ ಪ್ರಯೋಜನ ಕೆರೆಗೆ ದೊರೆಕುತ್ತಿಲ್ಲ.</p>.<p>ಮುಂಗಾರಿನಲ್ಲಿ ಮೈದುಂಬಿ ಹರಿಯುವ ನದಿ ನೀರನ್ನು ಬಳಕೆ ಮಾಡುವ ಉದ್ದೇಶ ಹೊಂದಿದ್ದ ನಿಲುವಾಗಿಲು, ಕೊಳಗಟ್ಟ ಮತ್ತು ಮರದೂರು ಏತ ನೀರಾವರಿ ಯೋಜನೆಗಳು ಹೆಸರಿಗಷ್ಟೇ ಇದ್ದು, ಇದನ್ನು ಅವಲಂಬಿಸಿರುವ 24 ಕೆರೆಗಳು ನೀರಿಲ್ಲದೆ ಬರಿದಾಗುತ್ತಿವೆ.</p>.<p>ಈ ಮೂರೂ ಯೋಜನೆಗಳಲ್ಲಿ ಬಳಸಿರುವ ಪೈಪ್ಲೈನ್ಗಳು ಗುಣಮಟ್ಟವಿಲ್ಲದೆ ಅಲ್ಲಲ್ಲಿ ಒಡೆದಿವೆ. ಮರದೂರು ಘಟಕದ ಯಂತ್ರ ಕೆಟ್ಟುನಿಂತಿದೆ. ಈ ಎಲ್ಲವನ್ನು ಪರಿಶೀಲಿಸಿ ಮಳೆಗಾಲದ ಕಾರ್ಯಾಚರಣೆಗೆ ಸನ್ನದ್ಧವಾಗಿರಬೇಕಿದ್ದ ಆಡಳಿತ ಯಂತ್ರವೂ ವಿಫಲವಾಗಿದ್ದು, ಸಾರ್ವಜನಿಕರೂ ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>2018ರಲ್ಲಿ ₹ 3.4 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡ ಕೊಳಗಟ್ಟ ಏತನೀರಾವರಿ ಯೋಜನೆಯ ಲಾಭ ಶ್ರವಣನಹಳ್ಳಿ ಕೆರೆ, ರಾಯನಹಳ್ಳಿ, ಗುರುಗಳ ಕಟ್ಟೆ, ಕೊಳಗಟ್ಟ ಕೆರೆ, ಕುಪ್ಪೆ ಕೆರೆ, ಕೊಳಗಟ್ಟ ಹೊಸಕೆರೆ ಮತ್ತು ರಂಗಯ್ಯನ ಕೊಪ್ಪಲು ಕೆರೆಗಳಿಗೆ ಸಿಗಬೇಕಿದ್ದು, ಪೈಪ್ ಅಲ್ಲಲ್ಲಿ ಒಡೆದು ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>₹ 23 ಕೋಟಿ ಅನುದಾನದಲ್ಲಿ ಜಾರಿಗೊಂಡ, 14 ಕೆರೆಗಳಿಗೆ ನೀರು ತುಂಬಿಸಬೇಕಿದ್ದ ನಿಲುವಾಗಿಲು ಯೋಜನೆ ಪೂರ್ಣವಾಗದಿರುವುದು ಒಟ್ಟಾರೆ ಯೋಜನೆಯ ಉದ್ದೇಶಕ್ಕೆ ದೊಡ್ಡ ಹಿನ್ನಡೆಯಾಗಿದೆ.</p>.<p>ತಾಲ್ಲೂಕಿನ ಅತಿ ಹಳೆಯ ಏತ ನೀರಾವರಿ ಎಂಬ ಹೆಗ್ಗಳಿಕೆ ಹೊಂದಿರುವ ಮರದೂರು ಏತ ನೀರಾವರಿ ಯೋಜನೆಗೆ 2013–14 ರಲ್ಲಿ ₹ 2 ಕೋಟಿ ಅನುದಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಿದ್ದರೂ, ಗುಣಮಟ್ಟದ ಪೈಪ್ ಅಳವಡಿಸದೆ ಕೂಗಳತೆ ದೂರದ ಹೊಸಕೆರೆಗೂ ನೀರು ಸೇರದ ಪರಿಸ್ಥಿತಿಯಲ್ಲಿದೆ.</p>.<p>ಸಣ್ಣ ನೀರಾವರಿ ಇಲಾಖೆ ಎಇಇ ಈಶ್ವರ್ ಮಾತನಾಡಿ, ‘ತಾಲ್ಲೂಕಿನಲ್ಲಿ 11 ಏತ ನೀರಾವರಿ ಯೋಜನೆ ಜಾರಿಯಲ್ಲಿದ್ದು, ಕೆಲವು ಘಟಕ ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಮರದೂರು ಏತ ನೀರಾವರಿ ಘಟಕದಲ್ಲಿ ಅಳವಡಿಸಿದ್ದ ಪೈಪ್ ಲೈನ್ ಸಮಸ್ಯೆಯಿಂದ ಈಗ ಮತ್ತೊಮ್ಮೆ ದುರಸ್ಥಿಗೆ ₹ 1 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.</p>.<p>‘ನಿಲುವಾಗಿಲು ಏತ ನೀರಾವರಿ ಯೋಜನೆಯಲ್ಲಿ ಹಬ್ಬನಕುಪ್ಪೆ ಗ್ರಾಮದ ಎರಡು ಕೆರೆಗಳಿಗೆ ಈ ಹಿಂದೆ ಗ್ರಾವಿಟೇಶನ್ ತಂತ್ರಜ್ಞಾನದಲ್ಲಿ ನೀರು ಹರಿಸಲು ಕ್ರಮವಹಿಸಿತ್ತು, ಬದಲಾದ ವ್ಯವಸ್ಥೆಯಿಂದಾಗಿ ಈಗ ₹ 2 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>Highlights - ಪೂರ್ಣವಾಗದ ನಿಲುವಾಗಿಲು ಯೋಜನೆ ಒಡೆದ ಪೈಪ್; ತಲುಪದ ನೀರು ಕಾರ್ಯಾಚರಣೆ ಸಮಯದಲ್ಲಿ ಕಾಮಗಾರಿ; ಆಕ್ರೋಶ</p>.<p>Quote - ಮರದೂರು ಏತ ನೀರಾವರಿ ಆರಂಭದಿಂದಲೂ ಸಮಸ್ಯೆ ಎದುರಿಸುತ್ತಿದ್ದು ಕಳೆದ ಸಾಲಿನಲ್ಲಿ ಮಳೆ ಕಡಿಮೆಯಾಗಿ ನೀರಿಲ್ಲ ಈ ವರ್ಷ ಪೈಪ್ ಮಾರ್ಗ ದುರಸ್ತಿಗೊಳ್ಳದೆ ನೀರಿಲ್ಲ ಸ್ವಾಮಿ ಪ್ರಗತಿಪರ ರೈತ ಮರದೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>