<p><strong>ರಾಯಚೂರು: ‘</strong>ರೈತರು ಅಧಿಕ ಸಾಂದ್ರ ಪದ್ಧತಿಯಲ್ಲಿ ಹತ್ತಿ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕು‘ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತಪ್ಪ ಶ್ರೀಹರಿ ರೈತರಿಗೆ ಸಲಹೆ ನೀಡಿದರು.</p>.<p>ರಾಯಚೂರು ತಾಲ್ಲೂಕಿನ ಪುರುತಿಪ್ಲಿ ಗ್ರಾಮದಲ್ಲಿ ರೈತರಿಗೆ ಸಾಂದ್ರ ಪದ್ಧತಿ ಹತ್ತಿ ಬೆಳೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಇಲ್ಲಿನ ವಾತವರಣ, ಕಡಿಮೆ ಪ್ರಮಾಣದ ಮಳೆ ಇವೆಲ್ಲವೂ ಬೆಳೆಯ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಂದ್ರ ಪದ್ಧತಿ ಅನುಸರಿಸಬೇಕು‘ ಎಂದು ಹೇಳಿದರು.</p>.<p>‘ಕಳೆದ ವರ್ಷ ತೀವ್ರ ಮಳೆಯ ಕೊರತೆಯ ನಡುವೆಯೂ ಕುರ್ಡಿ ಗ್ರಾಮದ ರೈತರೊಬ್ಬರು ಮಳೆಯಾಶ್ರಿತ ಭೂಮಿಯಲ್ಲಿ ಸಾಂದ್ರ ಪದ್ಧತಿಯಲ್ಲಿ ಹತ್ತಿ ಬೆಳೆದು 12 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಕಡಿಮೆ ಆಳದ ಅಥವಾ ಆಳವಲ್ಲದ ಭೂಮಿಯಲ್ಲಿ ಅಂತರ 90 x 15 ಸೆಂ.ಮೀ ಮತ್ತು ಆಳದ ಅಥವಾ ಮಧ್ಯಮ ಆಳದ ಭೂಮಿಯಲ್ಲಿ 90 x 30 ಸೆಂ.ಮೀ ಅಂತರದಲ್ಲಿ ಹತ್ತಿ ಬೇಸಾಯ ಮಾಡುವ ಮೂಲಕ ಯಶ ಸಾಧಿಸಬೇಕು’ ಎಂದು ಸಲಹೆ ನೀಡಿದರು.</p>.<p>ಎಐಸಿಆರ್ಪಿ ಹತ್ತಿ ವಿಭಾಗದ ಮುಖ್ಯಸ್ಥ ಜಯಪ್ರಕಾಶ ನಿಡಗುಂದಿ ಮಾತನಾಡಿ, ‘ಸಾಂದ್ರ ಬೇಸಾಯ ಮಾಡಲು ಅಗತ್ಯವಿರುವ ಹೈಬ್ರಿಡ್ ತಳಿಗಳು ಹಾಗೂ ಅಂತಹ ಬೀಜಗಳನ್ನು ಬೆಳೆಸಿದಲ್ಲಿ ಸರಿಯಾದ ಸಮಯಕ್ಕೆ ಅಂದರೆ, ಶೇಕಡ 25 ರಷ್ಟು ಸಾರಜನಕ ಮತ್ತು ಪೊಟ್ಯಾಷ್ ಮತ್ತು ಶೇ 100ರಷ್ಟು ರಂಜಕ ಗೊಬ್ಬರ ಇನ್ನುಳಿದ ಶೇಕಡ 75 ರಷ್ಟು ನೈಟ್ರೋಜನ್ ಮತ್ತು ಪೊಟ್ಯಾಷ್ ಗೊಬ್ಬರವನ್ನು 30, 60, 90 ದಿನಗಳಿದ್ದಾಗ ಸಮನಾಗಿ ನೀಡಬೇಕು‘ ಎಂದು ತಿಳಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಶ್ರೀವಾಣಿ ಜಿ.ಎನ್. ಮಾತನಾಡಿ, ‘ಹತ್ತಿ ಬೆಳೆಯಲ್ಲಿ ರೈತರು ಮುಖ್ಯವಾಗಿ ಎದುರಿಸುತ್ತಿರುವ ಗುಲಾಬಿ ಕಾಯಿಕೊರಕ ಕೀಟದ ಹತೋಟಿಗೆ ಮೋಹಕ ಬಲೆ ಫೆರೊಮೆನಾ ಟ್ರಾಪ್ಸ್ ಹಳದಿ ಅಂಟಿನ ಬಲೆ ಬಳಕೆ ಮಾಡಬೇಕು. ಹತ್ತಿ ಬಿಡಿಸುವುದು ಮುಗಿದ ಕೂಡಲೇ ಅದನ್ನು ಕಾಟನ್ ಶ್ರೇಡ್ಡರ ಯಂತ್ರದ ಮೂಲಕ ಕಟಾವು ಮಾಡಿ ಮಣ್ಣಿನಲ್ಲಿ ಬೆರೆತುಕೊಳ್ಳುವಂತೆ ಮಾಡಿದರೆ ಮಣ್ಣಿನ ಫಲವತ್ತತೆ ಕಾಪಾಡಬಹುದು‘ ಎಂದರು.