ಯಲ್ಲಾಪುರ: ಗಂಗಾವಳಿ ನದಿಗೆ ಅಡ್ಡಲಾಗಿ ಪಣಸಗುಳಿಯಲ್ಲಿ ಕಾಂಕ್ರೀಟ್ ಪೈಪ್ಗಳನ್ನು ಬಳಸಿ ನಿರ್ಮಿಸಲಾದ ಸೇತುವೆ ಬುಧವಾರ ನಸುಕಿನ ಜಾವ ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಸೇತುವೆ ನೀರಿನಿಂದ ಆವರಿಸಿರುವ ಕಾರಣ ಅಂಕೋಲಾ ತಾಲ್ಲೂಕಿನ ಶೇವ್ಕಾರ, ಕೈಗಡಿ, ಹೆಗ್ಗಾರ ಭಾಗದ ಜನರಿಗೆ ಸಂಪರ್ಕ ಕಷ್ಟಸಾಧ್ಯವಾಗಿದೆ.