ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಂದೂರು: ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Published : 25 ಸೆಪ್ಟೆಂಬರ್ 2024, 14:14 IST
Last Updated : 25 ಸೆಪ್ಟೆಂಬರ್ 2024, 14:14 IST
ಫಾಲೋ ಮಾಡಿ
Comments

ಬೈಂದೂರು: ಕೆರೆಗೆ ಈಜಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ.

ಯಡ್ತರೆ ಗ್ರಾಮ ಯೋಜನಾ ನಗರದ ಕೃಷ್ಣ ದೇವಾಡಿಗ ಅವರ ಪುತ್ರ ನಾಗೇಂದ್ರ (13), ಬೈಂದೂರು ರೈಲ್ವೆ ನಿಲ್ದಾಣ ಬಳಿಯ ಶಾನು ಶಾಲಿಯಾನ್‌ ಅವರ ಪುತ್ರ ಶಾನು ಮೊಹಮದ್ ಶಫಾನ್ (13) ಮೃತಪಟ್ಟವರು.

ಇಬ್ಬರೂ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದು, ಆತ್ಮೀಯ ಮಿತ್ರರಾಗಿದ್ದರು. ಮಂಗಳವಾರ ಪರೀಕ್ಷೆ ಮುಗಿಸಿ ಮನೆಗೆ ತೆರಳಿ ಅಲ್ಲಿಂದ ಮಧ್ಯಾಹ್ನ 4 ಗಂಟೆಗೆ ಕೆರೆಕಟ್ಟೆ ಹೊಸಕೆರೆಗೆ ಈಜಲು ತೆರಳಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದೆ ಇದ್ದುದರಿಂದ ಪೋಷಕರು ಬೈಂದೂರು ಠಾಣೆಗೆ ದೂರು ನೀಡಿದ್ದರು. ಹೊಸಕೆರೆ ಬಳಿ ಸೈಕಲ್, ಬಟ್ಟೆ, ಎರಡು ಜೊತೆ ಚಪ್ಪಲಿ ಇರುವ ಬಗ್ಗೆ ದೊರೆತ ಮಾಹಿತಿಯಂತೆ ಕೆರೆಯಲ್ಲಿ ಹುಡುಕಾಡಿದಾಗ ತಡರಾತ್ರಿ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ.

ಹೇಳಿಕೆ: ಪರೀಕ್ಷೆ ಮುಗಿದ ಬಳಿಕ 4:15ರ ನಂತರವೇ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು, ಈ ರೀತಿಯ ಘಟನೆಗಳು ಮರುಕಳಿಸದಂತೆ ಪಾಲಕರ ಸಭೆ ಕರೆದು ಮಾಹಿತಿ ನೀಡುವಂತೆ ಎಲ್ಲಾ ಶಾಲೆಯ ಮುಖ್ಯಸ್ಥರಿಗೆ ಸೂಚಿಸಿದ್ದೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ತಿಳಿಸಿದರು.

ನಾಗೇಂದ್ರ
ನಾಗೇಂದ್ರ
ಕೆರೆಕಟ್ಟೆಯ ಹೊಸಕೆರೆ
ಕೆರೆಕಟ್ಟೆಯ ಹೊಸಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT