<p><strong>ನವದೆಹಲಿ:</strong> ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್ನ ವೃತ್ತಿಪರರ ಘಟಕವು ಆಯ್ದ ನಗರಗಳಲ್ಲಿರುವ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸಲು ನಿರ್ಧರಿಸಿದೆ.</p>.<p>ಕೆಲ ನಿರ್ದಿಷ್ಟ ವಲಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ನ ರಾಜಕೀಯ ವಿರೋಧಿಗಳು ರೂಪಿಸಿರುವ ಕಾರ್ಯಸೂಚಿಗೆ ತಿರುಗೇಟು ನೀಡಲು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ (ಎಐಪಿಸಿ) ನಿರ್ಧರಿಸಿದೆ.</p>.<p>ನಗರದ ಪ್ರದೇಶದಲ್ಲಿನ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸುವುದಕ್ಕೆ ಸಂಬಂಧಿಸಿ, ಎರಡು ಬಗೆಯ ಕಾರ್ಯತಂತ್ರಗಳನ್ನು ಎಐಪಿಸಿ ಸಿದ್ಧಪಡಿಸಿದೆ. </p>.<p>ಮೊದಲನೇ ಕಾರ್ಯತಂತ್ರದ ಭಾಗವಾಗಿ, ಎಐಪಿಸಿ ತನ್ನ ರಾಜ್ಯ ಘಟಕಗಳನ್ನು ವಿಸರ್ಜಿಸಿದೆ. ಇದರ ಬದಲಾಗಿ, ಆಯಾ ವಿಷಯಕ್ಕೆ ಸಂಬಂಧಿಸಿದ ಘಟಕಗಳನ್ನು ರಚಿಸಿದೆ. ನಿರ್ದಿಷ್ಟ ವಿಷಯ ಕುರಿತು ಪಕ್ಷ ತಳೆದ ನಿಲುವನ್ನು ಜನರಿಗೆ ತಿಳಿಸಲು ಇದರಿಂದ ಅನಕೂಲವಾಗಲಿದೆ.</p>.<p>ಎರಡನೇ ಕಾರ್ಯತಂತ್ರದಡಿ, ಪ್ರಚಾರ ಕಾರ್ಯದಲ್ಲಿ ಕಂಡುಬಂದ ವಿದ್ಯಮಾನಗಳ ಕುರಿತಂತೆ ಪಕ್ಷದ ಕೇಂದ್ರೀಯ ವಾರ್ರೂಮ್ನೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಕೇಂದ್ರವು ವಹಿಸುವ ನಿರ್ದಿಷ್ಟ ಕಾರ್ಯವನ್ನು ಕಾರ್ಯಗತಗೊಳಿಸುವುದಾಗಿದೆ ಎಂದು ಎಐಪಿಸಿ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.</p>.<p>‘ಸಂಘಟನೆಯ (ಎಐಪಿಸಿ) ಕಾರ್ಯವೈಖರಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ, ಚಾರ್ಟರ್ಡ್ ಅಕೌಂಟಂಟ್ಸ್ (ಸಿಎ), ಐಟಿ ವೃತ್ತಿಪರರು, ಶಿಕ್ಷಣ ತಜ್ಞರು, ಗಣಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರೊಂದಿಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಸಂವಾದಗಳ ಮೂಲಕ ಪಕ್ಷದ ಸಿದ್ಧಾಂತ–ನಿಲುವುಗಳನ್ನು ಜನರಿಗೆ ತಿಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.</p>.<p>‘ನೋಟು ರದ್ದತಿ, ಜಿಎಸ್ಟಿ ಕುರಿತು ಕಾಂಗ್ರೆಸ್ ನಿಲುವನ್ನು ದೇಶದ ಚಾರ್ಟರ್ಡ್ ಅಕೌಂಟಂಟ್ಗಳಿಗೆ ತಿಳಿಸಬೇಕಿತ್ತು. ಇದಕ್ಕಾಗಿ, ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ, ರಾಹುಲ್ ಗಾಂಧಿ ಅವರು ಸಿಎಗಳ ಜೊತೆ ನಡೆಸಿದ ಸಂವಾದದ ವಿಡಿಯೊಗಳನ್ನು ಸುಮಾರು 6 ಲಕ್ಷ ಚಾರ್ಟರ್ಡ್ ಅಕೌಂಟಂಟ್ಗಳೊಂದಿಗೆ ಹಂಚಿಕೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಐಟಿ ವೃತ್ತಿಪರರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದದ ವಿಡಿಯೊಗಳನ್ನು ಒಂದು ಕೋಟಿ ವೃತ್ತಿಪರರೊಂದಿಗೆ ಹಂಚಿಕೊಳ್ಳಲಾಗಿದೆ. ನಾವು ವಿಭಿನ್ನ ಶೈಲಿಯ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಪಕ್ಷದ ನಿಲುವು–ಮುನ್ನೋಟಗಳನ್ನು ದೊಡ್ಡದಾದ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ಇದು ನೆರವಾಗುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವಲ್ಲಿಯೂ ಎಐಪಿಸಿ ನೆರವಾಗುತ್ತಿದೆ. ಪ್ರಣಾಳಿಕೆ ಸಮಿತಿ ಸಾವಿರಾರು ಸಲಹೆಗಳನ್ನು ಸ್ವೀಕರಿಸಿದೆ. ಇವುಗಳನ್ನು ವಿಂಗಡಿಸಿ ಸಮಿತಿಗೆ ಸಲ್ಲಿಸಲಾಗುವುದು ಪ್ರವೀಣ್ ಚಕ್ರವರ್ತಿ ಎಐಪಿಸಿ ಮುಖ್ಯಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್ನ ವೃತ್ತಿಪರರ ಘಟಕವು ಆಯ್ದ ನಗರಗಳಲ್ಲಿರುವ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸಲು ನಿರ್ಧರಿಸಿದೆ.