‘ತಾಜಾ ಮಸಾಲೆ ಉದ್ದೇಶಕ್ಕೆ ಶುಂಠಿಯನ್ನು ಆರನೇ ತಿಂಗಳಿನಿಂದ ಕೊಯ್ಲು ಮಾಡಲಾಗುತ್ತದೆ. ಸಂಸ್ಕರಣೆಗೆ ಬಳಸಲು ಎಂಟು ತಿಂಗಳ ನಂತರ ಕೊಯ್ಲು ಮಾಡಲಾಗುತ್ತದೆ. ಆದರೆ, ಈ ಬಾರಿ ಕೊಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ, ಎಳೆಯ ಗಡ್ಡೆಯನ್ನೇ ತೆಗೆದು ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ’ ಎಂದು ದಾಸನಕೊಪ್ಪದ ಬೆಳೆಗಾರ ಶೇಖರಪ್ಪ ತಿಳಿಸಿದರು.