<p><strong>ಲಿಂಗಸುಗೂರು:</strong> ನವೋದಯ, ಮೊರಾರ್ಜಿ, ಸೈನಿಕ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಗ್ರಾಮೀಣ ಕೃಪಾಂಕ, ಕನ್ನಡ ಮಾಧ್ಯಮ, ಕಲಂ 371(ಜೆ) ಮೀಸಲಾತಿ ಸೌಲಭ್ಯ ಪಡೆಯುವುದಕ್ಕೆ ಪಟ್ಟಣ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಹೊರತು ಪಡಿಸಿದ ಗಡಿ ಜಿಲ್ಲೆಗಳ ಮಕ್ಕಳು ಗ್ರಾಮೀಣ ಶಾಲೆ ಆಯ್ಕೆಮಾಡಿಕೊಂಡಿರುವುದು ಚರ್ಚೆಯ ವಿಷಯವಾಗಿದೆ.</p>.<p>ವಿಜಯಪುರ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳ ಪಾಲಕರು ನಖಲಿ ದಾಖಲೆ ಸೃಷ್ಠಿಸಿ ಮಕ್ಕಳ ಹೆಸರು ಗ್ರಾಮೀಣ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ತೊಂಡಿಹಾಳ, ಹಲ್ಕಾವಟಗಿ, ಗದ್ದಗಿ, ರೋಡಲಬಂಡ, ಚಿತ್ತಾಪುರ, ಯಲಗಲದಿನ್ನಿ, ಸರ್ಜಾಪುರ, ಗೋನವಾಟ್ಲತಾಂಡಾ ಸೇರಿದಂತೆ ಬಹುತೇಕ ಶಾಲೆಗಳಲ್ಲಿ ಮಕ್ಕಳ ಹೆಸರು ದಾಖಲಿಸಿದ್ದು ತರಗತಿಗಳಿಗೆ ಹಾಜರಾಗುತ್ತಿಲ್ಲ. </p>.<p>ಕೆಲ ಪ್ರಾಥಮಿಕ, ಪೌಢಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳ ಸಂಖ್ಯೆ ಕಡಿಮೆ, ಹಾಜರಾತಿ ಹೆಚ್ಚಿಗೆ ತೋರಿಸುತ್ತಿದ್ದಾರೆ. ಸಮವಸ್ತ್ರ, ಬೂಟ್, ಸಾಕ್ಸ್, ಬಿಸಿಯೂಟ ಸೌಲಭ್ಯ ಯಥಾವತ್ತಾಗಿ ನೀಡಿದ್ದು ದಾಖಲೆಗಳಿಂದ ದೃಢಪಡುತ್ತದೆ.</p>.<p>ಮಕ್ಕಳು ಕಡಿಮೆ ಇದ್ದರು ಹೆಚ್ಚಿನ ಹಾಜರಾತಿ ತೋರಿಸಿ ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡುತ್ತಿರುವ ಬಗ್ಗೆ ಶಾಲಾ ಸುಧಾರಣ ಸಮಿತಿ ಅಧ್ಯಕ್ಷರು, ಸದಸ್ಯರು ದೂರು ನೀಡಿದರು ಪ್ರಯೋಜನವಾಗಿಲ್ಲ ಎಂಬುದು ಪಾಲಕರ ಆರೋಪ.</p>.<p>‘ಸರ್ಜಾಪುರ ಪ್ರಾಥಮಿಕ ಶಾಲೆಯಲ್ಲಿ 285 ಮಕ್ಕಳ ಹಾಜರಾತಿ ಇದೆ. ವಾಸ್ತವವಾಗಿ ನಿತ್ಯ 80ಕ್ಕೂ ಹೆಚ್ಚು ಮಕ್ಕಳು ಗೈರಾಗುತ್ತಾರೆ. ಇವರಲ್ಲಿ ಬಹುತೇಕರು ವಿಜಯಪುರ. ಬಾಗಲಕೋಟೆ ಜಿಲ್ಲೆಯವರು. ಈ ಕುರಿತು ಮುಖ್ಯ ಶಿಕ್ಷಕ ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಸರ್ಜಾಪುರ ಪ್ರಾಥಮಿಕ ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ದೇವಪ್ಪ ಆರೋಪಿಸಿದ್ದಾರೆ.</p>.