</p>.<p>ಕೆಲ ನಿರ್ದಿಷ್ಟ ವಲಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ನ ರಾಜಕೀಯ ವಿರೋಧಿಗಳು ರೂಪಿಸಿರುವ ಕಾರ್ಯಸೂಚಿಗೆ ತಿರುಗೇಟು ನೀಡಲು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ (ಎಐಪಿಸಿ) ನಿರ್ಧರಿಸಿದೆ.</p>.<p>ನಗರದ ಪ್ರದೇಶದಲ್ಲಿನ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸುವುದಕ್ಕೆ ಸಂಬಂಧಿಸಿ, ಎರಡು ಬಗೆಯ ಕಾರ್ಯತಂತ್ರಗಳನ್ನು ಎಐಪಿಸಿ ಸಿದ್ಧಪಡಿಸಿದೆ. </p>.<p>ಮೊದಲನೇ ಕಾರ್ಯತಂತ್ರದ ಭಾಗವಾಗಿ, ಎಐಪಿಸಿ ತನ್ನ ರಾಜ್ಯ ಘಟಕಗಳನ್ನು ವಿಸರ್ಜಿಸಿದೆ. ಇದರ ಬದಲಾಗಿ, ಆಯಾ ವಿಷಯಕ್ಕೆ ಸಂಬಂಧಿಸಿದ ಘಟಕಗಳನ್ನು ರಚಿಸಿದೆ. ನಿರ್ದಿಷ್ಟ ವಿಷಯ ಕುರಿತು ಪಕ್ಷ ತಳೆದ ನಿಲುವನ್ನು ಜನರಿಗೆ ತಿಳಿಸಲು ಇದರಿಂದ ಅನಕೂಲವಾಗಲಿದೆ.</p>.<p>ಎರಡನೇ ಕಾರ್ಯತಂತ್ರದಡಿ, ಪ್ರಚಾರ ಕಾರ್ಯದಲ್ಲಿ ಕಂಡುಬಂದ ವಿದ್ಯಮಾನಗಳ ಕುರಿತಂತೆ ಪಕ್ಷದ ಕೇಂದ್ರೀಯ ವಾರ್ರೂಮ್ನೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಕೇಂದ್ರವು ವಹಿಸುವ ನಿರ್ದಿಷ್ಟ ಕಾರ್ಯವನ್ನು ಕಾರ್ಯಗತಗೊಳಿಸುವುದಾಗಿದೆ ಎಂದು ಎಐಪಿಸಿ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.</p>.<p>‘ಸಂಘಟನೆಯ (ಎಐಪಿಸಿ) ಕಾರ್ಯವೈಖರಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ, ಚಾರ್ಟರ್ಡ್ ಅಕೌಂಟಂಟ್ಸ್ (ಸಿಎ), ಐಟಿ ವೃತ್ತಿಪರರು, ಶಿಕ್ಷಣ ತಜ್ಞರು, ಗಣಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರೊಂದಿಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಸಂವಾದಗಳ ಮೂಲಕ ಪಕ್ಷದ ಸಿದ್ಧಾಂತ–ನಿಲುವುಗಳನ್ನು ಜನರಿಗೆ ತಿಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.</p>.<p>‘ನೋಟು ರದ್ದತಿ, ಜಿಎಸ್ಟಿ ಕುರಿತು ಕಾಂಗ್ರೆಸ್ ನಿಲುವನ್ನು ದೇಶದ ಚಾರ್ಟರ್ಡ್ ಅಕೌಂಟಂಟ್ಗಳಿಗೆ ತಿಳಿಸಬೇಕಿತ್ತು. ಇದಕ್ಕಾಗಿ, ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ, ರಾಹುಲ್ ಗಾಂಧಿ ಅವರು ಸಿಎಗಳ ಜೊತೆ ನಡೆಸಿದ ಸಂವಾದದ ವಿಡಿಯೊಗಳನ್ನು ಸುಮಾರು 6 ಲಕ್ಷ ಚಾರ್ಟರ್ಡ್ ಅಕೌಂಟಂಟ್ಗಳೊಂದಿಗೆ ಹಂಚಿಕೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಐಟಿ ವೃತ್ತಿಪರರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದದ ವಿಡಿಯೊಗಳನ್ನು ಒಂದು ಕೋಟಿ ವೃತ್ತಿಪರರೊಂದಿಗೆ ಹಂಚಿಕೊಳ್ಳಲಾಗಿದೆ. ನಾವು ವಿಭಿನ್ನ ಶೈಲಿಯ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಪಕ್ಷದ ನಿಲುವು–ಮುನ್ನೋಟಗಳನ್ನು ದೊಡ್ಡದಾದ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ಇದು ನೆರವಾಗುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವಲ್ಲಿಯೂ ಎಐಪಿಸಿ ನೆರವಾಗುತ್ತಿದೆ. ಪ್ರಣಾಳಿಕೆ ಸಮಿತಿ ಸಾವಿರಾರು ಸಲಹೆಗಳನ್ನು ಸ್ವೀಕರಿಸಿದೆ. ಇವುಗಳನ್ನು ವಿಂಗಡಿಸಿ ಸಮಿತಿಗೆ ಸಲ್ಲಿಸಲಾಗುವುದು ಪ್ರವೀಣ್ ಚಕ್ರವರ್ತಿ ಎಐಪಿಸಿ ಮುಖ್ಯಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>