<p><strong>ಹೊಸಪೇಟೆ (ವಿಜಯನಗರ):</strong> ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 28 ಮಂದಿ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳು (ಗೈಡ್) ಎರಡು ವರ್ಷಗಳಿಂದ ಗೌರವಧನದ ನಿರೀಕ್ಷೆಯಲ್ಲಿದ್ದಾರೆ. ಪ್ರವಾಸಿ ಮಾರ್ಗದರ್ಶಿ ಆಗಲು ಮೂರು ತಿಂಗಳ ಕೋರ್ಸ್ ಪೂರೈಸಿ, ಪ್ರಮಾಣಪತ್ರ ಪಡೆದ ಈ 28 ಜನರಲ್ಲಿ 12 ಮಹಿಳೆಯರೂ ಇದ್ದಾರೆ.</p>.<p>ಹಂಪಿಯಲ್ಲಿ ಸದ್ಯ ಇರುವ 151 ಮಂದಿ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳು ಸರ್ಕಾರದಿಂದ ತಿಂಗಳಿಗೆ ₹ 5 ಸಾವಿರ ಗೌರವಧನ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರಿದ್ದಾರೆ.</p>.<p>ಎಲ್ಲ ಅರ್ಹತೆ ಗಳಿಸಿ, ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸವನ್ನೂ ಮಾಡುತ್ತಿರುವ ಇತರ 28 ಮಂದಿಗೂ ಗೌರವಧನ ಕೊಡಬೇಕು ಎಂದು ಹಲವು ಸಲ ಮನವಿ ಸಲ್ಲಿಸಿದರೂ ಹಣಕಾಸು ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ.</p>.<p>‘ಹಂಪಿಗೆ ಪ್ರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವುದು ಆರು ತಿಂಗಳು ಮಾತ್ರ. ಇನ್ನುಳಿದ ಆರು ತಿಂಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಬದುಕು ಕಷ್ಟದಿಂದ ಕೂಡಿರುತ್ತದೆ. ಸರ್ಕಾರ ನೀಡುವ ಗೌರವಧನದಿಂದ ಅವರ ಬದುಕಿನಲ್ಲಿ ಕೊಂಚ ನೆಮ್ಮದಿ ಮೂಡುತ್ತದೆ. ಗೌರವಧನವನ್ನು ₹5 ಸಾವಿರದಿಂದ ₹7.5 ಸಾವಿರಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದೇವೆ. ಸರ್ಕಾರ ಮೊದಲಿಗೆ ಅರ್ಹ 28 ಮಂದಿಗೆ ₹ 5 ಸಾವಿರ ಪ್ರೋತ್ಸಾಹಧನ ಪಾವತಿಸಬೇಕು’ ಎಂದು ಕಮಲಾಪುರದ ಮಾನವೀಯ ಸಹಾಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕೆಂಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಎರಡು ವರ್ಷಗಳ ಗೌರವಧನವನ್ನು ಒಮ್ಮೆಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಹಂಪಿ ವಿರೂಪಾಕ್ಷ ದೇವಾಲಯದಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಮಾಡುತ್ತೇವೆ. ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ’ ಎಂದು ಅವರು ತಿಳಿಸಿದರು.</p>.<div><blockquote>ಬಾಡಿಗೆ ಮನೆಯಲ್ಲಿ ನಾವೆಲ್ಲರೂ ವಾಸವಿದ್ದೇವೆ. ನನ್ನ ಪತಿಗೂ ಕೆಲಸ ಇಲ್ಲ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಗೌರವಧನ ಶೀಘ್ರ ನೀಡಲಿ.</blockquote><span class="attribution"> ಶ್ರೀದೇವಿ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಮಾರ್ಗದರ್ಶಿ ಕೆಲಸವಿಲ್ಲದ ಕಾರಣ ಮಕ್ಕಳ ಶಾಲಾ ಶಿಕ್ಷಣ ಶುಲ್ಕವನ್ನು ಕಟ್ಟಲು ಸಹ ತೊಂದರೆಯಾಗುತ್ತಿದೆ. ಸರ್ಕಾರ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು</blockquote><span class="attribution">- ಶ್ವೇತಾ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಸರ್ಕಾರ ಗ್ಯಾರಂಟಿಯ ಹೆಸರಲ್ಲಿ ನಮ್ಮಂತವರನ್ನು ಮರೆತೇಬಿಟ್ಟಿದೆ. 390 ಪುರುಷರಿಗೆ ಗೌರವಧನ ನೀಡುತ್ತಿದ್ದೀರಿ ನಮ್ಮನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ?</blockquote><span class="attribution"> ರೇಖಾ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಹಂಪಿಯಲ್ಲಿ ನುರಿತ ಅನುಭವಿ ಪ್ರವಾಸಿ ಮಾರ್ಗದರ್ಶಿಗಳ ಅಗತ್ಯ ಇದೆ. ಅವರಿಗೆ ಗೌರವಧನ ಪಾವತಿಸುವಂತೆ ಹಣಕಾಸು ಇಲಾಖೆಗೆ ಶಿಫಾರಸು ಮಾಡಲಾಗಿದೆ.