<p>ಕವಿತಾಳ: ಆನಂದಗಲ್ ಗ್ರಾಮದ ರೈತ ಅಖಂಡೇಶ್ವರ ಅವರು ಹರ್ವಾಪುರ ಗ್ರಾಮದಲ್ಲಿನ 4 ಎಕರೆ 20 ಗುಂಟೆ ಸ್ವಂತ ಜಮೀನಿನಲ್ಲಿ ಪಪ್ಪಾಯ ಬೆಳೆದು ಲಾಭ ಪಡೆದಿದ್ದಾರೆ.</p>.<p>ಈ ವರ್ಷ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಛಲ ಬಿಡದ ಅವರು ಪಕ್ಕದ ಜಮೀನಿನಿಂದ ಕೊಳವೆಬಾವಿ ಲೀಜ್ ಪಡೆದು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಎರಡೂವರೆ ತಿಂಗಳಿಂದ ಇಳುವರಿ ಆರಂಭವಾಗಿದ್ದು ಇದುವರೆಗೂ ಅಂದಾಜು 130 ಟನ್ ಬೆಳೆಯನ್ನು ಪ್ರತಿ ಕೆ.ಜಿಗೆ ₹4 ರಿಂದ ₹16 ವರೆಗೆ ಮಾರಾಟ ಮಾಡಿದ್ದಾರೆ. ಇನ್ನೂ 150 ಟನ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.</p>.<p>ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ದಾಳಿಂಬೆ ಮತ್ತು ಪಪ್ಪಾಯ ನಾಟಿ ಮಾಡಿದ್ದು ಹನಿ ನೀರಾವರಿ ಪದ್ಧತಿ ಅಳವಡಿಕೆ, ರಸಗೊಬ್ಬರ, ಕುರಿ ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರು ಸೇರಿದಂತೆ ಒಂದು ಎಕರೆಗೆ ಅಂದಾಜು ₹ 1 ಲಕ್ಷ ವೆಚ್ಚ ತಗುಲಿದೆ.</p>.<p>ತೋಟಗಾರಿಕೆ ಇಲಾಖೆಯ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದಿದ್ದು 40 ಕೂಲಿ ಕಾರ್ಮಿಕರಿಗೆ 14 ದಿನಗಳ ಅವಧಿಗೆ ಕೆಲಸ ನೀಡಿ 560 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.</p>.<p>’ಪಂದರಾ ನಂಬರ್ (15) ತಳಿ ಪಪ್ಪಾಯ ನಾಟಿ ಮಾಡಿದ್ದೆ. ಅದು ರೋಗ ರಹಿತ ತಳಿ. ಹೀಗಾಗಿ ನಿರ್ವಹಣೆ ಖರ್ಚು ಕಡಿಮೆ. ಈ ವರ್ಷ ಮಳೆ ಕೊರತೆಯಿಂದ ಎರಡು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿತು. ಅನಿವಾರ್ಯವಾಗಿ ವರ್ಷಕ್ಕೆ ₹ 12 ಸಾವಿರದಂತೆ ಪಕ್ಕದ ಜಮೀನಿನಲ್ಲಿನ ಕೊಳವೆಬಾವಿಯನ್ನು ಲೀಜ್ ಪಡೆದಿದ್ದೇನೆ. ಒಂದು ವರ್ಷದ ಕೊಳವೆಬಾವಿಯ ಬಾಡಿಗೆ, ಪೈಪ್ ಲೈನ್ ಅಳವಡಿಕೆ ಸೇರಿ ಇದುವರೆಗೂ ಅಂದಾಜ ₹7 ಲಕ್ಷ ಖರ್ಚು ಮಾಡಿದ್ದೇನೆ. ₹ 11.50 ಲಕ್ಷದ ಬೆಳೆ ಕೈಸೇರಿ ಖರ್ಚು ತೆಗೆದು ₹ 4.5 ಲಕ್ಷ ಲಾಭ ಪಡೆದಿದ್ದೇನೆ. ಈಗ ಮುಂದೆ ಬರುವ ಇಳುವರಿ ಸಂಪೂರ್ಣ ಲಾಭದಾಯಕʼ ಎಂದು ರೈತ ಅಖಂಡೇಶ್ವರ ಹೇಳಿದರು.</p>.<p>’ಮಳೆ ಕೊರತೆಯಿಂದ ಬರಗಾಲ ನಿರ್ಮಾಣವಾಗಿದೆ. ಈ ಸಂದರ್ಭದಲ್ಲೂ ಉತ್ತಮ ಬೆಳೆ ಬೆಳೆಯುವ ಮೂಲಕ ಅಖಂಡೇಶ್ವರ ಇತರ ರೈತರಿಗೆ ಮಾದರಿಯಾಗಿದ್ದಾರೆʼ.</p>.<p><strong> ಕರಿಬಸವ ಆನಂದಗಲ್, ರೈತ</strong></p>.<p>ಪಾಮನಕಲ್ಲೂರು ಭಾಗದಲ್ಲಿ ಈ ವರ್ಷ ರೈತರು ಅತಿ ಹೆಚ್ಚು ಪಪ್ಪಾಯ ಬೆಳೆದಿದ್ದಾರೆ. ಮಳೆ ಕೊರತೆ ನಡುವೆಯೂ ಉತ್ತಮ ಇಳುವರಿ ಬಂದಿದೆ. ರೈತರು ಇಲಾಖೆ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ</p>.