<p><strong>ಲಿಂಗಸುಗೂರು:</strong> ತಾಲ್ಲೂಕಿನ ಹಾಲಭಾವಿತಾಂಡಾದಲ್ಲಿ ಎರಡು ದಿನಗಳಿಂದ ವಾಂತಿ ಭೇದಿ ಉಲ್ಬಣಗೊಂಡಿದ್ದು, ಮಕ್ಕಳು ಮತ್ತು ವೃದ್ಧರು ಸೇರಿ 50ಕ್ಕೂ ವಾಂತಿ ಭೇದಿಯಿಂದ ಬಳಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆಗೆ ದಾಖಲಾಗಿದ್ದಾರೆ. </p>.<p>ಗೊರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ತಾಂಡಾದ ಕೆಲ ಕುಟುಂಬಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಕ್ಕಳ ಸಂಖ್ಯೆಯೆ ಹೆಚ್ಚಾಗಿದ್ದರಿಂದ ಶಾಲಾ ಶಿಕ್ಷಕರು ಆತಂಕಗೊಂಡಿದ್ದಾರೆ. ಘಟನೆಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.</p>.<p>ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯೋಗೇಶ್ವರಿ (8), ದಿಲೀಪ್ (4), ಸುನಿತಾ (21), ಚಂದಮ್ಮ (44), ಜುಮ್ಮಾಬಾಯಿ (28), ಗೋಜಿಬಾಯಿ (72), ಕಮಲಾಬಾಯಿ (28), ನಂದೀಶ (14), ಪ್ರವೀಣಕುಮಾರ (5), ಶಿವಪ್ಪ (29), ವಿಠಲ (30), ರವಿ (20) ಚಿಕಿತ್ಸೆಗೆ ದಾಖಲಾಗಿದ್ದಾರೆ.</p>.<p> ‘ಹಾಲಭಾವಿತಾಂಡಾದಲ್ಲಿ ವಾಂತಿ ಭೇದಿ ಉಲ್ಬಣಿಸಿದ್ದು ನಿಜ. ಸದ್ಯ 12 ಪ್ರಕರಣಗಳು ವರದಿ ಆಗಿವೆ. ಭಾಗಶಃ ನಿಯಂತ್ರಣಕ್ಕೆ ಬಂದಿದ್ದು ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ತಿಳಿಸಿದ್ದಾರೆ.</p>.<p> ‘ಹಾಲಭಾವಿತಾಂಡಾದಲ್ಲಿ ವಾಂತಿಭೇದಿ ಉಲ್ಬಣಗೊಂಡಿದೆ. ನಮ್ಮ ಶಾಲೆಗೂ ಆ ಪ್ರಕರಣಗಳಿಗೂ ಸಂಬಂಧ ಇಲ್ಲ. ಮಾನವೀಯತೆ ದೃಷ್ಟಿಯಿಂದ ಶಾಲೆಯ ಕೊಠಡಿಗಳಲ್ಲಿ ತಾತ್ಕಾಲಿಕ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ತಾಲ್ಲೂಕಿನ ಹಾಲಭಾವಿತಾಂಡಾದಲ್ಲಿ ಎರಡು ದಿನಗಳಿಂದ ವಾಂತಿ ಭೇದಿ ಉಲ್ಬಣಗೊಂಡಿದ್ದು, ಮಕ್ಕಳು ಮತ್ತು ವೃದ್ಧರು ಸೇರಿ 50ಕ್ಕೂ ವಾಂತಿ ಭೇದಿಯಿಂದ ಬಳಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆಗೆ ದಾಖಲಾಗಿದ್ದಾರೆ. </p>.<p>ಗೊರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ತಾಂಡಾದ ಕೆಲ ಕುಟುಂಬಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಕ್ಕಳ ಸಂಖ್ಯೆಯೆ ಹೆಚ್ಚಾಗಿದ್ದರಿಂದ ಶಾಲಾ ಶಿಕ್ಷಕರು ಆತಂಕಗೊಂಡಿದ್ದಾರೆ. ಘಟನೆಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.</p>.<p>ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯೋಗೇಶ್ವರಿ (8), ದಿಲೀಪ್ (4), ಸುನಿತಾ (21), ಚಂದಮ್ಮ (44), ಜುಮ್ಮಾಬಾಯಿ (28), ಗೋಜಿಬಾಯಿ (72), ಕಮಲಾಬಾಯಿ (28), ನಂದೀಶ (14), ಪ್ರವೀಣಕುಮಾರ (5), ಶಿವಪ್ಪ (29), ವಿಠಲ (30), ರವಿ (20) ಚಿಕಿತ್ಸೆಗೆ ದಾಖಲಾಗಿದ್ದಾರೆ.</p>.<p> ‘ಹಾಲಭಾವಿತಾಂಡಾದಲ್ಲಿ ವಾಂತಿ ಭೇದಿ ಉಲ್ಬಣಿಸಿದ್ದು ನಿಜ. ಸದ್ಯ 12 ಪ್ರಕರಣಗಳು ವರದಿ ಆಗಿವೆ. ಭಾಗಶಃ ನಿಯಂತ್ರಣಕ್ಕೆ ಬಂದಿದ್ದು ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ತಿಳಿಸಿದ್ದಾರೆ.</p>.<p> ‘ಹಾಲಭಾವಿತಾಂಡಾದಲ್ಲಿ ವಾಂತಿಭೇದಿ ಉಲ್ಬಣಗೊಂಡಿದೆ. ನಮ್ಮ ಶಾಲೆಗೂ ಆ ಪ್ರಕರಣಗಳಿಗೂ ಸಂಬಂಧ ಇಲ್ಲ. ಮಾನವೀಯತೆ ದೃಷ್ಟಿಯಿಂದ ಶಾಲೆಯ ಕೊಠಡಿಗಳಲ್ಲಿ ತಾತ್ಕಾಲಿಕ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>