<p><strong>ಕನಕಪುರ:</strong> ಕೆಆರ್ಎಸ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿಸುತ್ತಿರುವುದರಿಂದ ತಾಲೂಕಿನ ಸಂಗಮ ದಡದಲ್ಲಿರುವ ಬೊಮ್ಮಸಂದ್ರ ಶಾಂತಿಧಾಮ ಜಂಗಲ್ ಲಾಡ್ಜ್ ನೀರಿನಿಂದ ಅವೃತವಾಗಿವೆ.</p>.<p>ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಂಗಲ್ ಲಾಡ್ಜ್ಗೆ ಹೋಗುವ ರಸ್ತೆಯಲ್ಲಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸಂಪರ್ಕ ಕಡಿತಗೊಂಡಿದೆ. </p>.<p>ಈ ಪ್ರದೇಶದ ಜನರು ಅಲ್ಲಿಂದ ಆಚೆ ಬರಲಾಗಲು ಆಗುತ್ತಿಲ್ಲ. ಜಲದಿಗ್ಬಂಧನದಿಂದಾಗಿ ಗ್ರಾಮದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.</p>.<p>ತಾಲ್ಲೂಕು ಆಡಳಿತ ಇಲ್ಲಿಗೆ ಭೇಟಿ ಕೊಟ್ಟು ಜನರಿಗೆ ಆಹಾರ ಮತ್ತು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು. ಜನ, ಜಾನವಾರು ಗ್ರಾಮದಿಂದ ಹೊರಗಡೆ ಬರಲು ಅಗತ್ಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಸಂಗಮ ದಡದಲ್ಲಿರುವ ಶಾಂತಿಧಾಮ ಜಂಗಲ್ ಲಾಡ್ಜ್ ಮತ್ತು ಬೊಮ್ಮಸಂದ್ರ ಗ್ರಾಮಕ್ಕೆ ಸೇತುವೆ ಇಲ್ಲದಿರುವುದೇ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗಿದೆ ಎಂದು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ ಆರೋಪ ಮಾಡಿದರು.</p>.<p>ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ಹಳ್ಳಗಳಲ್ಲಿ 15 ರಿಂದ 20 ಅಡಿಯಷ್ಟು ನೀರು ಸಂಗ್ರಹವಾಗುತ್ತೆ. ಇದರಿಂದ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಸೇತುವೆ ನಿರ್ಮಿಸುವಂತೆ ಜನರು ಒತ್ತಾಯಿಸಿದರೂ ಅರಣ್ಯ ಇಲಾಖೆ ಅನುಮತಿ ಸಿಗದ ಕಾರಣ ಸೇತುವೆ ಕನಸಾಗಿಯೇ ಉಳಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಕೆಆರ್ಎಸ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿಸುತ್ತಿರುವುದರಿಂದ ತಾಲೂಕಿನ ಸಂಗಮ ದಡದಲ್ಲಿರುವ ಬೊಮ್ಮಸಂದ್ರ ಶಾಂತಿಧಾಮ ಜಂಗಲ್ ಲಾಡ್ಜ್ ನೀರಿನಿಂದ ಅವೃತವಾಗಿವೆ.</p>.<p>ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಂಗಲ್ ಲಾಡ್ಜ್ಗೆ ಹೋಗುವ ರಸ್ತೆಯಲ್ಲಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸಂಪರ್ಕ ಕಡಿತಗೊಂಡಿದೆ. </p>.<p>ಈ ಪ್ರದೇಶದ ಜನರು ಅಲ್ಲಿಂದ ಆಚೆ ಬರಲಾಗಲು ಆಗುತ್ತಿಲ್ಲ. ಜಲದಿಗ್ಬಂಧನದಿಂದಾಗಿ ಗ್ರಾಮದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.</p>.<p>ತಾಲ್ಲೂಕು ಆಡಳಿತ ಇಲ್ಲಿಗೆ ಭೇಟಿ ಕೊಟ್ಟು ಜನರಿಗೆ ಆಹಾರ ಮತ್ತು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು. ಜನ, ಜಾನವಾರು ಗ್ರಾಮದಿಂದ ಹೊರಗಡೆ ಬರಲು ಅಗತ್ಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಸಂಗಮ ದಡದಲ್ಲಿರುವ ಶಾಂತಿಧಾಮ ಜಂಗಲ್ ಲಾಡ್ಜ್ ಮತ್ತು ಬೊಮ್ಮಸಂದ್ರ ಗ್ರಾಮಕ್ಕೆ ಸೇತುವೆ ಇಲ್ಲದಿರುವುದೇ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗಿದೆ ಎಂದು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ ಆರೋಪ ಮಾಡಿದರು.</p>.<p>ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ಹಳ್ಳಗಳಲ್ಲಿ 15 ರಿಂದ 20 ಅಡಿಯಷ್ಟು ನೀರು ಸಂಗ್ರಹವಾಗುತ್ತೆ. ಇದರಿಂದ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಸೇತುವೆ ನಿರ್ಮಿಸುವಂತೆ ಜನರು ಒತ್ತಾಯಿಸಿದರೂ ಅರಣ್ಯ ಇಲಾಖೆ ಅನುಮತಿ ಸಿಗದ ಕಾರಣ ಸೇತುವೆ ಕನಸಾಗಿಯೇ ಉಳಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>