ಎಪಿಎಂಸಿಗೆ ತಕ್ಷಣವೇ ಚುನಾವಣೆ ನಡೆಸಬೇಕಿದೆ. ಅಗತ್ಯವಿರುವ ಮೂಲಸೌಕರ್ಯ ಕೈಗೊಂಡು ರೈತರಿಗೆ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಬರದಿಂದ ತತ್ತರಿಸುತ್ತಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ
- ಲಕ್ಷ್ಮಿರಂಗಯ್ಯ ಮಾಜಿ ಅಧ್ಯಕ್ಷ ಎಪಿಎಂಸಿ
ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಮೂಲಸೌಕರ್ಯದ ಜೊತೆಗೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರಲ್ಲಿ ಧೈರ್ಯವನ್ನು ತುಂಬಬೇಕಿದೆ
ರೂಪ ಕುಮಾರಸ್ವಾಮಿ ರೈತ ಮಹಿಳೆ
ಕೊಬ್ಬರಿ ಖರೀದಿಸಿ ರೈತರ ಎಲ್ಲಾ ಉತ್ಪನ್ನಗಳನ್ನು ಎಪಿಎಂಸಿ ಮೂಲಕ ಖರೀದಿ ಮತ್ತು ಮಾರಾಟಕ್ಕೆ ಅವಕಾಶವಿದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಉತ್ತಮ ಧಾರಣೆ ಸಿಗುವುದು ಎಂಬ ಆಸೆಯಲ್ಲಿ ರೈತರು ಈಗಾಗಲೇ ಕೊಬ್ಬರಿಯನ್ನು ಒಡೆದು ಸಿದ್ಧಮಾಡಿಕೊಂಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಜಿಲ್ಲಾಡಳಿತ ಎಪಿಎಂಸಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಬ್ಬರಿ ಖರೀದಿಗೆ ಮುಂದಾಗ ಬೇಕಿದೆ
ಲೋಕೇಶ್ ಕಾರ್ಯದರ್ಶಿ ತಾಲ್ಲೂಕು ರೈತ ಸಂಘ
ಎಪಿಎಂಸಿಯಲ್ಲಿ ಇರುವ ಸಮಸ್ಯೆಗಳನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ.ಶೀಘ್ರವಾಗಿ ಕ್ರಮ ಕೈಗೊಂಡು ಹೊಸ ಶೌಚಾಲಯ ನಿರ್ಮಾಣ ಗಿಡ-ಗೆಂಟೆ ತೆರವು ಹಾಗೂ ಆವರಣದಲ್ಲಿನ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ರೈತಪರವಾಗಿದ್ದು ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಇಲಾಖೆ ಸದಾ ಸಿದ್ಧವಾಗಿದೆ