‘ಶಾಲಾ–ಕಾಲೇಜುಗಳಲ್ಲಿ ಪ್ರದರ್ಶನ ಕಾಣಲಿ’
‘ಜಾನಪದ ಕಥನದ ಎಳೆಯನ್ನು ಆಧುನಿಕತೆಗೆ ಒಗ್ಗಿಸಿ ಮೂಲ ಸೊಗಡಿಗೆ ಧಕ್ಕೆಯಾಗದಂತೆ ಅದಕ್ಕಿರುವ ಸಕಾಲಿಕತೆಯ ಮಹತ್ವವವನ್ನು ಬೈರೇಗೌಡರು ತಮ್ಮ ನಾಟಕದಲ್ಲಿ ಹೇಳಿದ್ದಾರೆ. ಈ ಪುಸ್ತಕವು ಹಿಂದಿ ಬೋಧಕರ ಕೈಗೆ ತಲುಪಿ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನವಾಗಬೇಕು. ಆ ಕಾರ್ಯಕ್ಕೆ ನಾನು ಸಹ ಕೈ ಜೋಡಿಸುವೆ’ ಎಂದು ಅನುವಾದಿತ ಕೃತಿ ಕುರಿತು ಮಾತನಾಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಮೈಥಿಲಿ ಪಿ. ರಾವ್ ಅಭಿಪ್ರಾಯಪಟ್ಟರು. ‘ಹಿಂದಿ ಮತ್ತು ಕನ್ನಡ ಭಾಷೆಯ ವ್ಯಾಕರಣದಲ್ಲಿ ಸಾಮ್ಯತೆ ಇದೆ. ಆದರೆ ಜಾನಪದ ಸಾಹಿತ್ಯ ಅನುವಾದ ಮಾಡುವಾಗ ವ್ಯತ್ಯಾಸ ಕಾಣುತ್ತೇವೆ. ಅದೆಲ್ಲವನ್ನೂ ಡಾ. ಎನ್. ದೇವರಾಜ್ ಅವರು ಅಳೆದು ತೂಗಿ ಕೃತಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಹಿಂದಿಗೆ ಅನುವಾದಿಸಿದ್ದಾರೆ. ಸಮಾಜದಲ್ಲಿ ನಕಾರಾತ್ಮಕ ಅಂಶಗಳಷ್ಟೇ ಸಕಾರಾತ್ಮಕ ಅಂಶಗಳಿವೆ. ಈ ಅಂಶಗಳಿಗೆ ಒತ್ತು ನೀಡುತ್ತಾ ಸಮಾಜದ ಸ್ವಾಸ್ಥ್ಯ ಕಾಯುವ ಜವಾಬ್ದಾರಿ ಕೃತಿಕಾರನ ಮೇಲಿದ್ದು ಬೈರೇಗೌಡರು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.