ಮಸ್ಕಿ: ವಿಜಯ ದಶಮಿ ಹಾಗೂ ಅರ್ಎಸ್ಎಸ್ ಸಂಸ್ಥಾಪನ ದಿನದ ನಿಮಿತ್ತ ಪಟ್ಟಣದಲ್ಲಿ ಅ. 9ರಂದು ಸ್ವಯಂ ಸೇವಕರ ಪಥ ಸಂಚಲನ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ತೆರಿನ ಮನೆ ಮುಂಭಾಗದಿಂಸ ಗಣವೇಷದಾರಿ ಸ್ವಯಂ ಸೇವಕರ ಪಥ ಸಂಚಲನ ಘೋಷ್ ವಾದ್ಯದೊಂದಿಗೆ ಆರಂಭವಾಗಲಿದೆ.
ಉಪ್ಪಲದೊಡ್ಡಿ ಪೇಟೆ, ಗಾಡಿ ಬಾವಿ, ಸಂತೆ ಬಜಾರ, ಅಶೋಕ ವೃತ್ತ, ಚೆನ್ನಮ್ಮ ವೃತ್ತ, ದೈವದಕಟ್ಟೆ, ತೆರು ಬೀದಿ ಮೂಲಕ ನರಸನಗೌಡ ಸ್ಮಾರಕ ಆಂಗ್ಲ ಮಾದ್ಯಮ ಶಾಲೆಯ ಆವರಣಕ್ಕೆ ಆಗಮಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಂಜೆ 5 ಕ್ಕೆ ಶಾಲಾ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ನಾಯ್ಕ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ತಿರುಪತಿ ಮಡಿವಾಳ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.