ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಾಂತೇಶ ಮಸ್ಕಿ, ಜನಕವಿ ರಮೇಶ ಗಬ್ಬೂರು ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲ್ಲೂಕು ಪಂಚಾಯತಿ ಇಓ ಚಂದ್ರಶೇಖರ, ನಿವೃತ ಶಿಕ್ಷಣಾಧಿಕಾರಿ ಹೆಚ್.ಜಿ.ಹಂಪಣ್ಣ, ಸಾಹಿತಿಗಳಾದ ಎಸ್.ಎಸ್.ಹಿರೇಮಠ, ವೀರನಗೌಡ ಗುಮಗೇರಾ, ಕರಿಬಸಯ್ಯ ಹಿರೇಮಠ, ವೆಂಕನಗೌಡ ವಟಗಲ್, ಬೀರಪ್ಪ ಶಂಭೋಜಿ, ಅಮರಗುಂಡಪ್ಪ ಹುಲ್ಲೂರು, ವಿ.ಸಿ.ಪಾಟೀಲ್, ವಲಿಪಾಷಾ, ಮಧುಮತಿ ದೇಶಪಾಂಡೆ, ರಮಾದೇವಿ ಶಂಭೋಜಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಪಂಪಯ್ಯಸ್ವಾಮಿ ಸಾಲಿಮಠ ಉಪಸ್ಥಿತರಿದ್ದರು.