<p><strong>ಮಾಗಡಿ:</strong> ತಾಲ್ಲೂಕಿನ ಅಗಲಕೋಟೆ ಗ್ರಾಮದಲ್ಲಿ ನಾಲ್ಕು ತಲೆಮಾರುಗಳಿಂದಲೂ ಸಲಾಕೆ ಬೊಂಬೆ ಕಲೆಯನ್ನು ಕುಟುಂಬವೊಂದು ಜತನದಿಂದ ಕಾಪಾಡಿಕೊಂಡು ಬಂದಿದ್ದು; ಇದೀಗ ಅಳಿವಿನಂಚಿಗೆ ದೂಡಲ್ಪಟ್ಟಿರುವ ಈ ಕಲಾ ಪರಂಪರೆಯನ್ನು ರಕ್ಷಿಸಬೇಕಿದೆ.</p><p>ಕಲಾವಿದ ಎ.ಆರ್.ಸತ್ಯನಾರಾಯಣ ಬೊಂಬೆ ಕಲೆ ಪೋಷಿಸಿಕೊಂಡು, ಆರಾಧಿಸುತ್ತಿರುವ ಕುಟುಂಬದ ಕುಡಿ.</p><p>16 ಕೆ.ಜಿ ತೂಕದ ಆಲೆ ಮರದ ಬೊಂಬೆಗಳಿಗೆ ಸಲಾಕೆ ಜೋಡಿಸಿ, ತಲೆಗೆ ಸಿಕ್ಕಿಸಿಕೊಂಡು ಕಲಾ ಪ್ರದರ್ಶನ ನೀಡುವುದನ್ನು ಕಣ್ತುಂಬಿಕೊಳ್ಳುವುದೇ ಆನಂದ.</p><p><strong>ಅರಸರ ಆಸ್ಥಾನದಲ್ಲಿ ಪ್ರದರ್ಶನ:</strong> ಸತ್ಯನಾರಾಯಣ ಅವರ ಪೂರ್ವಿಕರಾದ ಅಗಲಕೋಟೆ ನರಸಿಂಗರಾಯರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮರೋಳೆ ಮರದಿಂದ ಈ ಬೊಂಬೆಗಳನ್ನು ತಯಾರಿಸಿಕೊಂಡರು. ಇವು ತೂಕವಿದ್ದುದರಿಂದ ಸಲಾಕೆ ಸೇರಿಸಿ, ತಮ್ಮ ತಲೆಗೆ ಜೋಡಿಸಿಕೊಂಡು ಪ್ರದರ್ಶನ ನೀಡಿದರು. ಮೈಸೂರಿನ ಅರಸರ ಆಸ್ಥಾನದಲ್ಲಿ ಪ್ರದರ್ಶನ ನೀಡಿ, ‘ಸೂತ್ರ ಬ್ರಹ್ಮ’ ಎಂಬ ಬಿರುದು ಪಡೆದಿದ್ದರು.</p>.<p>ನರಸಿಂಗರಾಯರ ಪುತ್ರ ಎಂ.ಎನ್.ರಾಮಯ್ಯ ಬೊಂಬೆಕಲೆಯನ್ನು ಕರಗತ ಮಾಡಿಕೊಂಡರು. ಇವರ ಪುತ್ರ ಎಂ.ಆರ್.ಸತ್ಯನಾರಾಯಣ ಬಾಲ್ಯದಿಂದಲೂ ತಂದೆಯವರೊಂದಿಗೆ ನವದೆಹಲಿ, ಚೆನ್ನೈ, ತಿರುಪತಿ ಇತರೆಡೆ ಬೊಂಬೆಗಳ ಪ್ರದರ್ಶನ ನೀಡಿದ್ದಾರೆ. ಮೃದುವಾದ ಮರದಿಂದ ಸ್ವತಃ ಬೊಂಬೆಗಳ ತಯಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಪುತ್ರ ರಂಗನಾಥರಾವ್ಗೂ ಕಲೆಯನ್ನು ಧಾರೆಯೆರೆದಿದ್ದಾರೆ.</p><p>ಆರಂಭದಿಂದಲೂ ಈ ಕುಟುಂಬವೊಂದೇ ಸಲಾಕೆ ಬೊಂಬೆ ಕಲೆಯಲ್ಲಿ ತೊಡಗಿಸಿಕೊಂಡಿದೆ.</p><p>ಶ್ರೀಕೃಷ್ಣ ತುಲಾಭಾರ, ಶ್ರೀಕೃಷ್ಣ ಪಾರಿಜಾತ, ಲವಕುಶ ಸೇರಿದಂತೆ ಇತರೆ ಪೌರಾಣಿಕ ಕಥಾಪ್ರಸಂಗಗಳನ್ನು 12 ಜನರ ತಂಡದೊಂದಿಗೆ 2 ಗಂಟೆ ಅವಧಿಯಲ್ಲಿ ಪ್ರದರ್ಶಿಸುವ ಸತ್ಯನಾರಾಯಣ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರಂಭದಲ್ಲಿ ನರಸಿಂಗರಾಯರು ಗಿಡಮೂಲಿಕೆಗಳಿಂದ ತಯಾರಿಸಿಕೊಂಡು ಬೊಂಬೆಗಳಿಗೆ ಬಳಿದಿರುವ ಬಣ್ಣ ಇಂದಿಗೂ ಮಾಸಿಲ್ಲ.</p><p>ಕೊರೊನಾ ನಂತರ ಬೊಂಬೆಗಳ ಪ್ರದರ್ಶನ ಕಲೆ ನಡೆಯುವುದು ಕಡಿಮೆಯಾಗಿದೆ. ದೊಂಬಿದಾಸರ ಬಯಲು ನಾಟಕ, ತೊಗಲು ಬೊಂಬೆಗಳ ಕುಣಿತ, ಭಜನೆ, ಹರಿಕಥೆಗಳು ಮೂಲೆಗುಂಪಾಗಿರುವಂತೆ ಸಲಾಕೆ ಬೊಂಬೆಗಳ ಪ್ರದರ್ಶನವೂ ಮೂಲೆಗುಂಪಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನ ಅಗಲಕೋಟೆ ಗ್ರಾಮದಲ್ಲಿ ನಾಲ್ಕು ತಲೆಮಾರುಗಳಿಂದಲೂ ಸಲಾಕೆ ಬೊಂಬೆ ಕಲೆಯನ್ನು ಕುಟುಂಬವೊಂದು ಜತನದಿಂದ ಕಾಪಾಡಿಕೊಂಡು ಬಂದಿದ್ದು; ಇದೀಗ ಅಳಿವಿನಂಚಿಗೆ ದೂಡಲ್ಪಟ್ಟಿರುವ ಈ ಕಲಾ ಪರಂಪರೆಯನ್ನು ರಕ್ಷಿಸಬೇಕಿದೆ.</p><p>ಕಲಾವಿದ ಎ.ಆರ್.ಸತ್ಯನಾರಾಯಣ ಬೊಂಬೆ ಕಲೆ ಪೋಷಿಸಿಕೊಂಡು, ಆರಾಧಿಸುತ್ತಿರುವ ಕುಟುಂಬದ ಕುಡಿ.</p><p>16 ಕೆ.ಜಿ ತೂಕದ ಆಲೆ ಮರದ ಬೊಂಬೆಗಳಿಗೆ ಸಲಾಕೆ ಜೋಡಿಸಿ, ತಲೆಗೆ ಸಿಕ್ಕಿಸಿಕೊಂಡು ಕಲಾ ಪ್ರದರ್ಶನ ನೀಡುವುದನ್ನು ಕಣ್ತುಂಬಿಕೊಳ್ಳುವುದೇ ಆನಂದ.