<p><strong>ಭಟ್ಕಳ</strong>: ‘ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಸಿಬ್ಬಂದಿ ಆಹಾರ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಸದಾ ಜಾಗೃತ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ’ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಹೇಳಿದರು.</p>.<p>ಅವರು ತಾಲ್ಲೂಕು ಪಂಚಾಯ್ತಿ, ಸಭಾಂಗಣದಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಅಡುಗೆ ಸಿಬ್ಬಂದಿಗೆ ಈಚೆಗೆ ನಡೆದ ತರಬೇತಿ ಕಾರ್ಯಗಾರ ಉದ್ಟಾಟಿಸಿ ಮಾತನಾಡಿದರು.</p>.<p>‘ಅಡುಗೆ ಸಿಬ್ಬಂದಿ ಕಾಲಕಾಲಕ್ಕೆ ಪುನರ್ ಮನನ ಅಗತ್ಯವಿದ್ದು, ಅವರು ಕೆಲಸದಲ್ಲಿ ನಿರ್ವಹಿಸಬೇಕಾದ ಪ್ರಮುಖ ಅಂಶಗಳ ಕುರಿತು ಆಗಾಗ ಇಂತಹ ಕಾರ್ಯಗಾರಗಳ ಮೂಲಕ ಅರಿತು ಕೊಳ್ಳಬೇಕಾದುದು ಅಗತ್ಯ ಅತೀ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕಾಯಕ ನಿರ್ವಹಿಸುವ ಇವರು ಇಲಾಖೆಯ ಆಸ್ತಿಗಳು’ ಎಂದು ಹೇಳಿದರು.</p>.<p>ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಉದಯ ಬೋರಕರ್, ತಾ.ಪಂ ವ್ಯವಸ್ಥಾಪಕ ಲತಾ ನಾಯ್ಕ, ಸಂಪನ್ಮೂಲ ವ್ಯಕ್ತಿ ಎಸ್.ಆರ್.ಮೇಸ್ತ ಮಾತನಾಡಿದರು. ಅಕ್ಷರ ದಾಸೋಹ ವಿಭಾಗದ ಕೃಷ್ಣ ಗೊಂಡ, ತರಬೇತಿ ಸಂಸ್ಥೆಯ ಸ್ವಾತಿ ನಾಯ್ಕ ರವರು ತರಬೇತಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ</strong>: ‘ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಸಿಬ್ಬಂದಿ ಆಹಾರ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಸದಾ ಜಾಗೃತ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ’ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಹೇಳಿದರು.</p>.<p>ಅವರು ತಾಲ್ಲೂಕು ಪಂಚಾಯ್ತಿ, ಸಭಾಂಗಣದಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಅಡುಗೆ ಸಿಬ್ಬಂದಿಗೆ ಈಚೆಗೆ ನಡೆದ ತರಬೇತಿ ಕಾರ್ಯಗಾರ ಉದ್ಟಾಟಿಸಿ ಮಾತನಾಡಿದರು.</p>.<p>‘ಅಡುಗೆ ಸಿಬ್ಬಂದಿ ಕಾಲಕಾಲಕ್ಕೆ ಪುನರ್ ಮನನ ಅಗತ್ಯವಿದ್ದು, ಅವರು ಕೆಲಸದಲ್ಲಿ ನಿರ್ವಹಿಸಬೇಕಾದ ಪ್ರಮುಖ ಅಂಶಗಳ ಕುರಿತು ಆಗಾಗ ಇಂತಹ ಕಾರ್ಯಗಾರಗಳ ಮೂಲಕ ಅರಿತು ಕೊಳ್ಳಬೇಕಾದುದು ಅಗತ್ಯ ಅತೀ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕಾಯಕ ನಿರ್ವಹಿಸುವ ಇವರು ಇಲಾಖೆಯ ಆಸ್ತಿಗಳು’ ಎಂದು ಹೇಳಿದರು.</p>.<p>ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಉದಯ ಬೋರಕರ್, ತಾ.ಪಂ ವ್ಯವಸ್ಥಾಪಕ ಲತಾ ನಾಯ್ಕ, ಸಂಪನ್ಮೂಲ ವ್ಯಕ್ತಿ ಎಸ್.ಆರ್.ಮೇಸ್ತ ಮಾತನಾಡಿದರು. ಅಕ್ಷರ ದಾಸೋಹ ವಿಭಾಗದ ಕೃಷ್ಣ ಗೊಂಡ, ತರಬೇತಿ ಸಂಸ್ಥೆಯ ಸ್ವಾತಿ ನಾಯ್ಕ ರವರು ತರಬೇತಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>