ವೇದಮೂರ್ತಿ ಸೂರಾಲು ದೇವೀಪ್ರಸಾದ ತಂತ್ರಿ ಮಾತನಾಡಿ, ‘ಶಂಕರಾಚಾರ್ಯರು ಎಳವೆಯಲ್ಲೇ ಮೈಗೂಡಿಸಿಗೊಂಡ ಸನಾತನ ಹಿಂದೂ ಧರ್ಮವನ್ನು ಪುನರ್ ಸಂಘಟಿಸುವಲ್ಲಿ ನಡೆಸಿದ ಪ್ರಯತ್ನಗಳು, ಭರತಖಂಡದಾದ್ಯಂತ ಸನಾತನ ವೈದಿಕ ಸಂಸ್ಕೃತಿ ಭದ್ರಗೊಳಿಸುವಲ್ಲಿ ಶಂಕರರು ಕಾರ್ಯತತ್ಪರರಾದ ರೀತಿ ವಿವರಿಸುತ್ತಾ, ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿ ಆಚರಣೆಗಳ ಬಗ್ಗೆ ಕೀಳರಿಮೆ ಸಲ್ಲದು’ ಎಂದು ಹೇಳಿದರು.