</p>.<p>‘ಪತಂಗಗಳನ್ನು ಮೋಹಕ ಬಲೆ ಮುಖಾಂತರ ನಿಯಂತ್ರಿಸಿ, ಬೇವಿನ ಮೂಲದ ಸೂಕ್ತ ಔಷಧಿ ಸಿಂಪಡಿಸಬೇಕು. ಹೊಸ ಅವಿಷ್ಕಾರ ಕೀಟನಾಶಕ ಟೂಬ್ಗಳನ್ನು 4-5 ಗಿಡಗಳ ಅಂತರದಲ್ಲಿ ಗಿಡದ ಟೊಂಗೆ ಭಾಗಕ್ಕೆ ಹಚ್ಚುವುದರಿಂದ ಈ ರೋಗದ ಹತೋಟಿ ಮಾಡಬಹುದು’ ಎಂದು ತಿಳಿಸಿದರು.</p>.<p>ಉಮೇಶಬಾಬು ಬಿ.ಎಸ್. ಮಾತನಾಡಿ, ‘ಸರಿಯಾದ ಸಮಯಕ್ಕೆ ಬಿತ್ತನೆ, ಸರಿಯಾದ ತಳಿಗಳ ಆಯ್ಕೆ, ಬೀಜೋಪಚಾರ, ವರ್ಷಕ್ಕೊಮ್ಮೆ ಆಳವಾದ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕೀಟಗಳ ಕೋಶ ರೋಗದ ಅವಶೇಷಗಳು ಹಾಗೂ ಕಳೆಗಳ ನಿಯಂತ್ರಣ ಮಾಡಬಹುದು’ ಎಂದು ಹೇಳಿದರು.</p>.<p>ಸೈಮಾ ಹತ್ತಿ ಅಭಿವೃಧಿ ಮತ್ತು ಸಂಶೋಧನಾ ಸಂಸ್ಥೆಯ ಪ್ರತಿನಿಧಿ ಮಧುಬಾಬು, ಸಹಾಯಕ ಕೃಷಿ ಅಧಿಕಾರಿ ಅಶೋಕ, ಉಪಸ್ಥಿತರಿದ್ದರು 200 ರೈತರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೃಷಿ ವಿಜ್ಞಾನ ಕೇಂದ್ರ ಸಂಗೀತಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: ‘</strong>ರೈತರು ಅಧಿಕ ಸಾಂದ್ರ ಪದ್ಧತಿಯಲ್ಲಿ ಹತ್ತಿ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕು‘ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತಪ್ಪ ಶ್ರೀಹರಿ ರೈತರಿಗೆ ಸಲಹೆ ನೀಡಿದರು.</p>.<p>ರಾಯಚೂರು ತಾಲ್ಲೂಕಿನ ಪುರುತಿಪ್ಲಿ ಗ್ರಾಮದಲ್ಲಿ ರೈತರಿಗೆ ಸಾಂದ್ರ ಪದ್ಧತಿ ಹತ್ತಿ ಬೆಳೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಇಲ್ಲಿನ ವಾತವರಣ, ಕಡಿಮೆ ಪ್ರಮಾಣದ ಮಳೆ ಇವೆಲ್ಲವೂ ಬೆಳೆಯ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಂದ್ರ ಪದ್ಧತಿ ಅನುಸರಿಸಬೇಕು‘ ಎಂದು ಹೇಳಿದರು.</p>.<p>‘ಕಳೆದ ವರ್ಷ ತೀವ್ರ ಮಳೆಯ ಕೊರತೆಯ ನಡುವೆಯೂ ಕುರ್ಡಿ ಗ್ರಾಮದ ರೈತರೊಬ್ಬರು ಮಳೆಯಾಶ್ರಿತ ಭೂಮಿಯಲ್ಲಿ ಸಾಂದ್ರ ಪದ್ಧತಿಯಲ್ಲಿ ಹತ್ತಿ ಬೆಳೆದು 12 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಕಡಿಮೆ ಆಳದ ಅಥವಾ ಆಳವಲ್ಲದ ಭೂಮಿಯಲ್ಲಿ ಅಂತರ 90 x 15 ಸೆಂ.ಮೀ ಮತ್ತು ಆಳದ ಅಥವಾ ಮಧ್ಯಮ ಆಳದ ಭೂಮಿಯಲ್ಲಿ 90 x 30 ಸೆಂ.