<p><strong>ತೀರ್ಥಹಳ್ಳಿ</strong>: ಸಮೀಪದ ಮಂಡಗದ್ದೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡ ದುರವಸ್ಥೆಗೆ ತಲುಪಿದ್ದು, 5 ವರ್ಷಗಳಿಂದ ಮಳೆ ಸುರಿದಾಗ ಸೋರುತ್ತಿದೆ.</p>.<p>2010ರಲ್ಲಿ ನಿರ್ಮಿಸಿದ್ದ ಪಂಚಾಯಿತಿ ಕಚೇರಿಯ ಈ ಕಟ್ಟಡ ದಶಕದಿಂದ ಬಿರುಕುಬಿಟ್ಟ ಸ್ಥಿತಿಯಲ್ಲಿದೆ. ಮಂಡಗದ್ದೆ ಹೋಬಳಿ ತಾಲ್ಲೂಕಿನಲ್ಲೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಸಣ್ಣ ಮಳೆ ಬಂದರೂ ಕಟ್ಟಡ ವಿಪರೀತ ಸೋರತೊಡಗಿದೆ. ಕಚೇರಿ ಕೆಲಸಕ್ಕೆ ಬರುವ ಜನ ಸಾಮಾನ್ಯರು ಛತ್ರಿ ಬಿಡಿಸಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಶಾಸಕ ಆರಗ ಜ್ಞಾನೇಂದ್ರ ಕಚೇರಿಯೊಳಗೆ ಛತ್ರಿ ಬಿಡಿಸಿರುವುದು ಇದಕ್ಕೆ ತಾಜಾ ಉದಾರಣೆ.</p>.<p>ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳು ಇವೆ. ಸ್ವಂತ ಆದಾಯವಿಲ್ಲದ ಅತಿ ಹಿಂದುಳಿದ ಗ್ರಾಮೀಣ ಭಾಗದ ಪಂಚಾಯಿತಿಗಳು ಅಭಿವೃದ್ಧಿಯ ಕ್ರಿಯಾಯೋಜನೆ ತಯಾರಿಸಲು ಕೊಸರಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅನುದಾನ ಸಿಗದಿದ್ದರೆ ಕಚೇರಿ ನಡೆಸುವುದು ಕಷ್ಟ ಸಾಧ್ಯವಾಗಿದೆ. ಸಣ್ಣ ಕೆಲಸಕ್ಕೂ ಶಾಸಕರ ಅನುದಾನಕ್ಕೆ ಕಾಯಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ.</p>.<p>ಕುಡಿಯುವ ನೀರು ನಿರ್ವಹಣೆ, ನರೇಗಾ, ಗ್ರಂಥಾಲಯ, ಪರಿಶಿಷ್ಟ ಜಾತಿ– ಪಂಗಡ ಅಭಿವೃದ್ಧಿ, ನೈರ್ಮಲ್ಯ, 15ನೇ ಹಣಕಾಸು ಯೋಜನೆಯಡಿ ಅನುದಾನ ಲಭ್ಯವಿದೆ. ಆದರೆ, ಎಲ್ಲಾ ಯೋಜನೆಗಳಡಿ ಸಿಗುವ ಅನುದಾನದ ಪ್ರಮಾಣ ಕಡಿಮೆಯಾಗಿದ್ದು ನಿರ್ದಿಷ್ಟ ಕೆಲಸಕ್ಕೆ ಮೀಸಲಿಟ್ಟು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಾಗಿದೆ. ಮರಳು, ಬಾಡಿಗೆ ಕಟ್ಟಡದ ಆದಾಯ ಇಲ್ಲದೇ ವರ್ಗ– 1ರ ಅನುದಾನ ಕೂಡ ಕೆಲವು ಪಂಚಾಯಿತಿಗಳಲ್ಲಿ ಶೂನ್ಯ ಎಂಬಂತಾಗಿದೆ. ಕಟ್ಟಡ ದುರಸ್ತಿಗೂ ಹಣ ಇಲ್ಲದ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ತೆವಳುತ್ತಿದೆ.</p>.<p><strong>ಕಟ್ಟಡಕ್ಕೆ ನರೇಗಾ ಅನುದಾನ:</strong></p>.<p>ಮುಳುಬಾಗಿಲು, ಮೇಗರವಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಟ್ಟಡ ಸಮಸ್ಯೆ ನಿವಾರಣೆಗಾಗಿ ಸರ್ಕಾರ ನೇರವಾಗಿ ಅನುದಾನ ಬಿಡುಗಡೆ ಮಾಡುವ ಮುಕ್ತ ಅವಕಾಶ ನೀಡಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ನರೇಗಾ ಯೋಜನೆ ಅನುದಾನ ಬಳಸಿಕೊಳ್ಳಬಹುದು. 2024 ಜೂನ್ 23ರಂದು ನಡೆದ ಸಭೆಯಲ್ಲಿ ಅನುದಾನ ಬಳಕೆ ಕುರಿತು ರಾಜ್ಯ ಕಾರ್ಯಕಾರಿ ಸಮಿತಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಜಿಲ್ಲಾ ಪಂಚಾಯಿತಿ ಸಿಇಒ ಸರ್ಕಾರಕ್ಕೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.