<p><strong>ರಾಯಚೂರು</strong>: ಸೌರ ವಿದ್ಯುತ್ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ ಎಂದು ವಿಜಯನಗರ ಶಾಖೆಯ ಕ್ಯಾಷುಟೆಕ್ನ ಸಿಇಒ ಶರಣಬಸಪ್ಪ ಪಟ್ಟೇದ್ ಅಭಿಪ್ರಾಯಪಟ್ಟರು.</p>.<p>ನಗರದ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಸೌರ ವಿದ್ಯುತ್ ಉತ್ಪಾದನೆ ಒಂದು ಚಿಂತನ’ ಕಾರ್ಯಕ್ರಮದಲ್ಲಿ ಮಾತನಾಡಿ, ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ- ಒಬ್ಬನೇ ಸೂರ್ಯ ಒಂದೇ ವಿದ್ಯುತ್ ಗ್ರಿಡ್ ಪರಿಕಲ್ಪನೆ ಮತ್ತು ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.</p>.<p>ಮುಂದಿನ ದಿನಮಾನಗಳಲ್ಲಿ ಜಗತ್ತನ್ನು ಆಳುವ ಶಕ್ತಿಯಾಗಿ ಸೋಲಾರ್ ಎನರ್ಜಿ (ಸೌರ್ಯ ಸೌರ ವಿದ್ಯುತ್) ಬರಲಿದೆ. ಇದಕ್ಕೆ ಪೂರಕವಾಗಿ ಅಂತರರಾಷ್ಟ್ರೀಯ ಮಟ್ಟದ ಒಪ್ಪಂದ ಸಾರ್ಕ್ ಸಮ್ಮೇಳನದ ನಿರ್ಣಯದಂತೆ 2070ರ ಹೊತ್ತಿಗೆ ವಿಶ್ವದಲ್ಲಿ ಜೀರೋ ಕಾರ್ಬನ್ ವಾತಾವರಣ ಮೂಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.</p>.<p>ಈ ವೇಳೆ ಕ್ಯಾಷುಟೆಕ್ನ ತರಬೇತಿ ಸಲಹೆಗಾರ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ವಿದ್ಯುತ್ ಜಾಲದೊಂದಿಗೆ ಗ್ರಿಡ್ ಟೈಡ್ ಮನೆ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿ, ಬಳಸಿ ಹಣ ಉಳಿಸುವ ಮತ್ತು ಹಣ ಗಳಿಸುವ ಕುರಿತು ವಿವರಿಸಿದರು.</p>.<p>ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುವುದರೆಡೆಗೆ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. </p>.<p>ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ₹78,000 ವರೆಗೆ ಸಹಾಯಧನ ನೀಡುತ್ತಿದೆ. ಇಂಗಾಲದ ಹೆಜ್ಜೆ ಗುರುತುಗಳನ್ನು ಅಳಿಸಲು ಸಹಕಾರಿಯಾಗಿದ್ದು ಹೆಚ್ಚು ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯಬೇಕು. ಉಷ್ಣಸ್ಥಾವರ ವಿದ್ಯುತ್ ಉತ್ಫಾದನಾ ಘಟಕಗಳಿಂದ ಸ್ಥಳೀಯರಿಗೆ ರೋಗರುಜಿನಗಳಿಗೆ ಸಿಲುಕುವ ಅಪಾಯವಿದೆ. ಸೌರವಿದ್ಯುತ್ ಬಳಕೆ ಅಪಾಯವಿಲ್ಲ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಂಶುಪಾಲಕಿ ಶಶಿಕಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಶಿವಾನಂದ, ಅಮಿತಕುಮಾರ, ಶಿವಾನಂದ ಮಠಪತಿ, ಅನಿಲಕುಮಾರ ಎಲ್, ರಾಜಾ ಅನ್ವರ ಹುಸೇನ, ಅರವಿಂದ ಕುಮಾರ, ಪಲ್ಲವಿ ಪಾಟೀಲ, ನಾಗರಾಜ, ಮಲ್ಲಿಕಾರ್ಜುನ, ನಾಗರಾಜ ಎಂ.ಕೆ, ನಾಗಭೂಷಣ, ಬಲಭೀಮ, ರಾಮಲಿಂಗ ನಾಟೇಕರ, ಪೂರ್ಣಿಮಾ, ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥೆ ಮಧು ಎಂ.