ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಬೀದಿ ನಾಯಿ ಹಾವಳಿ: ಬೇಕಿದೆ ಪರಿಹಾರೋಪಾಯ

ನವೀನ್‌ ಕುಮಾರ್‌ ಜಿ.
Published : 15 ಜುಲೈ 2024, 7:09 IST
Last Updated : 15 ಜುಲೈ 2024, 7:09 IST
ಫಾಲೋ ಮಾಡಿ
Comments
ರೇಬೀಸ್ ಚುಚ್ಚುಮದ್ದು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ದಾಸ್ತಾನಿದೆ. ನಾಯಿ ಕಡಿತಕ್ಕೊಳಗಾದವರಿಗೆ ಚುಚ್ಚುಮದ್ದು ನೀಡಲು ಕ್ರಮ ವಹಿಸಲಾಗಿದೆ
ಡಾ.ಐ.ಪಿ.ಗಡಾದ್‌ ಜಿಲ್ಲಾ ವೈದ್ಯಾಧಿಕಾರಿ
ಮಲ್ಪೆ ಪ್ರದೇಶದಲ್ಲಿ ಬೆಳಿಗ್ಗೆ ಬೈಕ್‌ನಲ್ಲಿ ತೆರಳುವಾಗ ಕೆಲವು ನಾಯಿಗಳು ಕಚ್ಚಲು ಬರುತ್ತವೆ. ನಗರದ ಕೆಲವು ಪ್ರದೇಶಗಳಲ್ಲಿ ಅವುಗಳ ಸಂಖ್ಯೆ ಮಿತಿಮೀರಿದೆ
ಶ್ರೀನಿವಾಸ ಖಾಸಗಿ ಸಂಸ್ಥೆ ಉದ್ಯೋಗಿ
‘ಟೆಂಡರ್‌ ಕರೆಯಲಾಗಿದೆ’
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಸ್ಥೆಗಳಿಂದ ಟೆಂಡರ್‌ ಕರೆಯಲಾಗಿದೆ. ಮಣಿಪಾಲದಲ್ಲಿ ಖಾಸಗಿಯವರು ಸ್ವಂತ ಖರ್ಚಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಪ್ರಾಣಿಗಳಿಗೆ ಆಶ್ರಯ ಕೇಂದ್ರ ಸ್ಥಾಪಿಸಲು ಜಾಗದ ಕೊರತೆ ಇದೆ. ದಾನಿಗಳು ಜಾಗ ನೀಡಿದರೆ ಕೇಂದ್ರ ಸ್ಥಾಪಿಸಿ ಬೀದಿನಾಯಿಗಳಿಗೆ ಅಲ್ಲಿ ಆಶ್ರಯ ನೀಡಬಹುದು. ಅವುಗಳಿಗೆ ಆಹಾರವನ್ನೂ ನೀಡಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದರು.
‘ಜಾನುವಾರುಗಳಿಗೆ ನೀಡುವ ಚುಚ್ಚುಮದ್ದು ಲಭ್ಯ’
2024–25ನೇ ಸಾಲಿನಲ್ಲಿ ಬೀದಿ ನಾಯಿ ಸೇರಿದಂತೆ ಜಾನುವಾರುಗಳಿಗೆ ನೀಡಲು ಅಂದಾಜು 1 ಲಕ್ಷ ಡೋಸ್‌ನಷ್ಟು ರೇಬಿಸ್ ನಿರೋಧಕ ಚುಚ್ಚುಮದ್ದುಗಳು ಬಂದಿವೆ. ಅವುಗಳನ್ನು ಅಗತ್ಯಕ್ಕನುಸಾರವಾಗಿ ನೀಡಲಾಗುವುದು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ 5 ವರ್ಷಗಳವರೆಗೆ ನಡೆದರೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸಾಧ್ಯ. ಈ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅಂಗೀಕಾರ ಪಡೆದಿರುವ ಶಸ್ತ್ರಚಿಕಿತ್ಸಕರು ಇರಬೇಕು. ಅವರ ಲಭ್ಯತೆ ಕಡಿಮೆ ಇರುವುದರಿಂದ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಯಿಗಳನ್ನು ಎಲ್ಲಿಂದ ಹಿಡಿದು ಕೊಂಡೊಯ್ಯುತ್ತಾರೊ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅದೇ ಜಾಗದಲ್ಲಿ ಬಿಟ್ಟುಬರಬೇಕೆಂಬ ನಿಯಮವಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರೆಡ್ಡಪ್ಪ ಎಂ.ಸಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT