<p><strong>ರಾಯಚೂರು:</strong> ತಾತನ ಹೆಸರಿನಲ್ಲಿದ್ದ ನಿವೇಶನವನ್ನು ಮೋಸದಿಂದ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿ ಹಣ ನೀಡದೇ ಸತಾಯಿಸುತ್ತಿದ್ದ ಮೊಮ್ಮಗನಿಂದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ₹10 ಲಕ್ಷ ಪರಿಹಾರ ಕೊಡಿಸಿದೆ.</p>.<p>92 ವರ್ಷದ ರಾಯಚೂರಿನ ನಿವಾಸಿಯಾದ ವಿಠ್ಠಲ ಅವರು ಹೈದರಾಬಾದ್ನಲ್ಲಿ ನೆಲೆಸಿದ್ದರು. ಅವರ ಮೊಮ್ಮಗ ಅಶೋಕ ಮೋಸದಿಂದ ನಿವೇಶನ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿದ್ದ. ನಿವೇಶನ ಮಾರಾಟ ಮಾಡಿದ ಹಣ ನಿಡುವಂತೆ ವಿಠ್ಠಲ ಅವರು ಐದು ವರ್ಷಗಳಿಂದ ಅಶೋಕನಿಗೆ ಕೇಳಿದರೂ ನೀಡಿರಲಿಲ್ಲ.</p>.<p>ನಂತರ ನಿವೇಶನ ಮಾರಾಟ ಮಾಡಿದ ಹಣ ಕೊಡಿಸುವಂತೆ ವಿಠ್ಠಲ ರಾಯಚೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು.</p>.<p>ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಶನಿವಾರ ಅಶೋಕ ಹಾಗೂ ವಿಠ್ಠಲ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೂರು ಆಲಿಸಿದರು. ಇದರ ಪರಿಣಾಮ ಅಶೋಕ ಹಣ ಕೊಡಲು ಒಪ್ಪಿದ್ದಾನೆ. ಉಪ ವಿಭಾಗಾಧಿಕಾರಿ ಮೆಹಬೂಬಿ ಅವರು ತಮ್ಮ ಕಚೇರಿಯಲ್ಲಿ ₹10 ಲಕ್ಷದ ಚೆಕ್ ಕೊಡಿಸಿದ್ದಾರೆ. </p>.<p>ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಅಧಿಕಾರಿ ಪವನ್ ಕಿಶೋರ ಪಾಟೀಲ ಹಾಗೂ ಸಿದ್ದಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ತಾತನ ಹೆಸರಿನಲ್ಲಿದ್ದ ನಿವೇಶನವನ್ನು ಮೋಸದಿಂದ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿ ಹಣ ನೀಡದೇ ಸತಾಯಿಸುತ್ತಿದ್ದ ಮೊಮ್ಮಗನಿಂದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ₹10 ಲಕ್ಷ ಪರಿಹಾರ ಕೊಡಿಸಿದೆ.</p>.<p>92 ವರ್ಷದ ರಾಯಚೂರಿನ ನಿವಾಸಿಯಾದ ವಿಠ್ಠಲ ಅವರು ಹೈದರಾಬಾದ್ನಲ್ಲಿ ನೆಲೆಸಿದ್ದರು. ಅವರ ಮೊಮ್ಮಗ ಅಶೋಕ ಮೋಸದಿಂದ ನಿವೇಶನ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಾರಾಟ ಮಾಡಿದ್ದ. ನಿವೇಶನ ಮಾರಾಟ ಮಾಡಿದ ಹಣ ನಿಡುವಂತೆ ವಿಠ್ಠಲ ಅವರು ಐದು ವರ್ಷಗಳಿಂದ ಅಶೋಕನಿಗೆ ಕೇಳಿದರೂ ನೀಡಿರಲಿಲ್ಲ.</p>.<p>ನಂತರ ನಿವೇಶನ ಮಾರಾಟ ಮಾಡಿದ ಹಣ ಕೊಡಿಸುವಂತೆ ವಿಠ್ಠಲ ರಾಯಚೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು.</p>.<p>ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಶನಿವಾರ ಅಶೋಕ ಹಾಗೂ ವಿಠ್ಠಲ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೂರು ಆಲಿಸಿದರು. ಇದರ ಪರಿಣಾಮ ಅಶೋಕ ಹಣ ಕೊಡಲು ಒಪ್ಪಿದ್ದಾನೆ. ಉಪ ವಿಭಾಗಾಧಿಕಾರಿ ಮೆಹಬೂಬಿ ಅವರು ತಮ್ಮ ಕಚೇರಿಯಲ್ಲಿ ₹10 ಲಕ್ಷದ ಚೆಕ್ ಕೊಡಿಸಿದ್ದಾರೆ. </p>.<p>ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಅಧಿಕಾರಿ ಪವನ್ ಕಿಶೋರ ಪಾಟೀಲ ಹಾಗೂ ಸಿದ್ದಣ್ಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>