ಕೆ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಸೌರ ವಿದ್ಯುತ್ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ ಎಂದು ವಿಜಯನಗರ ಶಾಖೆಯ ಕ್ಯಾಷುಟೆಕ್ನ ಸಿಇಒ ಶರಣಬಸಪ್ಪ ಪಟ್ಟೇದ್ ಅಭಿಪ್ರಾಯಪಟ್ಟರು.</p>.<p>ನಗರದ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಸೌರ ವಿದ್ಯುತ್ ಉತ್ಪಾದನೆ ಒಂದು ಚಿಂತನ’ ಕಾರ್ಯಕ್ರಮದಲ್ಲಿ ಮಾತನಾಡಿ, ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ- ಒಬ್ಬನೇ ಸೂರ್ಯ ಒಂದೇ ವಿದ್ಯುತ್ ಗ್ರಿಡ್ ಪರಿಕಲ್ಪನೆ ಮತ್ತು ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.</p>.<p>ಮುಂದಿನ ದಿನಮಾನಗಳಲ್ಲಿ ಜಗತ್ತನ್ನು ಆಳುವ ಶಕ್ತಿಯಾಗಿ ಸೋಲಾರ್ ಎನರ್ಜಿ (ಸೌರ್ಯ ಸೌರ ವಿದ್ಯುತ್) ಬರಲಿದೆ. ಇದಕ್ಕೆ ಪೂರಕವಾಗಿ ಅಂತರರಾಷ್ಟ್ರೀಯ ಮಟ್ಟದ ಒಪ್ಪಂದ ಸಾರ್ಕ್ ಸಮ್ಮೇಳನದ ನಿರ್ಣಯದಂತೆ 2070ರ ಹೊತ್ತಿಗೆ ವಿಶ್ವದಲ್ಲಿ ಜೀರೋ ಕಾರ್ಬನ್ ವಾತಾವರಣ ಮೂಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.</p>.<p>ಈ ವೇಳೆ ಕ್ಯಾಷುಟೆಕ್ನ ತರಬೇತಿ ಸಲಹೆಗಾರ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ವಿದ್ಯುತ್ ಜಾಲದೊಂದಿಗೆ ಗ್ರಿಡ್ ಟೈಡ್ ಮನೆ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿ, ಬಳಸಿ ಹಣ ಉಳಿಸುವ ಮತ್ತು ಹಣ ಗಳಿಸುವ ಕುರಿತು ವಿವರಿಸಿದರು.</p>.<p>ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುವುದರೆಡೆಗೆ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. </p>.<p>ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ₹78,000 ವರೆಗೆ ಸಹಾಯಧನ ನೀಡುತ್ತಿದೆ. ಇಂಗಾಲದ ಹೆಜ್ಜೆ ಗುರುತುಗಳನ್ನು ಅಳಿಸಲು ಸಹಕಾರಿಯಾಗಿದ್ದು ಹೆಚ್ಚು ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯಬೇಕು. ಉಷ್ಣಸ್ಥಾವರ ವಿದ್ಯುತ್ ಉತ್ಫಾದನಾ ಘಟಕಗಳಿಂದ ಸ್ಥಳೀಯರಿಗೆ ರೋಗರುಜಿನಗಳಿಗೆ ಸಿಲುಕುವ ಅಪಾಯವಿದೆ. ಸೌರವಿದ್ಯುತ್ ಬಳಕೆ ಅಪಾಯವಿಲ್ಲ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಂಶುಪಾಲಕಿ ಶಶಿಕಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಶಿವಾನಂದ, ಅಮಿತಕುಮಾರ, ಶಿವಾನಂದ ಮಠಪತಿ, ಅನಿಲಕುಮಾರ ಎಲ್, ರಾಜಾ ಅನ್ವರ ಹುಸೇನ, ಅರವಿಂದ ಕುಮಾರ, ಪಲ್ಲವಿ ಪಾಟೀಲ, ನಾಗರಾಜ, ಮಲ್ಲಿಕಾರ್ಜುನ, ನಾಗರಾಜ ಎಂ.ಕೆ, ನಾಗಭೂಷಣ, ಬಲಭೀಮ, ರಾಮಲಿಂಗ ನಾಟೇಕರ, ಪೂರ್ಣಿಮಾ, ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥೆ ಮಧು ಎಂ.ಕೆ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>