ಮೀ ಅಂತರದಲ್ಲಿ ಹತ್ತಿ ಬೇಸಾಯ ಮಾಡುವ ಮೂಲಕ ಯಶ ಸಾಧಿಸಬೇಕು’ ಎಂದು ಸಲಹೆ ನೀಡಿದರು.</p>.<p>ಎಐಸಿಆರ್ಪಿ ಹತ್ತಿ ವಿಭಾಗದ ಮುಖ್ಯಸ್ಥ ಜಯಪ್ರಕಾಶ ನಿಡಗುಂದಿ ಮಾತನಾಡಿ, ‘ಸಾಂದ್ರ ಬೇಸಾಯ ಮಾಡಲು ಅಗತ್ಯವಿರುವ ಹೈಬ್ರಿಡ್ ತಳಿಗಳು ಹಾಗೂ ಅಂತಹ ಬೀಜಗಳನ್ನು ಬೆಳೆಸಿದಲ್ಲಿ ಸರಿಯಾದ ಸಮಯಕ್ಕೆ ಅಂದರೆ, ಶೇಕಡ 25 ರಷ್ಟು ಸಾರಜನಕ ಮತ್ತು ಪೊಟ್ಯಾಷ್ ಮತ್ತು ಶೇ 100ರಷ್ಟು ರಂಜಕ ಗೊಬ್ಬರ ಇನ್ನುಳಿದ ಶೇಕಡ 75 ರಷ್ಟು ನೈಟ್ರೋಜನ್ ಮತ್ತು ಪೊಟ್ಯಾಷ್ ಗೊಬ್ಬರವನ್ನು 30, 60, 90 ದಿನಗಳಿದ್ದಾಗ ಸಮನಾಗಿ ನೀಡಬೇಕು‘ ಎಂದು ತಿಳಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಶ್ರೀವಾಣಿ ಜಿ.ಎನ್. ಮಾತನಾಡಿ, ‘ಹತ್ತಿ ಬೆಳೆಯಲ್ಲಿ ರೈತರು ಮುಖ್ಯವಾಗಿ ಎದುರಿಸುತ್ತಿರುವ ಗುಲಾಬಿ ಕಾಯಿಕೊರಕ ಕೀಟದ ಹತೋಟಿಗೆ ಮೋಹಕ ಬಲೆ ಫೆರೊಮೆನಾ ಟ್ರಾಪ್ಸ್ ಹಳದಿ ಅಂಟಿನ ಬಲೆ ಬಳಕೆ ಮಾಡಬೇಕು. ಹತ್ತಿ ಬಿಡಿಸುವುದು ಮುಗಿದ ಕೂಡಲೇ ಅದನ್ನು ಕಾಟನ್ ಶ್ರೇಡ್ಡರ ಯಂತ್ರದ ಮೂಲಕ ಕಟಾವು ಮಾಡಿ ಮಣ್ಣಿನಲ್ಲಿ ಬೆರೆತುಕೊಳ್ಳುವಂತೆ ಮಾಡಿದರೆ ಮಣ್ಣಿನ ಫಲವತ್ತತೆ ಕಾಪಾಡಬಹುದು‘ ಎಂದರು.</p>.<p>‘ಪತಂಗಗಳನ್ನು ಮೋಹಕ ಬಲೆ ಮುಖಾಂತರ ನಿಯಂತ್ರಿಸಿ, ಬೇವಿನ ಮೂಲದ ಸೂಕ್ತ ಔಷಧಿ ಸಿಂಪಡಿಸಬೇಕು. ಹೊಸ ಅವಿಷ್ಕಾರ ಕೀಟನಾಶಕ ಟೂಬ್ಗಳನ್ನು 4-5 ಗಿಡಗಳ ಅಂತರದಲ್ಲಿ ಗಿಡದ ಟೊಂಗೆ ಭಾಗಕ್ಕೆ ಹಚ್ಚುವುದರಿಂದ ಈ ರೋಗದ ಹತೋಟಿ ಮಾಡಬಹುದು’ ಎಂದು ತಿಳಿಸಿದರು.</p>.<p>ಉಮೇಶಬಾಬು ಬಿ.ಎಸ್. ಮಾತನಾಡಿ, ‘ಸರಿಯಾದ ಸಮಯಕ್ಕೆ ಬಿತ್ತನೆ, ಸರಿಯಾದ ತಳಿಗಳ ಆಯ್ಕೆ, ಬೀಜೋಪಚಾರ, ವರ್ಷಕ್ಕೊಮ್ಮೆ ಆಳವಾದ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕೀಟಗಳ ಕೋಶ ರೋಗದ ಅವಶೇಷಗಳು ಹಾಗೂ ಕಳೆಗಳ ನಿಯಂತ್ರಣ ಮಾಡಬಹುದು’ ಎಂದು ಹೇಳಿದರು.</p>.<p>ಸೈಮಾ ಹತ್ತಿ ಅಭಿವೃಧಿ ಮತ್ತು ಸಂಶೋಧನಾ ಸಂಸ್ಥೆಯ ಪ್ರತಿನಿಧಿ ಮಧುಬಾಬು, ಸಹಾಯಕ ಕೃಷಿ ಅಧಿಕಾರಿ ಅಶೋಕ, ಉಪಸ್ಥಿತರಿದ್ದರು 200 ರೈತರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೃಷಿ ವಿಜ್ಞಾನ ಕೇಂದ್ರ ಸಂಗೀತಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>