<p><strong>ಹೊಸನಗರ:</strong> ‘ಶಂಕರಾಚಾರ್ಯರ ಶಿಷ್ಯ ಪರಂಪರೆಯ ನಾಲ್ಕು ಪ್ರಧಾನ ಮಠಗಳಲ್ಲಿ ಶೃಂಗೇರಿ ಮಠ ಕೂಡ ಒಂದಾಗಿದ್ದು, ಶಂಕರಾಚಾರ್ಯರಿಂದ ಮಹತ್ವ ಪಡೆದ ಕೊಡಚಾದ್ರಿ ದರ್ಶನ ಭಕ್ತರ ಅಪೇಕ್ಷೆಯಲ್ಲದೇ ನಮ್ಮ ಅಪೇಕ್ಷೆ ಕೂಡ ಆಗಿತ್ತು’ ಎಂದು ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.</p>.<p>ಈಚೆಗೆ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ ಅವರು, ಪರ್ವತೇಶ್ವರ, ಹುಲಿರಾಯ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ನೆರವೇರಿಸಿದರು. ಬಳಿಕ ಸರ್ವಜ್ಞ ಪೀಠಕ್ಕೆ ತೆರಳಿ ವೀಕ್ಷಿಸಿದರು.</p>.<p>‘ಶಂಕರಾಚಾರ್ಯರು ಕೊಡಚಾದ್ರಿಗೆ ಬಂದು ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಪುರಾಣ ಪ್ರಸಿದ್ಧ ಸ್ಥಳವಿದು. ಶೃಂಗೇರಿ ಮಠ ಕೂಡ ಶಂಕರಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದೆ. ಹಿಂದಿನ ಗುರುಗಳು ಕೂಡ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ನಮಗು ಕೂಡ ಈ ಅಪೇಕ್ಷೆ ಇತ್ತು’ ಎಂದರು.</p>.<p>ಸನಾತನ ಭವ್ಯ ಪರಂಪರೆಗೆ ಶಂಕರಾಚಾರ್ಯರ ಕೊಡುಗೆ ಅನನ್ಯ. ಅವರು ಇಲ್ಲಿಯ ಸರ್ವಜ್ಞ ಪೀಠದಲ್ಲಿ ಧ್ಯಾನಾಸಕ್ತರಾಗಿದ್ದು, ಮಹತ್ವ ಪಡೆದುಕೊಂಡಿದೆ ಎಂದರು.</p>.<p>ಗಿರಿಯ ದೇಗುಲಗಳ ದರ್ಶನ ಮಾಡಿದ ಬಳಿಕ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ವಿಧುಶೇಖರ ಸ್ವಾಮೀಜಿ, ಗಣಪತಿ ಗುಹೆಗೂ ಭೇಟಿ ನೀಡಿದರು. ಕೊಡಚಾದ್ರಿಯ ಪ್ರಾಕೃತಿಕ ಶ್ರೀಮಂತಿಕೆಯನ್ನು ಕೆಲಕಾಲ ಸವಿದರು.</p>.<p>ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಪದಮನೆ ಶಿವರಾಮಶೆಟ್ಟಿ, ಸದಸ್ಯರಾದ ಪವಿತ್ರ ಭಟ್, ಶರಾವತಿ, ಸುವರ್ಣ, ಗಿರೀಶ್, ಗಣಪತಿ, ರವಿ, ಅರ್ಚಕರು, ಸ್ಥಳೀಯ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ‘ಶಂಕರಾಚಾರ್ಯರ ಶಿಷ್ಯ ಪರಂಪರೆಯ ನಾಲ್ಕು ಪ್ರಧಾನ ಮಠಗಳಲ್ಲಿ ಶೃಂಗೇರಿ ಮಠ ಕೂಡ ಒಂದಾಗಿದ್ದು, ಶಂಕರಾಚಾರ್ಯರಿಂದ ಮಹತ್ವ ಪಡೆದ ಕೊಡಚಾದ್ರಿ ದರ್ಶನ ಭಕ್ತರ ಅಪೇಕ್ಷೆಯಲ್ಲದೇ ನಮ್ಮ ಅಪೇಕ್ಷೆ ಕೂಡ ಆಗಿತ್ತು’ ಎಂದು ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.</p>.<p>ಈಚೆಗೆ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ ಅವರು, ಪರ್ವತೇಶ್ವರ, ಹುಲಿರಾಯ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ನೆರವೇರಿಸಿದರು. ಬಳಿಕ ಸರ್ವಜ್ಞ ಪೀಠಕ್ಕೆ ತೆರಳಿ ವೀಕ್ಷಿಸಿದರು.</p>.<p>‘ಶಂಕರಾಚಾರ್ಯರು ಕೊಡಚಾದ್ರಿಗೆ ಬಂದು ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಪುರಾಣ ಪ್ರಸಿದ್ಧ ಸ್ಥಳವಿದು. ಶೃಂಗೇರಿ ಮಠ ಕೂಡ ಶಂಕರಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದೆ. ಹಿಂದಿನ ಗುರುಗಳು ಕೂಡ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ನಮಗು ಕೂಡ ಈ ಅಪೇಕ್ಷೆ ಇತ್ತು’ ಎಂದರು.</p>.<p>ಸನಾತನ ಭವ್ಯ ಪರಂಪರೆಗೆ ಶಂಕರಾಚಾರ್ಯರ ಕೊಡುಗೆ ಅನನ್ಯ. ಅವರು ಇಲ್ಲಿಯ ಸರ್ವಜ್ಞ ಪೀಠದಲ್ಲಿ ಧ್ಯಾನಾಸಕ್ತರಾಗಿದ್ದು, ಮಹತ್ವ ಪಡೆದುಕೊಂಡಿದೆ ಎಂದರು.</p>.<p>ಗಿರಿಯ ದೇಗುಲಗಳ ದರ್ಶನ ಮಾಡಿದ ಬಳಿಕ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ವಿಧುಶೇಖರ ಸ್ವಾಮೀಜಿ, ಗಣಪತಿ ಗುಹೆಗೂ ಭೇಟಿ ನೀಡಿದರು. ಕೊಡಚಾದ್ರಿಯ ಪ್ರಾಕೃತಿಕ ಶ್ರೀಮಂತಿಕೆಯನ್ನು ಕೆಲಕಾಲ ಸವಿದರು.</p>.<p>ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಪದಮನೆ ಶಿವರಾಮಶೆಟ್ಟಿ, ಸದಸ್ಯರಾದ ಪವಿತ್ರ ಭಟ್, ಶರಾವತಿ, ಸುವರ್ಣ, ಗಿರೀಶ್, ಗಣಪತಿ, ರವಿ, ಅರ್ಚಕರು, ಸ್ಥಳೀಯ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>