<p><strong>ಚಂದ್ರಶೇಖರ ಕುರಿ, ಸಹಾಯಕ ನಿರ್ದೆಶಕ ತೋಟಗಾರಿಕೆ ಇಲಾಖೆ ಮಾನ್ವಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕವಿತಾಳ: ಆನಂದಗಲ್ ಗ್ರಾಮದ ರೈತ ಅಖಂಡೇಶ್ವರ ಅವರು ಹರ್ವಾಪುರ ಗ್ರಾಮದಲ್ಲಿನ 4 ಎಕರೆ 20 ಗುಂಟೆ ಸ್ವಂತ ಜಮೀನಿನಲ್ಲಿ ಪಪ್ಪಾಯ ಬೆಳೆದು ಲಾಭ ಪಡೆದಿದ್ದಾರೆ.</p>.<p>ಈ ವರ್ಷ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಛಲ ಬಿಡದ ಅವರು ಪಕ್ಕದ ಜಮೀನಿನಿಂದ ಕೊಳವೆಬಾವಿ ಲೀಜ್ ಪಡೆದು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಎರಡೂವರೆ ತಿಂಗಳಿಂದ ಇಳುವರಿ ಆರಂಭವಾಗಿದ್ದು ಇದುವರೆಗೂ ಅಂದಾಜು 130 ಟನ್ ಬೆಳೆಯನ್ನು ಪ್ರತಿ ಕೆ.ಜಿಗೆ ₹4 ರಿಂದ ₹16 ವರೆಗೆ ಮಾರಾಟ ಮಾಡಿದ್ದಾರೆ. ಇನ್ನೂ 150 ಟನ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.</p>.<p>ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ದಾಳಿಂಬೆ ಮತ್ತು ಪಪ್ಪಾಯ ನಾಟಿ ಮಾಡಿದ್ದು ಹನಿ ನೀರಾವರಿ ಪದ್ಧತಿ ಅಳವಡಿಕೆ, ರಸಗೊಬ್ಬರ, ಕುರಿ ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರು ಸೇರಿದಂತೆ ಒಂದು ಎಕರೆಗೆ ಅಂದಾಜು ₹ 1 ಲಕ್ಷ ವೆಚ್ಚ ತಗುಲಿದೆ.</p>.<p>ತೋಟಗಾರಿಕೆ ಇಲಾಖೆಯ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದಿದ್ದು 40 ಕೂಲಿ ಕಾರ್ಮಿಕರಿಗೆ 14 ದಿನಗಳ ಅವಧಿಗೆ ಕೆಲಸ ನೀಡಿ 560 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.</p>.<p>’ಪಂದರಾ ನಂಬರ್ (15) ತಳಿ ಪಪ್ಪಾಯ ನಾಟಿ ಮಾಡಿದ್ದೆ. ಅದು ರೋಗ ರಹಿತ ತಳಿ. ಹೀಗಾಗಿ ನಿರ್ವಹಣೆ ಖರ್ಚು ಕಡಿಮೆ. ಈ ವರ್ಷ ಮಳೆ ಕೊರತೆಯಿಂದ ಎರಡು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿತು. ಅನಿವಾರ್ಯವಾಗಿ ವರ್ಷಕ್ಕೆ ₹ 12 ಸಾವಿರದಂತೆ ಪಕ್ಕದ ಜಮೀನಿನಲ್ಲಿನ ಕೊಳವೆಬಾವಿಯನ್ನು ಲೀಜ್ ಪಡೆದಿದ್ದೇನೆ. ಒಂದು ವರ್ಷದ ಕೊಳವೆಬಾವಿಯ ಬಾಡಿಗೆ, ಪೈಪ್ ಲೈನ್ ಅಳವಡಿಕೆ ಸೇರಿ ಇದುವರೆಗೂ ಅಂದಾಜ ₹7 ಲಕ್ಷ ಖರ್ಚು ಮಾಡಿದ್ದೇನೆ. ₹ 11.50 ಲಕ್ಷದ ಬೆಳೆ ಕೈಸೇರಿ ಖರ್ಚು ತೆಗೆದು ₹ 4.5 ಲಕ್ಷ ಲಾಭ ಪಡೆದಿದ್ದೇನೆ. ಈಗ ಮುಂದೆ ಬರುವ ಇಳುವರಿ ಸಂಪೂರ್ಣ ಲಾಭದಾಯಕʼ ಎಂದು ರೈತ ಅಖಂಡೇಶ್ವರ ಹೇಳಿದರು.</p>.<p>’ಮಳೆ ಕೊರತೆಯಿಂದ ಬರಗಾಲ ನಿರ್ಮಾಣವಾಗಿದೆ. ಈ ಸಂದರ್ಭದಲ್ಲೂ ಉತ್ತಮ ಬೆಳೆ ಬೆಳೆಯುವ ಮೂಲಕ ಅಖಂಡೇಶ್ವರ ಇತರ ರೈತರಿಗೆ ಮಾದರಿಯಾಗಿದ್ದಾರೆʼ.</p>.<p><strong> ಕರಿಬಸವ ಆನಂದಗಲ್, ರೈತ</strong></p>.<p>ಪಾಮನಕಲ್ಲೂರು ಭಾಗದಲ್ಲಿ ಈ ವರ್ಷ ರೈತರು ಅತಿ ಹೆಚ್ಚು ಪಪ್ಪಾಯ ಬೆಳೆದಿದ್ದಾರೆ. ಮಳೆ ಕೊರತೆ ನಡುವೆಯೂ ಉತ್ತಮ ಇಳುವರಿ ಬಂದಿದೆ. ರೈತರು ಇಲಾಖೆ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ</p>.<p><strong>ಚಂದ್ರಶೇಖರ ಕುರಿ, ಸಹಾಯಕ ನಿರ್ದೆಶಕ ತೋಟಗಾರಿಕೆ ಇಲಾಖೆ ಮಾನ್ವಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>