<p>‘ಗ್ರಾಮೀಣ ಶಾಲೆಗಳಲ್ಲಿ ದಾಖಲಾತಿ ಮಾಡಿದ್ದಾರೆ. ತಾಲ್ಲೂಕು ಕೇಂದ್ರ ಸೇರಿದಂತೆ ಪಟ್ಟಣದ ಖಾಸಗಿ ಶಾಲೆಗಳಲ್ಲಿ ಮಕ್ಕಳು ಓದುತ್ತಿದ್ದಾರೆ. ಈ ಕುರಿತು ಇಲಾಖೆ ಗಮನ ಸೆಳೆದರು ಸ್ಪಂದಿಸುತ್ತಿಲ್ಲ’ ಎಂದು ರಕ್ಷಣಾ ವೇದಿಕೆ ಹಿರಿಯ ಮುಖಂಡ ನಿಜಗುಣಿ ಗುಂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ತಾಲ್ಲೂಕಿನಲ್ಲಿ 489 ಪ್ರಾಥಮಿಕ ಮತ್ತು ಪ್ರೌಢಶಾಲೆ ಇದ್ದು ಒಟ್ಟು 86,824 ಮಕ್ಕಳ ದಾಖಲಾತಿ ಇದೆ. ಪ್ರತಿ ಶಾಲೆಯಲ್ಲಿ ಮಕ್ಕಳು ಗೈರಾಗದಂತೆ ಶಿಕ್ಷಕರು ಎಚ್ಚರ ವಹಿಸಿದ್ದಾರೆ. ಶೈಕ್ಷಣಿಕ ವರ್ಷದ ಡಿಸೆಂಬರ್ ಅಂತ್ಯದವರೆಗೆ ಯಾವೊಂದು ಶಾಲೆಯಲ್ಲಿ ಮಕ್ಕಳು ಗೈರು ಹಾಜರಿ ಬಗ್ಗೆ ವರದಿ ಬಂದಿಲ್’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ ತಿಳಿಸಿದ್ದಾರೆ.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ‘ಶಾಲೆ ಬಿಟ್ಟ ಮಕ್ಕಳ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ, ಅನ್ಯ ಜಿಲ್ಲೆಯ ಮಕ್ಕಳ ಹೆಸರು ಕೆಲ ಶಾಲೆಗಳಲ್ಲಿ ದಾಖಲಿಸಿದ ಬಗ್ಗೆ ಮೌಖಿಕ ದೂರುಗಳು ಬಂದಿವೆ. ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು</p>.<p>‘ದಾಖಲಾತಿ ಅರ್ಜಿ, ಮಕ್ಕಳ ಕುರಿತ ಕೃತಿ ಸಂಪುಟ, ಕಾರ್ಯಚಟುವಟಿಕೆ, ಉತ್ತರ ಪತ್ರಿಕೆ, ವೈಯಕ್ತಿಕ, ಸಾಮೂಹಿಕ ಅಂಕಗಳ ಕ್ರೂಢಿಕರಣ ದಾಖಲೆ ಲಭ್ಯವಿಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ನವೋದಯ, ಮೊರಾರ್ಜಿ, ಸೈನಿಕ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಗ್ರಾಮೀಣ ಕೃಪಾಂಕ, ಕನ್ನಡ ಮಾಧ್ಯಮ, ಕಲಂ 371(ಜೆ) ಮೀಸಲಾತಿ ಸೌಲಭ್ಯ ಪಡೆಯುವುದಕ್ಕೆ ಪಟ್ಟಣ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಹೊರತು ಪಡಿಸಿದ ಗಡಿ ಜಿಲ್ಲೆಗಳ ಮಕ್ಕಳು ಗ್ರಾಮೀಣ ಶಾಲೆ ಆಯ್ಕೆಮಾಡಿಕೊಂಡಿರುವುದು ಚರ್ಚೆಯ ವಿಷಯವಾಗಿದೆ.</p>.<p>ವಿಜಯಪುರ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳ ಪಾಲಕರು ನಖಲಿ ದಾಖಲೆ ಸೃಷ್ಠಿಸಿ ಮಕ್ಕಳ ಹೆಸರು ಗ್ರಾಮೀಣ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ತೊಂಡಿಹಾಳ, ಹಲ್ಕಾವಟಗಿ, ಗದ್ದಗಿ, ರೋಡಲಬಂಡ, ಚಿತ್ತಾಪುರ, ಯಲಗಲದಿನ್ನಿ, ಸರ್ಜಾಪುರ, ಗೋನವಾಟ್ಲತಾಂಡಾ ಸೇರಿದಂತೆ ಬಹುತೇಕ ಶಾಲೆಗಳಲ್ಲಿ ಮಕ್ಕಳ ಹೆಸರು ದಾಖಲಿಸಿದ್ದು ತರಗತಿಗಳಿಗೆ ಹಾಜರಾಗುತ್ತಿಲ್ಲ. </p>.<p>ಕೆಲ ಪ್ರಾಥಮಿಕ, ಪೌಢಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳ ಸಂಖ್ಯೆ ಕಡಿಮೆ, ಹಾಜರಾತಿ ಹೆಚ್ಚಿಗೆ ತೋರಿಸುತ್ತಿದ್ದಾರೆ. ಸಮವಸ್ತ್ರ, ಬೂಟ್, ಸಾಕ್ಸ್, ಬಿಸಿಯೂಟ ಸೌಲಭ್ಯ ಯಥಾವತ್ತಾಗಿ ನೀಡಿದ್ದು ದಾಖಲೆಗಳಿಂದ ದೃಢಪಡುತ್ತದೆ.