<p><strong>ಹಟ್ಟಿಚಿನ್ನದಗಣಿ:</strong> ಭೂಗರ್ಭದ ಆಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತೆ ಹಾಗೂ ಸುರಕ್ಷಿತ ಸಾಧನಗಳನ್ನು ಒದಗಿಸಿ ಪ್ರಾಣ ಹಾನಿ ಆಗುವುದನ್ನು ತಡೆಯಬೇಕು ಎಂದು ಸ್ಥಳೀಯ ಸಿಐಟಿಯು ಕಾರ್ಮಿಕ ಸಂಘಟನೆ ಆಗ್ರಹಿಸಿದೆ.</p>.<p>ನಿರಂತರವಾಗಿ ಭೂ ಕೆಳಮೈನಲ್ಲಿ ಬ್ಲಾಸ್ಟ್ ಹಾಗೂ ಕಲ್ಲು ಬಂಡೆ ಕುಸಿತ ಸಂಭವಿಸುತ್ತಿದ್ದು, ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಕಾರ್ಮಿಕರ ಜೀವದ ಜತೆ ಕಂಪನಿ ಆಡಳಿತ ವರ್ಗ ಚೆಲ್ಲಾಟವಾತ್ತಿದೆ. ಕಾರ್ಮಿಕರನ್ನು ಯಂತ್ರದಂತೆ ಟ್ರೀಟ್ ಮಾಡುತ್ತಿರುವ ಗಣಿ ಕಂಪನಿಯ ಕಾರ್ಮಿಕ ವಿರೋಧಿ ಕ್ರಮವನ್ನು ಅನುಸರಿಸುತ್ತಿದೆ ಎಂದು ದೂರಿದೆ.</p>.<p>ಶುಕ್ರವಾರ ಸಂಭವಿಸಿದ ಘಟನೆಯಲ್ಲಿ ಮೃತ ಕುಟುಂಬಕ್ಕೆ ಘೋಷಣೆ ಮಾಡಿದ ಪರಿಹಾರ ಮೊತ್ತ ಕಡಿಮೆಯಾಗಿದೆ. ಜೀವ ಕಳೆದುಕೊಂಡ ಮೌನೇಶ ಎನ್ನುವ ಕಾರ್ಮಿಕ ಕುಟುಂಬಕ್ಕೆ ಕೇವಲ ₹5 ಲಕ್ಷ ಘೋಷಿಸಿ ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ. ಇದನ್ನು ಸಿಐಟಿಯು ಸ್ಥಳೀಯ ಘಟಕ ಖಂಡಿಸುತ್ತದೆ. ಮೃತ ಕುಟುಂಬಕ್ಕೆ ₹50 ಲಕ್ಷ ಮೊತ್ತದ ಪರಿಹಾರ ನೀಡಬೇಕು. ಮುಂದೆ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತೆಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡರಾದ ಅಮರೇಶ ಗುರಿಕಾರ, ರಮೇಶ ವೀರಾಪುರ, ಹನೀಫ್, ಅಲ್ಲಾಭಕ್ಷ, ಫಕ್ರುದ್ಧೀನ್, ವೆಂಕಟೇಶ್, ಮಲ್ಲಿಕಾರ್ಜುನ, ಪೆಂಚಲಯ್ಯ, ನಿಂಗಪ್ಪ.ಎಂ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿಚಿನ್ನದಗಣಿ:</strong> ಭೂಗರ್ಭದ ಆಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತೆ ಹಾಗೂ ಸುರಕ್ಷಿತ ಸಾಧನಗಳನ್ನು ಒದಗಿಸಿ ಪ್ರಾಣ ಹಾನಿ ಆಗುವುದನ್ನು ತಡೆಯಬೇಕು ಎಂದು ಸ್ಥಳೀಯ ಸಿಐಟಿಯು ಕಾರ್ಮಿಕ ಸಂಘಟನೆ ಆಗ್ರಹಿಸಿದೆ.</p>.<p>ನಿರಂತರವಾಗಿ ಭೂ ಕೆಳಮೈನಲ್ಲಿ ಬ್ಲಾಸ್ಟ್ ಹಾಗೂ ಕಲ್ಲು ಬಂಡೆ ಕುಸಿತ ಸಂಭವಿಸುತ್ತಿದ್ದು, ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಕಾರ್ಮಿಕರ ಜೀವದ ಜತೆ ಕಂಪನಿ ಆಡಳಿತ ವರ್ಗ ಚೆಲ್ಲಾಟವಾತ್ತಿದೆ. ಕಾರ್ಮಿಕರನ್ನು ಯಂತ್ರದಂತೆ ಟ್ರೀಟ್ ಮಾಡುತ್ತಿರುವ ಗಣಿ ಕಂಪನಿಯ ಕಾರ್ಮಿಕ ವಿರೋಧಿ ಕ್ರಮವನ್ನು ಅನುಸರಿಸುತ್ತಿದೆ ಎಂದು ದೂರಿದೆ.</p>.<p>ಶುಕ್ರವಾರ ಸಂಭವಿಸಿದ ಘಟನೆಯಲ್ಲಿ ಮೃತ ಕುಟುಂಬಕ್ಕೆ ಘೋಷಣೆ ಮಾಡಿದ ಪರಿಹಾರ ಮೊತ್ತ ಕಡಿಮೆಯಾಗಿದೆ. ಜೀವ ಕಳೆದುಕೊಂಡ ಮೌನೇಶ ಎನ್ನುವ ಕಾರ್ಮಿಕ ಕುಟುಂಬಕ್ಕೆ ಕೇವಲ ₹5 ಲಕ್ಷ ಘೋಷಿಸಿ ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ. ಇದನ್ನು ಸಿಐಟಿಯು ಸ್ಥಳೀಯ ಘಟಕ ಖಂಡಿಸುತ್ತದೆ. ಮೃತ ಕುಟುಂಬಕ್ಕೆ ₹50 ಲಕ್ಷ ಮೊತ್ತದ ಪರಿಹಾರ ನೀಡಬೇಕು. ಮುಂದೆ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತೆಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡರಾದ ಅಮರೇಶ ಗುರಿಕಾರ, ರಮೇಶ ವೀರಾಪುರ, ಹನೀಫ್, ಅಲ್ಲಾಭಕ್ಷ, ಫಕ್ರುದ್ಧೀನ್, ವೆಂಕಟೇಶ್, ಮಲ್ಲಿಕಾರ್ಜುನ, ಪೆಂಚಲಯ್ಯ, ನಿಂಗಪ್ಪ.ಎಂ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>