ಯಾದಗಿರಿ ನಗರದ ಎಪಿಎಂಸಿ ಮೈದಾನದಲ್ಲಿ ಮಂಗಳವಾರ ಜಾನುವಾರು ಸಂತೆಯಲ್ಲಿ ಕುರಿ ವ್ಯಾಪಾರ ನಡೆಯಿತು
ಬಿತ್ತನೆ ಮಾಡಲು ಹಣ ಇಲ್ಲದ ಕಾರಣ ಕುರಿಗಳನ್ನು ಮಾರಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.
–ಅಯ್ಯಣ್ಣ ಅನವಾರ, ಕುರಿ ಮಾಲಿಕ
ಮುಂಗಾರು ಸಮೀಪಿಸುತ್ತಿದೆ. ಅದಕ್ಕಾಗಿ ಹೊಸ ಎತ್ತುಗಳನ್ನು ಖರೀದಿ ಮಾಡಿದ್ದೇನೆ. ಈ ವರ್ಷ ಬೆಳೆ ಚೆನ್ನಾಗಿ ಬರುವ ವಿಶ್ವಾಸವಿದೆ.
–ಸುರೇಶ, ಉಳ್ಳೆಸುಗೂರು ತಾಂಡಾ ರೈತ
ಕಳೆದ ಬಾರಿ ಬೇರೆ ರಾಜ್ಯದಿಂದ ಕಳಪೆ ಮಟ್ಟದ ಹತ್ತಿ ಬೀಜಗಳು ಸರಬರಾಜು ಮಾಡಿ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.
–ಮಲ್ಲಿಕಾರ್ಜುನರೆಡ್ಡಿ, ವಡವಡಿಗಿ ನಾಯ್ಕಲ್ ಗ್ರಾಮದ ಪ್ರಗತಿಪರ ರೈತ