ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾ ಕನಕ ನೌಕರರ ಸಂಘದ ಸಭೆ 13ರಂದು

Published : 10 ಜುಲೈ 2024, 15:57 IST
Last Updated : 10 ಜುಲೈ 2024, 15:57 IST
ಫಾಲೋ ಮಾಡಿ
Comments

ಯಾದಗಿರಿ: ಜಿಲ್ಲೆಯಲ್ಲಿನ ಕನಕ ನೌಕರರ ಸಂಘದ ರಚನೆ ಹಾಗೂ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಜುಲೈ 13ರಂದು ನಗರದ ಕುರುಬ ಸಂಘದ ಕಚೇರಿಯಲ್ಲಿ ಕಲಬುರಗಿ ವಿಭಾಗೀಯ ಕನಕ ನೌಕರರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕೊಂಕಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದು ಕುರುಬ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆಗೆ ಕುರುಬರ ಪ್ರಾದೇಶಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ ಐಕೂರು, ಮಲ್ಲಿಕಾರ್ಜುನ ಪೂಜಾರಿ ರಾಮಸಮುದ್ರ, ಸಾಬಣ್ಣ ಜುಬೇರ, ಮನೋಹರ ಕಟ್ಟಿಮನಿ, ಮೌನೇಶ ಗೋನಾಲ, ಬನ್ನಪ್ಪ ಮಾಸ್ಟರ್ ಭಾಗವಹಿಸಲಿದ್ದು,  ಜಿಲ್ಲೆಯ ಕನಕ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT