ನಾಲ್ಕು ದಿನಗಳಲ್ಲಿ ಸ್ಲುಸ್ ಗೇಟ್ ದುರಸ್ತಿ
ಹೊಸಪೇಟೆಯ ತುಂಗಭದ್ರಾ ಜಲಾಶಯ ತುಂಬಿದ ನಂತರ ಗೇಟ್ ಕಿತ್ತುಹೋಗಿದ್ದರೆ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್ ಎರಡು ತಿಂಗಳ ಹಿಂದೆ ಜಲಾಶಯದಲ್ಲಿ ಶೇ 30ರಷ್ಟು ನೀರಿದ್ದಾಗ ಕ್ಯಾಲ್ಸಿನೇಶನ್ ಸಮಸ್ಯೆಯಿಂದ ಕಿತ್ತು ಹೋಗಿತ್ತು. ಇದರಿಂದ ನಾಲ್ಕು ದಿನಗಳಲ್ಲಿ 0.34 ಟಿಎಂಸಿ ಅಡಿ ನೀರು ನದಿಗೆ ಹರಿದಿತ್ತು. ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮುಳುಗು ತಜ್ಞರ ನೆರವಿನಿಂದ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಿ ಗೇಟ್ ದುರಸ್ತಿ ಮಾಡಿದ್ದರು. ಭದ್ರಾ ಜಲಾಶಯದ ಸುರಕ್ಷೆಗೆ ಕರ್ನಾಟಕ ನೀರಾವರಿ ನಿಗಮವು ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ಅಧೀನದ ಜಲಾಶಯಗಳ ಪುನರುತ್ಥಾನ ಹಾಗೂ ಅಭಿವೃದ್ಧಿ ಯೋಜನೆ (Dam Rehabitaton and Improvement Project–Drip) ಅಡಿ ತಾಂತ್ರಿಕ ಹಾಗೂ ಆರ್ಥಿಕ ನೆರವು ಕೋರಿದೆ. ಇದಕ್ಕಾಗಿ ₹ 100 ಕೋಟಿ ಮೊತ್ತದ ಯೋಜನಾ ವರದಿ ಕೂಡ ಸಿದ್ಧಪಡಿಸಿ ಕಳುಹಿಸಿದೆ.