</p>.<p>ಶಾಸಕರಿಗೆ ಗ್ರಾಮೀಣ ಭಾಗದ ಸಣ್ಣಪುಟ್ಟ ಸಮಸ್ಯೆ ಕಾಣಿಸುವುದಿಲ್ಲ. ಬೃಹತ್ ಯೋಜನೆಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಆರಗ ಜ್ಞಾನೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಪಂಚಾಯಿತಿ ಕಟ್ಟಡ ದುರಸ್ತಿಗೆ ಬೇಡಿಕೆ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ. </p><p>-<strong>ಪುಟ್ಟೋಡ್ಲು ರಾಘವೇಂದ್ರ ಮಂಡಗದ್ದೆ ಗ್ರಾ.ಪಂ. ಸದಸ್ಯ</strong></p>.<p>ಅನುದಾನ ಇಲ್ಲದೇ ಆಡಳಿತ ನಡೆಸುವುದು ಕಷ್ಟವಾಗಿದೆ. ಪಂಚಾಯಿತಿಯ ಹೆಂಚಿನ ಕಟ್ಟಡ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಪಾಕಸಿ ಪೋಲ್ಸ್ ಬದಲಿಸದಿದ್ದರೆ ತಲೆಯ ಮೇಲೆ ಬೀಳಲಿದೆ. </p><p><strong>-ಶಶಾಂಕ್ ಹೆಗ್ಡೆ ಆಗುಂಬೆ ಗ್ರಾ.ಪಂ. ಸದಸ್ಯ</strong></p>.<p>ಪಂಚಾಯಿತಿ ಕಚೇರಿಯ ಕಟ್ಟಡ ದುರಸ್ತಿಗಾಗಿ 8 ತಿಂಗಳ ಹಿಂದೆ ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಾಗಿದೆ. ಕನ್ನಂಗಿ ದೇವಂಗಿ ಪಂಚಾಯಿತಿಗೆ ತಲಾ ₹ 20 ಲಕ್ಷ ಮಂಜೂರಾಗಿದೆ. ಆಗುಂಬೆ ಮಂಡಗದ್ದೆ ಹಾದಿಗಲ್ಲು ಕಾರ್ಯಾಲಯ ದುರಸ್ತಿಗೆ ಅನುದಾನ ಬಿಡುಗಡೆ ಆಗಬೇಕಿದೆ. </p><p><strong>-ಎನ್. ಶೈಲಾ ತಾಲ್ಲೂಕು ಪಂಚಾಯಿತಿ ಇ.ಒ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ಸಮೀಪದ ಮಂಡಗದ್ದೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡ ದುರವಸ್ಥೆಗೆ ತಲುಪಿದ್ದು, 5 ವರ್ಷಗಳಿಂದ ಮಳೆ ಸುರಿದಾಗ ಸೋರುತ್ತಿದೆ.</p>.<p>2010ರಲ್ಲಿ ನಿರ್ಮಿಸಿದ್ದ ಪಂಚಾಯಿತಿ ಕಚೇರಿಯ ಈ ಕಟ್ಟಡ ದಶಕದಿಂದ ಬಿರುಕುಬಿಟ್ಟ ಸ್ಥಿತಿಯಲ್ಲಿದೆ. ಮಂಡಗದ್ದೆ ಹೋಬಳಿ ತಾಲ್ಲೂಕಿನಲ್ಲೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಸಣ್ಣ ಮಳೆ ಬಂದರೂ ಕಟ್ಟಡ ವಿಪರೀತ ಸೋರತೊಡಗಿದೆ. ಕಚೇರಿ ಕೆಲಸಕ್ಕೆ ಬರುವ ಜನ ಸಾಮಾನ್ಯರು ಛತ್ರಿ ಬಿಡಿಸಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಶಾಸಕ ಆರಗ ಜ್ಞಾನೇಂದ್ರ ಕಚೇರಿಯೊಳಗೆ ಛತ್ರಿ ಬಿಡಿಸಿರುವುದು ಇದಕ್ಕೆ ತಾಜಾ ಉದಾರಣೆ.</p>.<p>ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳು ಇವೆ. ಸ್ವಂತ ಆದಾಯವಿಲ್ಲದ ಅತಿ ಹಿಂದುಳಿದ ಗ್ರಾಮೀಣ ಭಾಗದ ಪಂಚಾಯಿತಿಗಳು ಅಭಿವೃದ್ಧಿಯ ಕ್ರಿಯಾಯೋಜನೆ ತಯಾರಿಸಲು ಕೊಸರಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅನುದಾನ ಸಿಗದಿದ್ದರೆ ಕಚೇರಿ ನಡೆಸುವುದು ಕಷ್ಟ ಸಾಧ್ಯವಾಗಿದೆ. ಸಣ್ಣ ಕೆಲಸಕ್ಕೂ ಶಾಸಕರ ಅನುದಾನಕ್ಕೆ ಕಾಯಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ.</p>.