ಗೋಕರ್ಣ ಸಮೀಪದ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ
ತಾರಿಮನೆ ಬ್ರಿಜ್ ಕುಸಿತ; ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ಗ್ರಾಮಸ್ಥರು
ಯಲ್ಲಾಪುರ: ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಳ್ಳಿ ಗ್ರಾಮದ ಬಂಕೊಳ್ಳಿಯಿಂದ ತಾರಿಮನೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬ್ರಿಜ್ ಇತ್ತೀಚೆಗೆ ಚೀರೆಕಲ್ಲು ತುಂಬಿದ ಗಾಡಿ ಸಂಚರಿಸುವಾಗ ಕುಸಿದಿದೆ. ಚೀರೆಕಲ್ಲು ತುಂಬಿದ ಗಾಡಿ ಪಲ್ಟಿಯಾದ ಪರಿಣಾಮ ಚೀರೆಕಲ್ಲುಗಳು ಕೆಳಗಿನ ಹಳ್ಳದಲ್ಲಿ ಬಿದ್ದವು. ನಂತರ ಸುತ್ತ ಮುತ್ತಲ ಭಾಗದ ಗ್ರಾಮಸ್ಥರು ತಾವೇ ಮಣ್ಣನ್ನು ಹಾಕಿ ತಾತ್ಕಾಲಿಕವಾಗಿ ಲಘು ವಾಹನ ಸಂಚಾರಕ್ಕೆ ಅನುವು ಕಲ್ಪಿಸಿದ್ದಾರೆ. ‘ಈ ಬ್ರಿಜ್ ಕುಸಿದಿರುವ ಕಾರಣ ವಾಹನ ಸಂಚಾರ ಕಷ್ಟವಾಗಿದ್ದು ಇಲ್ಲಿಂದ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಕಾರಣ ಸರ್ಕಾರ ಇಲ್ಲಿ ಉತ್ತಮ ಗುಣಮಟ್ಟದ ಬ್ರಿಜ್ ನಿರ್ಮಿಸಬೇಕು’ ಎಂದು ಮಾವಿನಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಗಳಿ ಆಗ್ರಹಿಸಿದ್ದಾರೆ.