</p><p><strong>ಅರಸರ ಆಸ್ಥಾನದಲ್ಲಿ ಪ್ರದರ್ಶನ:</strong> ಸತ್ಯನಾರಾಯಣ ಅವರ ಪೂರ್ವಿಕರಾದ ಅಗಲಕೋಟೆ ನರಸಿಂಗರಾಯರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮರೋಳೆ ಮರದಿಂದ ಈ ಬೊಂಬೆಗಳನ್ನು ತಯಾರಿಸಿಕೊಂಡರು. ಇವು ತೂಕವಿದ್ದುದರಿಂದ ಸಲಾಕೆ ಸೇರಿಸಿ, ತಮ್ಮ ತಲೆಗೆ ಜೋಡಿಸಿಕೊಂಡು ಪ್ರದರ್ಶನ ನೀಡಿದರು. ಮೈಸೂರಿನ ಅರಸರ ಆಸ್ಥಾನದಲ್ಲಿ ಪ್ರದರ್ಶನ ನೀಡಿ, ‘ಸೂತ್ರ ಬ್ರಹ್ಮ’ ಎಂಬ ಬಿರುದು ಪಡೆದಿದ್ದರು.</p>.<p>ನರಸಿಂಗರಾಯರ ಪುತ್ರ ಎಂ.ಎನ್.ರಾಮಯ್ಯ ಬೊಂಬೆಕಲೆಯನ್ನು ಕರಗತ ಮಾಡಿಕೊಂಡರು. ಇವರ ಪುತ್ರ ಎಂ.ಆರ್.ಸತ್ಯನಾರಾಯಣ ಬಾಲ್ಯದಿಂದಲೂ ತಂದೆಯವರೊಂದಿಗೆ ನವದೆಹಲಿ, ಚೆನ್ನೈ, ತಿರುಪತಿ ಇತರೆಡೆ ಬೊಂಬೆಗಳ ಪ್ರದರ್ಶನ ನೀಡಿದ್ದಾರೆ. ಮೃದುವಾದ ಮರದಿಂದ ಸ್ವತಃ ಬೊಂಬೆಗಳ ತಯಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಪುತ್ರ ರಂಗನಾಥರಾವ್ಗೂ ಕಲೆಯನ್ನು ಧಾರೆಯೆರೆದಿದ್ದಾರೆ.</p><p>ಆರಂಭದಿಂದಲೂ ಈ ಕುಟುಂಬವೊಂದೇ ಸಲಾಕೆ ಬೊಂಬೆ ಕಲೆಯಲ್ಲಿ ತೊಡಗಿಸಿಕೊಂಡಿದೆ.</p><p>ಶ್ರೀಕೃಷ್ಣ ತುಲಾಭಾರ, ಶ್ರೀಕೃಷ್ಣ ಪಾರಿಜಾತ, ಲವಕುಶ ಸೇರಿದಂತೆ ಇತರೆ ಪೌರಾಣಿಕ ಕಥಾಪ್ರಸಂಗಗಳನ್ನು 12 ಜನರ ತಂಡದೊಂದಿಗೆ 2 ಗಂಟೆ ಅವಧಿಯಲ್ಲಿ ಪ್ರದರ್ಶಿಸುವ ಸತ್ಯನಾರಾಯಣ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರಂಭದಲ್ಲಿ ನರಸಿಂಗರಾಯರು ಗಿಡಮೂಲಿಕೆಗಳಿಂದ ತಯಾರಿಸಿಕೊಂಡು ಬೊಂಬೆಗಳಿಗೆ ಬಳಿದಿರುವ ಬಣ್ಣ ಇಂದಿಗೂ ಮಾಸಿಲ್ಲ.</p><p>ಕೊರೊನಾ ನಂತರ ಬೊಂಬೆಗಳ ಪ್ರದರ್ಶನ ಕಲೆ ನಡೆಯುವುದು ಕಡಿಮೆಯಾಗಿದೆ. ದೊಂಬಿದಾಸರ ಬಯಲು ನಾಟಕ, ತೊಗಲು ಬೊಂಬೆಗಳ ಕುಣಿತ, ಭಜನೆ, ಹರಿಕಥೆಗಳು ಮೂಲೆಗುಂಪಾಗಿರುವಂತೆ ಸಲಾಕೆ ಬೊಂಬೆಗಳ ಪ್ರದರ್ಶನವೂ ಮೂಲೆಗುಂಪಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>