</p>.<p>ಮಕ್ಕಳು ಕಡಿಮೆ ಇದ್ದರು ಹೆಚ್ಚಿನ ಹಾಜರಾತಿ ತೋರಿಸಿ ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡುತ್ತಿರುವ ಬಗ್ಗೆ ಶಾಲಾ ಸುಧಾರಣ ಸಮಿತಿ ಅಧ್ಯಕ್ಷರು, ಸದಸ್ಯರು ದೂರು ನೀಡಿದರು ಪ್ರಯೋಜನವಾಗಿಲ್ಲ ಎಂಬುದು ಪಾಲಕರ ಆರೋಪ.</p>.<p>‘ಸರ್ಜಾಪುರ ಪ್ರಾಥಮಿಕ ಶಾಲೆಯಲ್ಲಿ 285 ಮಕ್ಕಳ ಹಾಜರಾತಿ ಇದೆ. ವಾಸ್ತವವಾಗಿ ನಿತ್ಯ 80ಕ್ಕೂ ಹೆಚ್ಚು ಮಕ್ಕಳು ಗೈರಾಗುತ್ತಾರೆ. ಇವರಲ್ಲಿ ಬಹುತೇಕರು ವಿಜಯಪುರ. ಬಾಗಲಕೋಟೆ ಜಿಲ್ಲೆಯವರು. ಈ ಕುರಿತು ಮುಖ್ಯ ಶಿಕ್ಷಕ ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಸರ್ಜಾಪುರ ಪ್ರಾಥಮಿಕ ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ದೇವಪ್ಪ ಆರೋಪಿಸಿದ್ದಾರೆ.</p>.<p>‘ಗ್ರಾಮೀಣ ಶಾಲೆಗಳಲ್ಲಿ ದಾಖಲಾತಿ ಮಾಡಿದ್ದಾರೆ. ತಾಲ್ಲೂಕು ಕೇಂದ್ರ ಸೇರಿದಂತೆ ಪಟ್ಟಣದ ಖಾಸಗಿ ಶಾಲೆಗಳಲ್ಲಿ ಮಕ್ಕಳು ಓದುತ್ತಿದ್ದಾರೆ. ಈ ಕುರಿತು ಇಲಾಖೆ ಗಮನ ಸೆಳೆದರು ಸ್ಪಂದಿಸುತ್ತಿಲ್ಲ’ ಎಂದು ರಕ್ಷಣಾ ವೇದಿಕೆ ಹಿರಿಯ ಮುಖಂಡ ನಿಜಗುಣಿ ಗುಂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ತಾಲ್ಲೂಕಿನಲ್ಲಿ 489 ಪ್ರಾಥಮಿಕ ಮತ್ತು ಪ್ರೌಢಶಾಲೆ ಇದ್ದು ಒಟ್ಟು 86,824 ಮಕ್ಕಳ ದಾಖಲಾತಿ ಇದೆ. ಪ್ರತಿ ಶಾಲೆಯಲ್ಲಿ ಮಕ್ಕಳು ಗೈರಾಗದಂತೆ ಶಿಕ್ಷಕರು ಎಚ್ಚರ ವಹಿಸಿದ್ದಾರೆ. ಶೈಕ್ಷಣಿಕ ವರ್ಷದ ಡಿಸೆಂಬರ್ ಅಂತ್ಯದವರೆಗೆ ಯಾವೊಂದು ಶಾಲೆಯಲ್ಲಿ ಮಕ್ಕಳು ಗೈರು ಹಾಜರಿ ಬಗ್ಗೆ ವರದಿ ಬಂದಿಲ್’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ ತಿಳಿಸಿದ್ದಾರೆ.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ‘ಶಾಲೆ ಬಿಟ್ಟ ಮಕ್ಕಳ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ, ಅನ್ಯ ಜಿಲ್ಲೆಯ ಮಕ್ಕಳ ಹೆಸರು ಕೆಲ ಶಾಲೆಗಳಲ್ಲಿ ದಾಖಲಿಸಿದ ಬಗ್ಗೆ ಮೌಖಿಕ ದೂರುಗಳು ಬಂದಿವೆ. ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು</p>.<p>‘ದಾಖಲಾತಿ ಅರ್ಜಿ, ಮಕ್ಕಳ ಕುರಿತ ಕೃತಿ ಸಂಪುಟ, ಕಾರ್ಯಚಟುವಟಿಕೆ, ಉತ್ತರ ಪತ್ರಿಕೆ, ವೈಯಕ್ತಿಕ, ಸಾಮೂಹಿಕ ಅಂಕಗಳ ಕ್ರೂಢಿಕರಣ ದಾಖಲೆ ಲಭ್ಯವಿಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>