</blockquote><span class="attribution">-ಪ್ರಭುಲಿಂಗ ತಳಕೇರಿ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 28 ಮಂದಿ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳು (ಗೈಡ್) ಎರಡು ವರ್ಷಗಳಿಂದ ಗೌರವಧನದ ನಿರೀಕ್ಷೆಯಲ್ಲಿದ್ದಾರೆ. ಪ್ರವಾಸಿ ಮಾರ್ಗದರ್ಶಿ ಆಗಲು ಮೂರು ತಿಂಗಳ ಕೋರ್ಸ್ ಪೂರೈಸಿ, ಪ್ರಮಾಣಪತ್ರ ಪಡೆದ ಈ 28 ಜನರಲ್ಲಿ 12 ಮಹಿಳೆಯರೂ ಇದ್ದಾರೆ.</p>.<p>ಹಂಪಿಯಲ್ಲಿ ಸದ್ಯ ಇರುವ 151 ಮಂದಿ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳು ಸರ್ಕಾರದಿಂದ ತಿಂಗಳಿಗೆ ₹ 5 ಸಾವಿರ ಗೌರವಧನ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರಿದ್ದಾರೆ.</p>.<p>ಎಲ್ಲ ಅರ್ಹತೆ ಗಳಿಸಿ, ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸವನ್ನೂ ಮಾಡುತ್ತಿರುವ ಇತರ 28 ಮಂದಿಗೂ ಗೌರವಧನ ಕೊಡಬೇಕು ಎಂದು ಹಲವು ಸಲ ಮನವಿ ಸಲ್ಲಿಸಿದರೂ ಹಣಕಾಸು ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ.</p>.<p>‘ಹಂಪಿಗೆ ಪ್ರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವುದು ಆರು ತಿಂಗಳು ಮಾತ್ರ. ಇನ್ನುಳಿದ ಆರು ತಿಂಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಬದುಕು ಕಷ್ಟದಿಂದ ಕೂಡಿರುತ್ತದೆ. ಸರ್ಕಾರ ನೀಡುವ ಗೌರವಧನದಿಂದ ಅವರ ಬದುಕಿನಲ್ಲಿ ಕೊಂಚ ನೆಮ್ಮದಿ ಮೂಡುತ್ತದೆ. ಗೌರವಧನವನ್ನು ₹5 ಸಾವಿರದಿಂದ ₹7.5 ಸಾವಿರಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದೇವೆ. ಸರ್ಕಾರ ಮೊದಲಿಗೆ ಅರ್ಹ 28 ಮಂದಿಗೆ ₹ 5 ಸಾವಿರ ಪ್ರೋತ್ಸಾಹಧನ ಪಾವತಿಸಬೇಕು’ ಎಂದು ಕಮಲಾಪುರದ ಮಾನವೀಯ ಸಹಾಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕೆಂಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಎರಡು ವರ್ಷಗಳ ಗೌರವಧನವನ್ನು ಒಮ್ಮೆಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಹಂಪಿ ವಿರೂಪಾಕ್ಷ ದೇವಾಲಯದಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಮಾಡುತ್ತೇವೆ. ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ’ ಎಂದು ಅವರು ತಿಳಿಸಿದರು.</p>.<div><blockquote>ಬಾಡಿಗೆ ಮನೆಯಲ್ಲಿ ನಾವೆಲ್ಲರೂ ವಾಸವಿದ್ದೇವೆ. ನನ್ನ ಪತಿಗೂ ಕೆಲಸ ಇಲ್ಲ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಗೌರವಧನ ಶೀಘ್ರ ನೀಡಲಿ.</blockquote><span class="attribution"> ಶ್ರೀದೇವಿ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಮಾರ್ಗದರ್ಶಿ ಕೆಲಸವಿಲ್ಲದ ಕಾರಣ ಮಕ್ಕಳ ಶಾಲಾ ಶಿಕ್ಷಣ ಶುಲ್ಕವನ್ನು ಕಟ್ಟಲು ಸಹ ತೊಂದರೆಯಾಗುತ್ತಿದೆ. ಸರ್ಕಾರ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು</blockquote><span class="attribution">- ಶ್ವೇತಾ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಸರ್ಕಾರ ಗ್ಯಾರಂಟಿಯ ಹೆಸರಲ್ಲಿ ನಮ್ಮಂತವರನ್ನು ಮರೆತೇಬಿಟ್ಟಿದೆ. 390 ಪುರುಷರಿಗೆ ಗೌರವಧನ ನೀಡುತ್ತಿದ್ದೀರಿ ನಮ್ಮನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ?</blockquote><span class="attribution"> ರೇಖಾ. ಹಂಪಿ ಪ್ರವಾಸಿ ಮಾರ್ಗದರ್ಶಿ</span></div>.<div><blockquote>ಹಂಪಿಯಲ್ಲಿ ನುರಿತ ಅನುಭವಿ ಪ್ರವಾಸಿ ಮಾರ್ಗದರ್ಶಿಗಳ ಅಗತ್ಯ ಇದೆ. ಅವರಿಗೆ ಗೌರವಧನ ಪಾವತಿಸುವಂತೆ ಹಣಕಾಸು ಇಲಾಖೆಗೆ ಶಿಫಾರಸು ಮಾಡಲಾಗಿದೆ.</blockquote><span class="attribution">-ಪ್ರಭುಲಿಂಗ ತಳಕೇರಿ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>