ಉಡುಪಿ ಮಲ್ಲಿಗೆ ಜಿಐ ಮಾನ್ಯತೆ ಪಡೆದಿದೆ. ಮಲ್ಲಿಗೆ ಗಿಡದಲ್ಲಿ ಬಿಸಿಲಿನ ವಾತಾವರಣದಲ್ಲಿ ಹೆಚ್ಚು ಮೊಗ್ಗುಗಳು ಚಿಗುರೊಡೆಯುತ್ತಿವೆ. ಹಾಗಾಗಿ ಹೂವಿನ ಮಾರುಕಟ್ಟೆಗಳಿಗೆ ನೂರಾರು ಅಟ್ಟಿ ಮಲ್ಲಿಗೆ ಲಗ್ಗೆ ಇಟ್ಟಿದೆ. ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವ ಮಲ್ಲಿಗೆಗೆ ಗ್ರಾಹಕರು ಮುಗಿಬೀಳುತ್ತಿದ್ದು ಲಾಭ ಇಲ್ಲದ್ದರಿಂದ ಬೆಳೆಗಾರರು ಬೇಸರಗೊಂಡಿದ್ದಾರೆ. ಕೆಲವೊಮ್ಮೆ ಇಳುವರಿ ಹೆಚ್ಚಾದರೂ ನಷ್ಟ, ಕಡಿಮೆ ಆದರೂ ನಷ್ಟ ಎನ್ನುತ್ತಾರೆ ಕೃಷಿಕ ಹರೀಶ್ ಬಂಟಕಲ್.