<p>ಕಾರವಾರ: ತಾಲ್ಲೂಕಿನ ಮಾಜಾಳಿಯ ಗ್ರಾಮ ದೇವರಾದ ರಾಮನಾಥ ದೇವರ ವಾರ್ಷಿಕ ಜಾತ್ರೆ ಮಹೋತ್ಸವ ಗುರುವಾರ ನಡೆಯಿತು. ಬಿಸಿ ಗಾಳಿಯಿಂದ ಮೇಲಕ್ಕೆ ನೆಗೆಯುವ ‘ಬಲೂನ್’(ವಾಫರ್) ಹಾರಿಬಿಡುವುದು ಜಾತ್ರೆಯ ವಿಶೇಷ.</p>.<p>ಆಶ್ವಿಜ ಮಾಸದ ಚತುರ್ಥಿ ದಿನದಂದು ಜಾತ್ರೆ ಆಚರಿಸಲಾಗುತ್ತದೆ. ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳುತ್ತಿದ್ದಂತೆ ಬಲೂನ್ ಹಾರಿಬಿಡಲಾಗುತ್ತದೆ. ಸಂಜೆ ಜಾತ್ರೆ ಸಮಾರೋಪಗೊಳ್ಳುತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಸಲಾಗುತ್ತದೆ.</p>.<p>ಗುರುವಾರ ಜಾತ್ರೆ ಆರಂಭಗೊಳ್ಳುತ್ತಿದ್ದಂತೆ ನೂರಾರು ಭಕ್ತರು ಬಲೂನ್ ಹಾರಿಬಿಟ್ಟರು. ‘ಹರ ಹರ ಮಹದೇವ’ ಎಂಬ ಘೋಷಣೆ ಮೊಳಗಿಸಿದರು. ಸಂಜೆ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಬಿಡಲಾಯಿತು. ಎರಡೂ ಬಲೂನ್ಗಳು ಗಾಳಿಯ ರಭಸಕ್ಕೆ ವೇಗವಾಗಿ ಸಮುದ್ರದ ಕಡೆಗೆ ಹಾರಿದವು.</p>.<p>‘ಗ್ರಾಮದಲ್ಲಿ ಉಂಟಾಗುವ ತೊಂದರೆಗಳ ನಿವಾರಣೆಗೆ ಬಲೂನ್ ಹಾರಿಸಲಾಗುತ್ತದೆ. ಕೆಲವು ತಾಸು ಗಾಳಿಯಲ್ಲಿ ಹಾರಾಡುವ ಬಲೂನ್ ನಂತರ ಸಮುದ್ರದಲ್ಲಿ ಬೀಳುತ್ತದೆ. ಬಲೂನ್ ಹಾರಿಬಿಟ್ಟ ಬಳಿಕ ಗ್ರಾಮಕ್ಕೆ ಎದುರಾದ ಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಮಾಜಾಳಿ ಗ್ರಾಮಸ್ಥರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ತಾಲ್ಲೂಕಿನ ಮಾಜಾಳಿಯ ಗ್ರಾಮ ದೇವರಾದ ರಾಮನಾಥ ದೇವರ ವಾರ್ಷಿಕ ಜಾತ್ರೆ ಮಹೋತ್ಸವ ಗುರುವಾರ ನಡೆಯಿತು. ಬಿಸಿ ಗಾಳಿಯಿಂದ ಮೇಲಕ್ಕೆ ನೆಗೆಯುವ ‘ಬಲೂನ್’(ವಾಫರ್) ಹಾರಿಬಿಡುವುದು ಜಾತ್ರೆಯ ವಿಶೇಷ.</p>.<p>ಆಶ್ವಿಜ ಮಾಸದ ಚತುರ್ಥಿ ದಿನದಂದು ಜಾತ್ರೆ ಆಚರಿಸಲಾಗುತ್ತದೆ. ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳುತ್ತಿದ್ದಂತೆ ಬಲೂನ್ ಹಾರಿಬಿಡಲಾಗುತ್ತದೆ. ಸಂಜೆ ಜಾತ್ರೆ ಸಮಾರೋಪಗೊಳ್ಳುತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಸಲಾಗುತ್ತದೆ.</p>.<p>ಗುರುವಾರ ಜಾತ್ರೆ ಆರಂಭಗೊಳ್ಳುತ್ತಿದ್ದಂತೆ ನೂರಾರು ಭಕ್ತರು ಬಲೂನ್ ಹಾರಿಬಿಟ್ಟರು. ‘ಹರ ಹರ ಮಹದೇವ’ ಎಂಬ ಘೋಷಣೆ ಮೊಳಗಿಸಿದರು. ಸಂಜೆ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಬಿಡಲಾಯಿತು. ಎರಡೂ ಬಲೂನ್ಗಳು ಗಾಳಿಯ ರಭಸಕ್ಕೆ ವೇಗವಾಗಿ ಸಮುದ್ರದ ಕಡೆಗೆ ಹಾರಿದವು.</p>.<p>‘ಗ್ರಾಮದಲ್ಲಿ ಉಂಟಾಗುವ ತೊಂದರೆಗಳ ನಿವಾರಣೆಗೆ ಬಲೂನ್ ಹಾರಿಸಲಾಗುತ್ತದೆ. ಕೆಲವು ತಾಸು ಗಾಳಿಯಲ್ಲಿ ಹಾರಾಡುವ ಬಲೂನ್ ನಂತರ ಸಮುದ್ರದಲ್ಲಿ ಬೀಳುತ್ತದೆ. ಬಲೂನ್ ಹಾರಿಬಿಟ್ಟ ಬಳಿಕ ಗ್ರಾಮಕ್ಕೆ ಎದುರಾದ ಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಮಾಜಾಳಿ ಗ್ರಾಮಸ್ಥರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>