<p>ಕುಡಿಯುವ ನೀರು ನಿರ್ವಹಣೆ, ನರೇಗಾ, ಗ್ರಂಥಾಲಯ, ಪರಿಶಿಷ್ಟ ಜಾತಿ– ಪಂಗಡ ಅಭಿವೃದ್ಧಿ, ನೈರ್ಮಲ್ಯ, 15ನೇ ಹಣಕಾಸು ಯೋಜನೆಯಡಿ ಅನುದಾನ ಲಭ್ಯವಿದೆ. ಆದರೆ, ಎಲ್ಲಾ ಯೋಜನೆಗಳಡಿ ಸಿಗುವ ಅನುದಾನದ ಪ್ರಮಾಣ ಕಡಿಮೆಯಾಗಿದ್ದು ನಿರ್ದಿಷ್ಟ ಕೆಲಸಕ್ಕೆ ಮೀಸಲಿಟ್ಟು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಾಗಿದೆ. ಮರಳು, ಬಾಡಿಗೆ ಕಟ್ಟಡದ ಆದಾಯ ಇಲ್ಲದೇ ವರ್ಗ– 1ರ ಅನುದಾನ ಕೂಡ ಕೆಲವು ಪಂಚಾಯಿತಿಗಳಲ್ಲಿ ಶೂನ್ಯ ಎಂಬಂತಾಗಿದೆ. ಕಟ್ಟಡ ದುರಸ್ತಿಗೂ ಹಣ ಇಲ್ಲದ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ತೆವಳುತ್ತಿದೆ.</p>.<p><strong>ಕಟ್ಟಡಕ್ಕೆ ನರೇಗಾ ಅನುದಾನ:</strong></p>.<p>ಮುಳುಬಾಗಿಲು, ಮೇಗರವಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಟ್ಟಡ ಸಮಸ್ಯೆ ನಿವಾರಣೆಗಾಗಿ ಸರ್ಕಾರ ನೇರವಾಗಿ ಅನುದಾನ ಬಿಡುಗಡೆ ಮಾಡುವ ಮುಕ್ತ ಅವಕಾಶ ನೀಡಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ನರೇಗಾ ಯೋಜನೆ ಅನುದಾನ ಬಳಸಿಕೊಳ್ಳಬಹುದು. 2024 ಜೂನ್ 23ರಂದು ನಡೆದ ಸಭೆಯಲ್ಲಿ ಅನುದಾನ ಬಳಕೆ ಕುರಿತು ರಾಜ್ಯ ಕಾರ್ಯಕಾರಿ ಸಮಿತಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಜಿಲ್ಲಾ ಪಂಚಾಯಿತಿ ಸಿಇಒ ಸರ್ಕಾರಕ್ಕೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.</p>.<p>ಶಾಸಕರಿಗೆ ಗ್ರಾಮೀಣ ಭಾಗದ ಸಣ್ಣಪುಟ್ಟ ಸಮಸ್ಯೆ ಕಾಣಿಸುವುದಿಲ್ಲ. ಬೃಹತ್ ಯೋಜನೆಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಆರಗ ಜ್ಞಾನೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಪಂಚಾಯಿತಿ ಕಟ್ಟಡ ದುರಸ್ತಿಗೆ ಬೇಡಿಕೆ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ. </p><p>-<strong>ಪುಟ್ಟೋಡ್ಲು ರಾಘವೇಂದ್ರ ಮಂಡಗದ್ದೆ ಗ್ರಾ.ಪಂ. ಸದಸ್ಯ</strong></p>.<p>ಅನುದಾನ ಇಲ್ಲದೇ ಆಡಳಿತ ನಡೆಸುವುದು ಕಷ್ಟವಾಗಿದೆ. ಪಂಚಾಯಿತಿಯ ಹೆಂಚಿನ ಕಟ್ಟಡ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಪಾಕಸಿ ಪೋಲ್ಸ್ ಬದಲಿಸದಿದ್ದರೆ ತಲೆಯ ಮೇಲೆ ಬೀಳಲಿದೆ. </p><p><strong>-ಶಶಾಂಕ್ ಹೆಗ್ಡೆ ಆಗುಂಬೆ ಗ್ರಾ.ಪಂ. ಸದಸ್ಯ</strong></p>.<p>ಪಂಚಾಯಿತಿ ಕಚೇರಿಯ ಕಟ್ಟಡ ದುರಸ್ತಿಗಾಗಿ 8 ತಿಂಗಳ ಹಿಂದೆ ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಾಗಿದೆ. ಕನ್ನಂಗಿ ದೇವಂಗಿ ಪಂಚಾಯಿತಿಗೆ ತಲಾ ₹ 20 ಲಕ್ಷ ಮಂಜೂರಾಗಿದೆ. ಆಗುಂಬೆ ಮಂಡಗದ್ದೆ ಹಾದಿಗಲ್ಲು ಕಾರ್ಯಾಲಯ ದುರಸ್ತಿಗೆ ಅನುದಾನ ಬಿಡುಗಡೆ ಆಗಬೇಕಿದೆ. </p><p><strong>-ಎನ್. ಶೈಲಾ ತಾಲ್ಲೂಕು ಪಂಚಾಯಿತಿ ಇ.ಒ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>