ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ: ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

Published 22 ಜುಲೈ 2024, 6:03 IST
Last Updated 22 ಜುಲೈ 2024, 6:03 IST
ಅಕ್ಷರ ಗಾತ್ರ

ಬಿಡದಿ: ಬೆಂಗಳೂರು–ಮೈಸೂರು ಹೆದ್ದಾರಿ ಕೆಂಚನಗುಪ್ಪೆ ಬಳಿಯ ನೆಲ್ಲಿಗುಡ್ಡೆ ಕೆರೆ ನಾಲೆಯ ಸಮೀಪ ದ್ವಿಚಕ್ರ ವಾಹನ ಸವಾರರ ಮೇಲೆ ಅಪರಿಚಿತ ಬೈಕ್‌ ಸವಾರರಿಬ್ಬರು ಶನಿವಾರ ಸಂಜೆ ಡ್ರ್ಯಾಗರ್‌ನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ದ್ವಿಚಕ್ರ ವಾಹನ ಸವಾರರಾದ ಕಾಕಾರಮನಹಳ್ಳಿ ನಿವಾಸಿ ವಿಜಯ್ ಕುಮಾರ್ ಮತ್ತು ಬಂಗಾರಪ್ಪ ಗಾಯಗೊಂಡಿದ್ದಾರೆ. ಪಕ್ಕದಲ್ಲಿ ವೇಗವಾಗಿ ಹೊರಟಿದ್ದ ಬೈಕ್ ಸವಾರರಿಗೆ ನಿಧಾನವಾಗಿ ಹೋಗಲು ಹೇಳಿದ್ದಾರೆ. ಬೈಕ್‌ ನಿಲ್ಲಿಸಿ ಜಗಳ ತಗೆದಿದ್ದಾರೆ. ಮಾತಿನ ಚಕಮಕಿ ಸುದೀರ್ಘಕ್ಕೆ ಹೋದಾಗ ಅಪರಿಚಿತ ಬೈಕ್ ಸವಾರರು ತಮ್ಮ ಬಳಿ ಇದ್ದ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ದಾಳಿ ನಡೆಸಿದ ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಹಲ್ಲೆಗೊಳಗಾದ ವಿಜಯಕುಮಾರ್ ಮತ್ತು ಬಂಗಾರಪ್ಪ ಅವರನ್ನು ರಕ್ಷಿಸಿ ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT