<p><strong>ಶಿರಾಳಕೊಪ್ಪ (ಶಿವಮೊಗ್ಗ):</strong> ಪ್ರತಿ ವಾರ ನಡೆಯುವ ಇಲ್ಲಿನ ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಇರಿಸಿದ್ದ ಚೀಲದಲ್ಲಿನ ವಸ್ತು ಸ್ಫೋಟಗೊಂಡು ಇಬ್ಬರಿಗೆ ಗಾಯಗಳಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.</p>.<p>ಜಮೀನಿನಲ್ಲಿನ ಬೆಳೆ ತಿನ್ನಲು ಬರುವ ಕಾಡು ಪ್ರಾಣಿಗಳಿಗೆ ಇಡುವ ಉದ್ದೇಶದಿಂದ ಸ್ಫೋಟಕ ಖರೀದಿಸಿ ಚೀಲದಲ್ಲಿ ಇರಿಸಿರಬಹುದು. ಅದೇ ಚೀಲದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಎರಡು ಬೆಡ್ಶೀಟ್ ಖರೀದಿಸಿ ಚೀಲವನ್ನು ಅಲ್ಲೇ ಇಟ್ಟಿದ್ದರು. ನಂತರ ಮತ್ತಿಬ್ಬರನ್ನು ಕರೆತಂದು, ಅವರ ಚೀಲವನ್ನೂ ಇರಿಸಿ ನೋಡಿಕೊಳ್ಳುವಂತೆ ಹೇಳಿಹೋಗಿದ್ದರು.</p>.<p>ಅಂಗಡಿ ಮಾಲೀಕ ಅಂಥೋನಿ ಅವರ ಕಾಲು ಆ ಚೀಲಕ್ಕೆ ಬಡಿದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಂಥೋನಿ ಹಾಗೂ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅಂಥೋನಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ.</p>.<p>ಸ್ಫೋಟದ ಸದ್ದಿಗೆ ಸಾರ್ವಜನಿಕರು ಗಾಬರಿಯಿಂದ ಸಂತೆ ಸ್ಥಳದಿಂದ ಓಡಿ ಹೋದರು. ಜನರಲ್ಲಿ ಆತಂಕ ಉಂಟಾದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.</p>.<p>‘ಕಾಡು ಹಂದಿ ಸೇರಿದಂತೆ ಇತರ ಪ್ರಾಣಿಗಳಿಗೆ ಇರಿಸಲು ಸ್ಫೋಟಕ ಖರೀದಿಸಿ ಈ ಚೀಲದಲ್ಲಿ ಇಟ್ಟಿರುವ ಸಾಧ್ಯತೆ ಇದ್ದು, ಅದೇ ಚೀಲ ಸ್ಫೋಟಿಸಿದೆ. ಉಮೇಶ ಮತ್ತು ರೂಪಾ ಎಂಬುವವರಿಗೆ ಸೇರಿರುವ ಆಧಾರ್ ಕಾರ್ಡ್ಗಳು ಚೀಲದಲ್ಲಿ ಸಿಕ್ಕಿವೆ. ಅವರ ಪತ್ತೆಗೆ ಶೋಧ ನಡೆದಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ (ಶಿವಮೊಗ್ಗ):</strong> ಪ್ರತಿ ವಾರ ನಡೆಯುವ ಇಲ್ಲಿನ ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಇರಿಸಿದ್ದ ಚೀಲದಲ್ಲಿನ ವಸ್ತು ಸ್ಫೋಟಗೊಂಡು ಇಬ್ಬರಿಗೆ ಗಾಯಗಳಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.</p>.<p>ಜಮೀನಿನಲ್ಲಿನ ಬೆಳೆ ತಿನ್ನಲು ಬರುವ ಕಾಡು ಪ್ರಾಣಿಗಳಿಗೆ ಇಡುವ ಉದ್ದೇಶದಿಂದ ಸ್ಫೋಟಕ ಖರೀದಿಸಿ ಚೀಲದಲ್ಲಿ ಇರಿಸಿರಬಹುದು. ಅದೇ ಚೀಲದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಎರಡು ಬೆಡ್ಶೀಟ್ ಖರೀದಿಸಿ ಚೀಲವನ್ನು ಅಲ್ಲೇ ಇಟ್ಟಿದ್ದರು. ನಂತರ ಮತ್ತಿಬ್ಬರನ್ನು ಕರೆತಂದು, ಅವರ ಚೀಲವನ್ನೂ ಇರಿಸಿ ನೋಡಿಕೊಳ್ಳುವಂತೆ ಹೇಳಿಹೋಗಿದ್ದರು.</p>.<p>ಅಂಗಡಿ ಮಾಲೀಕ ಅಂಥೋನಿ ಅವರ ಕಾಲು ಆ ಚೀಲಕ್ಕೆ ಬಡಿದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಂಥೋನಿ ಹಾಗೂ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅಂಥೋನಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ.</p>.<p>ಸ್ಫೋಟದ ಸದ್ದಿಗೆ ಸಾರ್ವಜನಿಕರು ಗಾಬರಿಯಿಂದ ಸಂತೆ ಸ್ಥಳದಿಂದ ಓಡಿ ಹೋದರು. ಜನರಲ್ಲಿ ಆತಂಕ ಉಂಟಾದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.</p>.<p>‘ಕಾಡು ಹಂದಿ ಸೇರಿದಂತೆ ಇತರ ಪ್ರಾಣಿಗಳಿಗೆ ಇರಿಸಲು ಸ್ಫೋಟಕ ಖರೀದಿಸಿ ಈ ಚೀಲದಲ್ಲಿ ಇಟ್ಟಿರುವ ಸಾಧ್ಯತೆ ಇದ್ದು, ಅದೇ ಚೀಲ ಸ್ಫೋಟಿಸಿದೆ. ಉಮೇಶ ಮತ್ತು ರೂಪಾ ಎಂಬುವವರಿಗೆ ಸೇರಿರುವ ಆಧಾರ್ ಕಾರ್ಡ್ಗಳು ಚೀಲದಲ್ಲಿ ಸಿಕ್ಕಿವೆ. ಅವರ ಪತ್ತೆಗೆ ಶೋಧ ನಡೆದಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>