ಮುಂಡಗೋಡ ಪಟ್ಟಣದ ಹೊಸ ಓಣಿ ಖಾಲಿ ನಿವೇಶನದ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿರುವುದು
ಹೊನ್ನಾವರ ಪಟ್ಟಣದ ಪ್ರಭಾತನಗರದ ಖಾಲಿ ನಿವೇಶನವೊಂದರಲ್ಲಿ ಗಿಡಗಂಟಿಗಳು ಬೆಳೆದಿವೆ
ಶಿರಸಿ ನಗರದ ದುಂಡಶಿನಗರದ ಬಳಿಯ ಖಾಲಿ ನಿವೇಶನ ತ್ಯಾಜ್ಯ ಸುರಿಯಲು ಬಳಕೆಯಾಗುತ್ತಿದೆ
ಶಿರಸಿಯ ದುಂಡಶಿ ನಗರದಲ್ಲಿರುವುದು ಖಾಲಿ ನಿವೇಶನವೋ ಕಸ ವಿಲೇವಾರಿ ಘಟಕವೋ ಎಂಬ ಸಂಶಯ ಕಾಡುತ್ತಿದೆ. ಇಲ್ಲಿ ಮೂಗುಮುಚ್ಚಿ ಓಡಾಟ ನಡೆಸುವ ಸ್ಥಿತಿ ಇದೆ.
ಚಂದ್ರಶೇಖರ ಹೆಗಡೆ ಶಿರಸಿ ನಗರದ ನಿವಾಸಿಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದರೆ ವಿಷಕಾರಿ ಸರಿಸೃಪಗಳ ಸಂತತಿ ಹೆಚ್ಚಲಿದೆ. ಅಲ್ಲದೆ ಕಸ ಎಸೆಯುವ ತಾಣವಾಗುವುದರಿಂದ ರೋಗರುಜಿನ ಹರಡಲು ಕಾರಣವಾಗುತ್ತವೆ.
ವಿನಾಯಕ ಕೊರ್ವೇಕರ ಹಳಿಯಾಳ ಪಟ್ಟಣ ನಿವಾಸಿಕಾರವಾರ ನಗರದ ಹೃದಯಭಾಗದಲ್ಲೇ ಖಾಲಿ ನಿವೇಶನಗಳಲ್ಲಿ ಆಳೆತ್ತರದವರೆಗೆ ಗಿಡಗಂಟಿ ಬೆಳೆದುಕೊಂಡಿದ್ದು ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ನಗರದ ಸೌಂದರ್ಯಕ್ಕೆ ಕುಂದು ಬರುತ್ತಿದೆ.
ಸಂತೋಷ ನಾಯ್ಕ ಕಾಜುಬಾಗ ನಿವಾಸಿ ಕಾರವಾರನಮೂನೆ–3 ಪರಿಹಾರಕ್ಕೆ ಕಾದಿರಬಹುದು!
ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಸಾಕಷ್ಟಿದೆ. ಅವುಗಳು ಹಂದಿಗಳ ವಾಸಸ್ಥಳವಾಗಿ ಕಸ ಸಂಗ್ರಹಣಾ ತೊಟ್ಟಿಯಾಗಿ ಮಾರ್ಪಟ್ಟಿದೆ. ನಿರ್ವಹಣೆ ಇಲ್ಲದೇ ಇರುವ ನಿವೇಶನಗಳು ಅಕ್ಕಪಕ್ಕದ ನಿವಾಸಿಗಳಿಗೆ ಕಸ ಚೆಲ್ಲುವ ಸ್ಥಳಗಳಾಗಿವೆ. ಹಂದಿಗಳು ಇಂತಹ ಸ್ಥಳಗಳನ್ನೇ ಹುಡುಕಿಕೊಂಡು ಮತ್ತಷ್ಟು ವಾತಾವರಣ ಕಲುಷಿತಗೊಳಿಸುತ್ತಿವೆ. ‘ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವುದು ಸಾಮಾನ್ಯ ಎಂಬಂತಾಗಿದೆ. ಹಂದಿಗಳು ಇಲ್ಲಿಯೇ ಬಿಡಾರ ಹೂಡುತ್ತಿವೆ. ಸುತ್ತಲೂ ಮನೆಗಳಿರುತ್ತವೆ. ಅದಕ್ಕೆ ತಾಗಿಯೇ ಇರುವ ಖಾಲಿ ನಿವೇಶನಗಳು ಕಸ ಚೆಲ್ಲಲು ಬಳಕೆಯಾಗುತ್ತಿವೆ. ನಿವೇಶನಗಳ ಮಾಲೀಕರು ಈ ಕಡೆ ತಲೆ ಹಾಕುವುದಿಲ್ಲ. ಮನೆ ಮನೆಗೆ ಕಸ ಸಂಗ್ರಹಿಸಲು ವಾಹನ ಹಾಗೂ ಪೌರಸಿಬ್ಬಂದಿ ನಿತ್ಯವೂ ಬಂದರೂ ಖಾಲಿ ನಿವೇಶನ ಚರಂಡಿಗಳಲ್ಲಿಯೇ ತ್ಯಾಜ್ಯ ಚೆಲ್ಲುವರ ಸಂಖ್ಯೆ ಹೆಚ್ಚಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ದೂರಿದರು. ‘ನಮೂನೆ-3ರ ಸಮಸ್ಯೆ ಇನ್ನಷ್ಟು ವರ್ಷ ಬಿಟ್ಟು ಮಾರಿದರೆ ಲಾಭ ಆಗಬಹುದು ಎಂಬ ಆಸೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಲಿ ನಿವೇಶನಗಳ ಸಂಖ್ಯೆ ಹೆಚ್ಚಿದೆ. ವರ್ಷಕ್ಕೊಮ್ಮೆಯಾದರೂ ನಿವೇಶನಗಳ ಮಾಲೀಕರು ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ್ ಹೇಳಿದರು.
ಪ್ರತಿ ಗುಂಟೆಗೆ ₹ 1000 ದಂಡ
‘ಎಲ್ಲೆಂದರಲ್ಲಿ ಬಹಳಷ್ಟು ಕಸಕಡ್ಡಿ ಹಾಕುತ್ತಾರೆ. ಖಾಲಿ ನಿವೇಶನಗಳಲ್ಲಿ ನಿರುಪಯುಕ್ತ ಗಿಡಗಂಟಿ ಬೆಳೆಯುವುದು ಹೆಚ್ಚುತ್ತಿದೆ. ಇವುಗಳ ನಿಯಂತ್ರಣಕ್ಕೆ ನಿರ್ವಹಣೆ ಇಲ್ಲದ ನಿವೇಶನಗಳಿಗೆ ಪ್ರತಿ ಗುಂಟೆಗೆ ತಲಾ ₹ 1000 ದಂತೆ ದಂಡವನ್ನು ವಿಧಿಸಲಾಗುತ್ತಿದೆ. ಈಗಾಗಲೆ ₹ 15 ಸಾವಿರ ದಂಡ ಸಂಗ್ರಹಿಸಿದ್ದೇವೆ. ಹಲವಾರು ಖಾಲಿ ನಿವೇಶನ ಮಾಲೀಕರು ಮುಂಬೈ ಗೋವಾ ಬೆಳಗಾವಿ ಕಾರವಾರ ಹುಬ್ಬಳ್ಳಿ ಮತ್ತಿತರ ಭಾಗಗಳಲ್ಲಿ ವಾಸಿಸುವುದರಿಂದ ಸಕಾಲದಲ್ಲಿ ನಿವೇಶನದ ಮಾಲೀಕರಿಂದ ದಂಡ ವಸೂಲಿ ಮಾಡುವುದಾಗಲಿ ನೋಟಿಸ್ ಜಾರಿ ಮಾಡುವುದಾಗಲಿ ಕಷ್ಟವಾಗುತ್ತಿದೆ’ ಎಂದು ಹಳಿಯಾಳ ಪುರಸಭೆಯ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್. ಮಾಹಿತಿ ನೀಡಿದರು.