<p><strong>ಬಾರಾಮುಲ್ಲಾ</strong>: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮತದಾರನೊಬ್ಬ ಶಸ್ತ್ರ ತ್ಯಾಗ ಮಾಡಿ, ಮನೆಗೆ ಹಿಂದಿರುಗು ಎಂದು ಲಷ್ಕರ್–ಎ–ತಯಬಾ(ಎಲ್ಇಟಿ) ಭಯೋತ್ಪಾದಕ ಸಂಘಟನೆ ಸೇರಿರುವ ಸಹೋದರನಿಗೆ ಮನವಿ ಮಾಡಿದ್ದಾರೆ.</p><p>ಶಾಂತಿ ನೆಲೆಸುವ ದೃಷ್ಟಿಯಿಂದ ಶರಣಾಗು ಎಂದು ಮತದಾನದ ಬಳಿಕ ಅವರು ಮನವಿ ಮಾಡಿದ್ದಾರೆ.</p><p> ರೌಫ್ ಅಹಮ್ಮದ್ ಲೋನ್ ಎಂಬುವವರ ಸಹೋದರ ಉಮರ್ ಲೋನ್ ಸಕ್ರಿಯ ಲಷ್ಕರ್–ಎ–ತಯಬಾ ಸಂಘಟನೆಯ ಉಗ್ರನಾಗಿದ್ದು, ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.</p><p>‘ಮತದಾನ ನನ್ನ ಹಕ್ಕು, ಹಾಗಾಗಿ, ಮತದಾನ ಮಾಡಿದ್ದೇನೆ. ದಯವಿಟ್ಟು ಎಲ್ಲರೂ ಮತದಾನ ಮಾಡಿ ಎಂದು ನಾನು ಮನವಿ ಮಾಡುತ್ತೇನೆ. ಆ ಬಳಿಕ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮತಗಟ್ಟೆಗೆ ಬನ್ನಿ, ಮತ ಹಾಕಿ’ ಎಂದು ರೌಫ್ ಅಹಮ್ಮದ್ ಲೋನ್ ಹೇಳಿದ್ದಾರೆ.</p><p>ಭದ್ರತಾ ಪಡೆ ಮುಂದೆ ಶರಣಾಗುವಂತೆ ನನ್ನ ಸಹೋದರ ಉಮರ್ಗೆ ಮನವಿ ಮಾಡುತ್ತೇನೆ. ಅದು ಅತ್ಯಂತ ಒಳ್ಳೆಯ ಕೆಲಸವಾಗಲಿದೆ. ಆಗ,ಅವನು ಅವನ ಮನೆ ಮತ್ತು ತಾಯಿ ಬಳಿಗೆ ಬರಬಹುದು’ ಎಂದು ಲೋನ್ ಹೇಳಿದ್ದಾರೆ.</p><p>ಈ ವರ್ಷದ ಏಪ್ರಿಲ್ನಲ್ಲಿ ಉಮರ್ ತಾಯಿ ಸಹ ಶರಣಾಗತಿಗೆ ಮನವಿ ಮಾಡಿದ್ದರು.</p> .ನಿಮ್ಮ ಒಂದು ಮತ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಿಸಲಿದೆ: ಮತದಾರರಿಗೆ ಪ್ರಿಯಾಂಕಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾರಾಮುಲ್ಲಾ</strong>: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮತದಾರನೊಬ್ಬ ಶಸ್ತ್ರ ತ್ಯಾಗ ಮಾಡಿ, ಮನೆಗೆ ಹಿಂದಿರುಗು ಎಂದು ಲಷ್ಕರ್–ಎ–ತಯಬಾ(ಎಲ್ಇಟಿ) ಭಯೋತ್ಪಾದಕ ಸಂಘಟನೆ ಸೇರಿರುವ ಸಹೋದರನಿಗೆ ಮನವಿ ಮಾಡಿದ್ದಾರೆ.</p><p>ಶಾಂತಿ ನೆಲೆಸುವ ದೃಷ್ಟಿಯಿಂದ ಶರಣಾಗು ಎಂದು ಮತದಾನದ ಬಳಿಕ ಅವರು ಮನವಿ ಮಾಡಿದ್ದಾರೆ.</p><p> ರೌಫ್ ಅಹಮ್ಮದ್ ಲೋನ್ ಎಂಬುವವರ ಸಹೋದರ ಉಮರ್ ಲೋನ್ ಸಕ್ರಿಯ ಲಷ್ಕರ್–ಎ–ತಯಬಾ ಸಂಘಟನೆಯ ಉಗ್ರನಾಗಿದ್ದು, ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.</p><p>‘ಮತದಾನ ನನ್ನ ಹಕ್ಕು, ಹಾಗಾಗಿ, ಮತದಾನ ಮಾಡಿದ್ದೇನೆ. ದಯವಿಟ್ಟು ಎಲ್ಲರೂ ಮತದಾನ ಮಾಡಿ ಎಂದು ನಾನು ಮನವಿ ಮಾಡುತ್ತೇನೆ. ಆ ಬಳಿಕ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮತಗಟ್ಟೆಗೆ ಬನ್ನಿ, ಮತ ಹಾಕಿ’ ಎಂದು ರೌಫ್ ಅಹಮ್ಮದ್ ಲೋನ್ ಹೇಳಿದ್ದಾರೆ.</p><p>ಭದ್ರತಾ ಪಡೆ ಮುಂದೆ ಶರಣಾಗುವಂತೆ ನನ್ನ ಸಹೋದರ ಉಮರ್ಗೆ ಮನವಿ ಮಾಡುತ್ತೇನೆ. ಅದು ಅತ್ಯಂತ ಒಳ್ಳೆಯ ಕೆಲಸವಾಗಲಿದೆ. ಆಗ,ಅವನು ಅವನ ಮನೆ ಮತ್ತು ತಾಯಿ ಬಳಿಗೆ ಬರಬಹುದು’ ಎಂದು ಲೋನ್ ಹೇಳಿದ್ದಾರೆ.</p><p>ಈ ವರ್ಷದ ಏಪ್ರಿಲ್ನಲ್ಲಿ ಉಮರ್ ತಾಯಿ ಸಹ ಶರಣಾಗತಿಗೆ ಮನವಿ ಮಾಡಿದ್ದರು.</p> .ನಿಮ್ಮ ಒಂದು ಮತ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಿಸಲಿದೆ: ಮತದಾರರಿಗೆ ಪ್ರಿಯಾಂಕಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>